ಪುತ್ತೂರು : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಹಸ್ತಾಂತರಿಸಲಾಯಿತು.
ಪ್ರವೀಣ್ ಮನೆಗೆ ಭೇಟಿ ನೀಡಿ, ಪತ್ನಿ ನೂತನಾ, ತಾಯಿ ರತ್ನಾವತಿ ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಚೆಕ್ ಹಸ್ತಾಂತರಿಸಿದರು. ಇದರಲ್ಲಿ 25 ಲಕ್ಷ ರೂಪಾಯಿಗಳನ್ನು ಬಿಜೆಪಿ ವತಿಯಿಂದ ನೀಡಲಾಗಿದ್ದರೆ, 25 ಲಕ್ಷವನ್ನು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗಿದೆ. ಪಕ್ಷದ ಚೆಕ್ನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು. ಸರಕಾರದ ನೆರವಿನ ಚೆಕ್ನ್ನು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದರೆ, ಸಚಿವರು, ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.
1 ಕೋಟಿ ಸಂಗ್ರಹದ ಗುರಿ
ಸರಕಾರ 25 ಲಕ್ಷ ರೂಪಾಯಿ ನೀಡಿದ ಹೊರತಾಗಿಯೂ ಬಿಜೆಪಿ ಮತ್ತು ಪರಿವಾರ ಸಂಘಟನೆಗಳಿಂದಲೂ ಹಣ ಸಂಗ್ರಹಿಸಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಸುಳ್ಯ ಮಂಡಲ ಬಿಜೆಪಿಯು ಪಕ್ಷ ಮತ್ತು ಪರಿವಾರ ಸಂಘಟನೆಗಳ ಜಂಟಿ ಪ್ರಯತ್ನದ ಫಲವಾಗಿ 50 ಲಕ್ಷ ರೂ. ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ಒಟ್ಟಾರೆಯಾಗಿ ಪ್ರವೀಣ್ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮುಖಂಡರು ಮಾತುಕತೆ ನಡೆಸಿದ್ದಾರೆ.
ಪತ್ನಿ, ತಾಯಿ ಜಂಟಿ ಖಾತೆ
ಕೊಲೆ ನಡೆದ 24 ಗಂಟೆಯಲ್ಲಿ ಪ್ರವೀಣ್ ಪತ್ನಿ ನೂತನಾ ಅವರ ಹೆಸರಿನ ಬ್ಯಾಂಕ್ ಖಾತೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಈಗಾಗಲೇ ಈ ಖಾತೆಗೆ ಒಂದಷ್ಟು ಹಣ ಜಮೆಯಾಗಿದೆ ಎಂದು ಗೊತ್ತಾಗಿದೆ. ಗುರುವಾರ ಮನೆಗೆ ಭೇಟಿ ನೀಡಿದ ಮುಖಂಡರು ಕೂಡ ಪರಿಹಾರ ಧನ ನೀಡಿದ್ದಾರೆ. ಈ ನಡುವೆ, ನೂತನಾ ಮತ್ತು ಅವರ ಅತ್ತೆ ರತ್ನಾವತಿ (ಪ್ರವೀಣ್ ತಾಯಿ) ಅವರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಸಿದ್ಧತೆ ಮಾಡಲಾಗಿದೆ. ಜಂಟಿ ಖಾತೆಗೆ ಹಣ ಸಂದಾಯವಾಗುವಂತೆ ಕ್ರಮ ವಹಿಸಲಾಗುತ್ತದೆ. ಸಾರ್ವಜನಿಕರಿಂದ ಬರುವ ನಿಧಿಗೆ ಪತ್ನಿ ಮತ್ತು ತಾಯಿ ಇಬ್ಬರೂ ಪಾಲುದಾರರಾಗುವುದು ಈ ಮೂಲಕ ಭವಿಷ್ಯದಲ್ಲಿಇಡೀ ಕುಟುಂಬಕ್ಕೆ ಆಧಾರವಾಗುವುದು ಇದರ ಉದ್ದೇಶ. ಪ್ರವೀಣ್ ತಾಯಿಗೂ ಆರೋಗ್ಯ ಸಮಸ್ಯೆ ಇದ್ದು, ತಂದೆ ಹೃದಯದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜತೆಗೆ ಕುಟುಂಬಕ್ಕೆ ನೂತನ ಮನೆ ನಿರ್ಮಿಸುವ ಪ್ರವೀಣ್ ಕನಸು ಕೂಡ ನನಸಾಗಬೇಕಿದೆ.
