ನೆಲ್ಯಾಡಿ: ಯುವ ಜನತೆ ಕಲೆ, ಸಂಸ್ಕೃತಿಗಳನ್ನು ಉಳಿಸುವ ಜತೆಗೆ ಸಮಾಜಪಿಡುಗುಗಳ ವಿರುದ್ಧ ಹೋರಾಡುವ ಮನೋಭಾವ ಬೆಳೆಸಸಿಕೊಳ್ಳಬೇಕು. ಇದರಿಂದ ನಮ್ಮ ದೇಶ ಸದೃಢವಾಡಿ ಬೆಳೆಯಲು ಸಾಧ್ಯವಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ನುಡಿದರು.
ದ.ಕ. ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಸ್ಕಂದ ಯುವಕ ಮಂಡಲ ದೋಂತಿಲ, ಕೌಕ್ರಾಡಿ ಮತ್ತು ನೆಲ್ಯಾಡಿ ಗಾಂಧಿ ಮೈದಾನ ಗೆಳೆಯರ ಬಳಗ ಹಾಗೂ ತಾಲೂಕು ಯುವಜನ ಮೇಳ ಸಮಿತಿ ನೆಲ್ಯಾಡಿ ಆಶ್ರಯದಲ್ಲಿ ನಡೆಯುವ ಪುತ್ತೂರು ತಾಲೂಕು ಯುವಜನ ಮೇಳವನ್ನು ನೆಲ್ಯಾಡಿಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಯುವಕ, ಯುವತಿ ಮಂಡಲಗಳೂ ಸಕ್ರಿಯವಾಗಿ ಕಾರ್ಯಾಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಾಮೂಹಿಕ ಕವಾಯತುಗಳ ಪ್ರದರ್ಶನ ಉದ್ಘಾಟಿಸಿದರು. ಬಳಿಕ ಮಾತನಾಡಿ, ಯುವಜನ ಮೇಳಗಳು ಭಾವೈಕ್ಯದ ಸಂಕೇತ ವಾಗಿದೆ ಎಂದರು. ಹಾಗೂ ಈ ಸಂದರ್ಭ ಯುವ ಜನಮೇಳಕ್ಕೆ ತಾ.ಪಂ.ನಿಂದ 15 ಸಾವಿರ ರೂ.ಅನುದಾನ ಬಿಡುಗಡೆ ಮಾಡುವುದಾಗಿಯೂ ಅವರು ಭರವಸೆ ನೀಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಗೌಡ ಆಲಡ್ಕ ಅವರು ಗ್ರಾಮೀಣ ಸೊಬಗು ಬಿಂಬಿಸುವ ಕುಟೀರವನ್ನು , ಉಪ ವಿಭಾಗೀಯ ಆಯುಕ್ತ ಕಷ್ಣಮೂರ್ತಿ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಬಾಲಕಷ್ಣ ಬಾಣಜಾಲು, ಬೆಳ್ತಂಗಡಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್, ತಹಸೀಲ್ದಾರ್ ಕುಳ್ಳೇಗೌಡ, ಯು.ಪಿ.ವರ್ಗೀಸ್ ಶುಭಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಯಸ್. ಯುವಜನ ಮೇಳದ ಹಾಡುಗಳನ್ನೊಳಗೊಂಡ ಸೀಡಿ ಬಿಡುಗಡೆಗೊಳಿಸಿದರು.
ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾದಿಕಾರಿ ಮಾಧವ ಬಿ.ಕೆ., ಮಾತನಾಡಿ ಯುವಕ, ಯುವತಿಯರಿಗೆ ಸಂಸ್ಕೃತಿಯ ಅರಿವು ಮೂಡಿಸಲು ಯುವಜನ ಮೇಳ ಆಯೋಜಿಸಲಾಗುತ್ತಿದೆ. ಇದಕ್ಕೆ ಜಿ.ಪಂ.ನಿಂದ 50 ಸಾವಿರ ರೂ.ಅನುದಾನ ನೀಡಲಾಗುತ್ತಿದೆ ಎಂದರು.
ತಾ.ಪಂ.ಉಪಾಧ್ಯಕ್ಷ ಬಾಬು ಮಾದೋಡಿ,ತಾ.ಪಂ.ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಧಾಕರ ರಾವ್, ಗೌರವಾಧ್ಯಕ್ಷ ದಿನೇಶ್ ಮೆದು, ತಾಲೂಕು ಯುವಜನ ಮೇಳ ಸಮಿತಿ ನೆಲ್ಯಾಡಿ ಇದರ ಅಧ್ಯಕ್ಷೆ ಉಷಾ ಅಂಚನ್, ಕಾರ್ಯದರ್ಶಿ ಉದಯಕುಮಾರ್ ದೋಂತಿಲ, ಕೋಶಾಧಿಕಾರಿ ಸರ್ವೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಅಂಚನ್, ಜಯಾನಂದ ಬಂಟ್ರಿಯಾಲ್, ವಿಶ್ವನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಸರ್ವೋತ್ತಮ ಗೌಡ, ಪಿಡಿಒ ದೇವರಾಜ್ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಅಬ್ರಹಾಂ ವರ್ಗೀಸ್ ಸ್ವಾಗತಿಸಿದರು. ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು. ಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಸೆಂಟ್ ಜಾರ್ಜ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಈ ಯುವಜನ ಮೇಳವು ಎರಡು ದಿನಗಳ ಕಾಲ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೂ ಮೊದಲು ಮೆರವಣಿಗೆ, ಆಕರ್ಷಕ ಕವಾಯತು ನಡೆಯಿತು.
