ಕಿಕ್ಕೇರಿ: ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಜತೆಗೆ ಅರಣ್ಯ ಸಂರಕ್ಷಣೆ ಮಾಡುವುದು ಆಂದೋಲನದಂತೆ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಅಭಿಪ್ರಾಯಪಟ್ಟು.
ಕೋಡಿಮಾರನಹಳ್ಳಿಯಲ್ಲಿ ಜಲಾನಯನ ಅಭಿವದ್ಧಿ ಇಲಾಖೆಯ ಅರಣ್ಯ ಘಟಕದ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಹೊಂಗೆ, ತೇಗ, ಹೆಬ್ಬೇವು, ಸಿಲ್ವರ್, ಬೇವು, ರಕ್ತಚಂದನ ಸೇರಿದಂತೆ ವಿವಿಧ ಬಗೆಯ 6ಸಾವಿರಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಮಾನವನ ದುರಾಸೆಯಿಂದ ಮರಗಿಡಗಳನ್ನು ಕತ್ತರಿಸಿ ಕಾಡನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ತಿನ್ನುವ ಆಹಾರ ಸೇರಿದಂತೆ ಇಡೀ ಪರಿಸರವೇ ಕಲುಷಿತವಾಗುತ್ತಿದೆ. ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನದ ಹೆಚ್ಚಳವಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಅನಾಹುತವು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಕಡೆಗೆ ಧಡವಾದ ಹೆಜ್ಜೆಯನ್ನು ಹಾಕಬೇಕಿದೆ. ಕೈಗಾರಿಕರಣದಿಂದ ಹೊರ ಬರುವ ವಿಷಯುಕ್ತ ಅನಿಲಪದಾರ್ಥಗಳು ಪರಿಸರಕ್ಕೆ ಸೇರದಂತೆ ಎಚ್ಚರ ವಹಿಸಬೇಕು ಹಾಗೂ ಸಾಧ್ಯವಾದಷ್ಟು ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಶುದ್ಧವಾದ ಆಹಾರ ಸೇವನೆ ಮಾಡಬೇಕು. ನಾವು ವಾಸಿಸುವ ಜಾಗ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಚೊಕ್ಕವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಲಾನಯನ ವಿಭಾಗದ ಅರಣ್ಯ ಘಟಕದ ವಲಯ ಅರಣ್ಯಾಧಿಕಾರಿ ಎಂ.ವಿ.ವೆಂಕಟಾಚಲ, ನಾಗಮಂಗಲ ವಲಯ ಅರಣ್ಯಾಧಿಕಾರಿ ಪಿ.ಲಕ್ಷ್ಮೀಶ್, ತಾಪಂ ಸದಸ್ಯೆ ಪದ್ಮಮ್ಮ ಸಣ್ಣನಿಂಗೇಗೌಡ, ಮುಖಂಡ ಕೋಡಿಮಾರನಹಳ್ಳಿ ಬಾಬು, ರೈತ ಮುಖಂಡ ಕಾರಿಗನಹಳ್ಳಿ ಕುಮಾರ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಪ್ರಗತಿಪರ ರೈತರು ಮತ್ತಿತರರು ಭಾಗವಹಿಸಿದ್ದರು.
ಕೋಡಿಮಾರನಹಳ್ಳಿಯಲ್ಲಿ ಜಲಾನಯನ ಅಭಿವದ್ಧಿ ಇಲಾಖೆಯ ಅರಣ್ಯ ಘಟಕದ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಹೊಂಗೆ, ತೇಗ, ಹೆಬ್ಬೇವು, ಸಿಲ್ವರ್, ಬೇವು, ರಕ್ತಚಂದನ ಸೇರಿದಂತೆ ವಿವಿಧ ಬಗೆಯ 6ಸಾವಿರಕ್ಕೂ ಹೆಚ್ಚು ಸಸಿಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಮಾನವನ ದುರಾಸೆಯಿಂದ ಮರಗಿಡಗಳನ್ನು ಕತ್ತರಿಸಿ ಕಾಡನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ನಾವು ಕುಡಿಯುವ ನೀರು, ಉಸಿರಾಡುವ ಗಾಳಿ, ತಿನ್ನುವ ಆಹಾರ ಸೇರಿದಂತೆ ಇಡೀ ಪರಿಸರವೇ ಕಲುಷಿತವಾಗುತ್ತಿದೆ. ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನದ ಹೆಚ್ಚಳವಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಅನಾಹುತವು ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಕಡೆಗೆ ಧಡವಾದ ಹೆಜ್ಜೆಯನ್ನು ಹಾಕಬೇಕಿದೆ. ಕೈಗಾರಿಕರಣದಿಂದ ಹೊರ ಬರುವ ವಿಷಯುಕ್ತ ಅನಿಲಪದಾರ್ಥಗಳು ಪರಿಸರಕ್ಕೆ ಸೇರದಂತೆ ಎಚ್ಚರ ವಹಿಸಬೇಕು ಹಾಗೂ ಸಾಧ್ಯವಾದಷ್ಟು ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ ಶುದ್ಧವಾದ ಆಹಾರ ಸೇವನೆ ಮಾಡಬೇಕು. ನಾವು ವಾಸಿಸುವ ಜಾಗ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಚೊಕ್ಕವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಲಾನಯನ ವಿಭಾಗದ ಅರಣ್ಯ ಘಟಕದ ವಲಯ ಅರಣ್ಯಾಧಿಕಾರಿ ಎಂ.ವಿ.ವೆಂಕಟಾಚಲ, ನಾಗಮಂಗಲ ವಲಯ ಅರಣ್ಯಾಧಿಕಾರಿ ಪಿ.ಲಕ್ಷ್ಮೀಶ್, ತಾಪಂ ಸದಸ್ಯೆ ಪದ್ಮಮ್ಮ ಸಣ್ಣನಿಂಗೇಗೌಡ, ಮುಖಂಡ ಕೋಡಿಮಾರನಹಳ್ಳಿ ಬಾಬು, ರೈತ ಮುಖಂಡ ಕಾರಿಗನಹಳ್ಳಿ ಕುಮಾರ್, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಪ್ರಗತಿಪರ ರೈತರು ಮತ್ತಿತರರು ಭಾಗವಹಿಸಿದ್ದರು.