ಪ್ರವೀಣ್ ಮನೆಗೆ ಭೇಟಿ ನೀಡಿ, ಪತ್ನಿ ನೂತನಾ, ತಾಯಿ ರತ್ನಾವತಿ ಅವರೊಂದಿಗೆ ಮಾತುಕತೆ ನಡೆಸಿ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು ಚೆಕ್ ಹಸ್ತಾಂತರಿಸಿದರು. ಇದರಲ್ಲಿ 25 ಲಕ್ಷ ರೂಪಾಯಿಗಳನ್ನು ಬಿಜೆಪಿ ವತಿಯಿಂದ ನೀಡಲಾಗಿದ್ದರೆ, 25 ಲಕ್ಷವನ್ನು ಸರಕಾರದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗಿದೆ. ಪಕ್ಷದ ಚೆಕ್ನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಸ್ತಾಂತರಿಸಿದರು. ಸರಕಾರದ ನೆರವಿನ ಚೆಕ್ನ್ನು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಸ್ತಾಂತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದರೆ, ಸಚಿವರು, ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.
1 ಕೋಟಿ ಸಂಗ್ರಹದ ಗುರಿ
ಸರಕಾರ 25 ಲಕ್ಷ ರೂಪಾಯಿ ನೀಡಿದ ಹೊರತಾಗಿಯೂ ಬಿಜೆಪಿ ಮತ್ತು ಪರಿವಾರ ಸಂಘಟನೆಗಳಿಂದಲೂ ಹಣ ಸಂಗ್ರಹಿಸಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಸುಳ್ಯ ಮಂಡಲ ಬಿಜೆಪಿಯು ಪಕ್ಷ ಮತ್ತು ಪರಿವಾರ ಸಂಘಟನೆಗಳ ಜಂಟಿ ಪ್ರಯತ್ನದ ಫಲವಾಗಿ 50 ಲಕ್ಷ ರೂ. ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ಒಟ್ಟಾರೆಯಾಗಿ ಪ್ರವೀಣ್ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂಪಾಯಿಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮುಖಂಡರು ಮಾತುಕತೆ ನಡೆಸಿದ್ದಾರೆ.
ಪತ್ನಿ, ತಾಯಿ ಜಂಟಿ ಖಾತೆ
ಕೊಲೆ ನಡೆದ 24 ಗಂಟೆಯಲ್ಲಿ ಪ್ರವೀಣ್ ಪತ್ನಿ ನೂತನಾ ಅವರ ಹೆಸರಿನ ಬ್ಯಾಂಕ್ ಖಾತೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಈಗಾಗಲೇ ಈ ಖಾತೆಗೆ ಒಂದಷ್ಟು ಹಣ ಜಮೆಯಾಗಿದೆ ಎಂದು ಗೊತ್ತಾಗಿದೆ. ಗುರುವಾರ ಮನೆಗೆ ಭೇಟಿ ನೀಡಿದ ಮುಖಂಡರು ಕೂಡ ಪರಿಹಾರ ಧನ ನೀಡಿದ್ದಾರೆ. ಈ ನಡುವೆ, ನೂತನಾ ಮತ್ತು ಅವರ ಅತ್ತೆ ರತ್ನಾವತಿ (ಪ್ರವೀಣ್ ತಾಯಿ) ಅವರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಸಿದ್ಧತೆ ಮಾಡಲಾಗಿದೆ. ಜಂಟಿ ಖಾತೆಗೆ ಹಣ ಸಂದಾಯವಾಗುವಂತೆ ಕ್ರಮ ವಹಿಸಲಾಗುತ್ತದೆ. ಸಾರ್ವಜನಿಕರಿಂದ ಬರುವ ನಿಧಿಗೆ ಪತ್ನಿ ಮತ್ತು ತಾಯಿ ಇಬ್ಬರೂ ಪಾಲುದಾರರಾಗುವುದು ಈ ಮೂಲಕ ಭವಿಷ್ಯದಲ್ಲಿಇಡೀ ಕುಟುಂಬಕ್ಕೆ ಆಧಾರವಾಗುವುದು ಇದರ ಉದ್ದೇಶ. ಪ್ರವೀಣ್ ತಾಯಿಗೂ ಆರೋಗ್ಯ ಸಮಸ್ಯೆ ಇದ್ದು, ತಂದೆ ಹೃದಯದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜತೆಗೆ ಕುಟುಂಬಕ್ಕೆ ನೂತನ ಮನೆ ನಿರ್ಮಿಸುವ ಪ್ರವೀಣ್ ಕನಸು ಕೂಡ ನನಸಾಗಬೇಕಿದೆ.