ದ.ಕ. ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಸ್ಕಂದ ಯುವಕ ಮಂಡಲ ದೋಂತಿಲ, ಕೌಕ್ರಾಡಿ ಮತ್ತು ನೆಲ್ಯಾಡಿ ಗಾಂಧಿ ಮೈದಾನ ಗೆಳೆಯರ ಬಳಗ ಹಾಗೂ ತಾಲೂಕು ಯುವಜನ ಮೇಳ ಸಮಿತಿ ನೆಲ್ಯಾಡಿ ಆಶ್ರಯದಲ್ಲಿ ನಡೆಯುವ ಪುತ್ತೂರು ತಾಲೂಕು ಯುವಜನ ಮೇಳವನ್ನು ನೆಲ್ಯಾಡಿಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಯುವಕ, ಯುವತಿ ಮಂಡಲಗಳೂ ಸಕ್ರಿಯವಾಗಿ ಕಾರ್ಯಾಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸ ಮಾಡಬೇಕಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಪ್ರಭಾ ಸಾಮೂಹಿಕ ಕವಾಯತುಗಳ ಪ್ರದರ್ಶನ ಉದ್ಘಾಟಿಸಿದರು. ಬಳಿಕ ಮಾತನಾಡಿ, ಯುವಜನ ಮೇಳಗಳು ಭಾವೈಕ್ಯದ ಸಂಕೇತ ವಾಗಿದೆ ಎಂದರು. ಹಾಗೂ ಈ ಸಂದರ್ಭ ಯುವ ಜನಮೇಳಕ್ಕೆ ತಾ.ಪಂ.ನಿಂದ 15 ಸಾವಿರ ರೂ.ಅನುದಾನ ಬಿಡುಗಡೆ ಮಾಡುವುದಾಗಿಯೂ ಅವರು ಭರವಸೆ ನೀಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಗೌಡ ಆಲಡ್ಕ ಅವರು ಗ್ರಾಮೀಣ ಸೊಬಗು ಬಿಂಬಿಸುವ ಕುಟೀರವನ್ನು , ಉಪ ವಿಭಾಗೀಯ ಆಯುಕ್ತ ಕಷ್ಣಮೂರ್ತಿ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಬಾಲಕಷ್ಣ ಬಾಣಜಾಲು, ಬೆಳ್ತಂಗಡಿ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್, ತಹಸೀಲ್ದಾರ್ ಕುಳ್ಳೇಗೌಡ, ಯು.ಪಿ.ವರ್ಗೀಸ್ ಶುಭಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಯಸ್. ಯುವಜನ ಮೇಳದ ಹಾಡುಗಳನ್ನೊಳಗೊಂಡ ಸೀಡಿ ಬಿಡುಗಡೆಗೊಳಿಸಿದರು.
ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾದಿಕಾರಿ ಮಾಧವ ಬಿ.ಕೆ., ಮಾತನಾಡಿ ಯುವಕ, ಯುವತಿಯರಿಗೆ ಸಂಸ್ಕೃತಿಯ ಅರಿವು ಮೂಡಿಸಲು ಯುವಜನ ಮೇಳ ಆಯೋಜಿಸಲಾಗುತ್ತಿದೆ. ಇದಕ್ಕೆ ಜಿ.ಪಂ.ನಿಂದ 50 ಸಾವಿರ ರೂ.ಅನುದಾನ ನೀಡಲಾಗುತ್ತಿದೆ ಎಂದರು.
ತಾ.ಪಂ.ಉಪಾಧ್ಯಕ್ಷ ಬಾಬು ಮಾದೋಡಿ,ತಾ.ಪಂ.ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಗಂಗಮ್ಮ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಧಾಕರ ರಾವ್, ಗೌರವಾಧ್ಯಕ್ಷ ದಿನೇಶ್ ಮೆದು, ತಾಲೂಕು ಯುವಜನ ಮೇಳ ಸಮಿತಿ ನೆಲ್ಯಾಡಿ ಇದರ ಅಧ್ಯಕ್ಷೆ ಉಷಾ ಅಂಚನ್, ಕಾರ್ಯದರ್ಶಿ ಉದಯಕುಮಾರ್ ದೋಂತಿಲ, ಕೋಶಾಧಿಕಾರಿ ಸರ್ವೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಅಂಚನ್, ಜಯಾನಂದ ಬಂಟ್ರಿಯಾಲ್, ವಿಶ್ವನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಸರ್ವೋತ್ತಮ ಗೌಡ, ಪಿಡಿಒ ದೇವರಾಜ್ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಅಬ್ರಹಾಂ ವರ್ಗೀಸ್ ಸ್ವಾಗತಿಸಿದರು. ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ವಂದಿಸಿದರು. ಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಸೆಂಟ್ ಜಾರ್ಜ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಈ ಯುವಜನ ಮೇಳವು ಎರಡು ದಿನಗಳ ಕಾಲ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೂ ಮೊದಲು ಮೆರವಣಿಗೆ, ಆಕರ್ಷಕ ಕವಾಯತು ನಡೆಯಿತು.