ವಿಜಯ್ ಕೋಟ್ಯಾನ್
ಮಂಗಳೂರು: ರಾಜ್ಯದಲ್ಲಿ ಬಿಪಿಎಲ್ ಪಡಿತರ ಪಡೆಯಲು ಅರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಎಪಿಎಲ್ ಅಕ್ಕಿ ಪಡೆಯೋಣ ಅಂದರೆ ರೇಷನ್ ಅಂಗಡಿಯಲ್ಲಿ ಎಪಿಎಲ್ ಅಕ್ಕಿಯೇ ಬಂದಿಲ್ಲ. ರಾಜ್ಯದಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದೆ ಹಲವು ತಿಂಗಳುಗಳೇ ಕಳೆದಿದ್ದು, ಎಪಿಎಲ್ ಅಕ್ಕಿಗೆ ಕಾರ್ಡ್ದಾರರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ 1.51 ಕೋಟಿ ಬಿಪಿಎಲ್ ಕಾರ್ಡ್ದಾರರಿದ್ದರೆ, 24 ಲಕ್ಷಕ್ಕೂ ಅಧಿಕ ಎಪಿಎಲ್ ಕಾರ್ಡ್ದಾರರಿದ್ದಾರೆ. ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಅಧಿಕಾರಿಗಳು ಎಪಿಎಲ್ ಕಾರ್ಡ್ದಾರರಿಗೆ ಅಕ್ಕಿಯ ಪ್ರಮಾಣದ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮರ್ಪಕವಾಗಿ ಅಕ್ಕಿ ವಿತರಣೆಯಾಗುತ್ತಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 12,048 ವಲಸೆ ಕಾರ್ಮಿಕರು ಪೋರ್ಟಲ್ ಮೂಲಕ 2,242 ಕ್ವಿಂಟಾಲ್ ಅಕ್ಕಿ ಪಡೆದುಕೊಂಡಿದ್ದಾರೆ. ಪ್ರತೀ ತಿಂಗಳ 25ರ ನಂತರ ಈ ಅಕ್ಕಿ ವಿತರಣೆ ಮಾಡಲಾಗುತ್ತಿದೆಯಾದರೂ ಈ ಜಿಲ್ಲೆಯಲ್ಲೇ ವಾಸ್ತವ್ಯವಿರುವವರು ಕೊನೇ ಕ್ಷಣದಲ್ಲಿಅಕ್ಕಿ ಸಿಗದೆ ವಾಪಸಾಗುತ್ತಿದ್ದಾರೆ.
ರಾಜ್ಯದಲ್ಲಿಬಿಪಿಎಲ್ ಪಡಿತರಿಗೆ 5 ಕೆಜಿ ಅಕ್ಕಿ ಈಗಾಗಲೇ ವಿತರಣೆಯಾಗಿದ್ದು, ಇನ್ನು 5 ಕೆಜಿಯ ಅಕ್ಕಿ ಹಣ ವಾರದೊಳಗೆ ಎಲ್ಲರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,78,732 ಬಿಪಿಎಲ್ ಕಾರ್ಡ್ದಾರರಿಗೆ 17,30,20,030 ಕೋಟಿ ರೂ. ಮಂಜೂರಾಗಿದ್ದು ಖಾತೆಗೆ ಜಮೆಯಾಗಲಿದೆ. ಬಿಪಿಎಲ್ ಪಟ್ಟಿಯಲ್ಲಿರುವ 6,158 ಮಂದಿ ಅಂತ್ಯೋದಯ ಕಾರ್ಡ್ದಾರರಾಗಿದ್ದು, 6,258 ಮಂದಿ 3 ತಿಂಗಳಿನಿಂದ ಪಡಿತರ ಪಡೆಯದವರು. 18,023 ಮಂದಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಉಳಿದ 2,48,293 ಮಂದಿಯ ಖಾತೆಗೆ ಹಣ ಜಮೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಎಪಿಎಲ್ ಕಾರ್ಡ್ದಾರರಿಗೆ ನಿರ್ಲಕ್ಷ್ಯ ಸಲ್ಲದು
ರಾಜ್ಯದಲ್ಲಿಅಕ್ರಮವಾಗಿ ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ನಾವು ಬಿಪಿಎಲ್ ಕಾರ್ಡ್ಗೆ ಅರ್ಹವಾಗಿದ್ದರೂ ನಮಗೆ ಇನ್ನೂ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಹಾಗಂತ ಎಪಿಎಲ್ ಅಕ್ಕಿ ಖರೀದಿಸೋಣ ಎಂದು ಪಡಿತರ ಅಂಗಡಿಗೆ ಹೋದರೆ ಎಪಿಎಲ್ ಅಕ್ಕಿಯೂ ಸಿಗುತ್ತಿಲ್ಲ. ನಮ್ಮಂತಹ ಬಡಪಾಯಿಗಳ ಮೇಲೆ ಸರಕಾರದ ಈ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಎಪಿಎಲ್ ಕಾರ್ಡ್ದಾರರಾದ ಸರೋಜಿನಿ ಮಣ್ಣಗುಡ್ಡ.
ಮಂಗಳೂರು: ರಾಜ್ಯದಲ್ಲಿ ಬಿಪಿಎಲ್ ಪಡಿತರ ಪಡೆಯಲು ಅರ್ಹರಾಗಿದ್ದರೂ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಎಪಿಎಲ್ ಅಕ್ಕಿ ಪಡೆಯೋಣ ಅಂದರೆ ರೇಷನ್ ಅಂಗಡಿಯಲ್ಲಿ ಎಪಿಎಲ್ ಅಕ್ಕಿಯೇ ಬಂದಿಲ್ಲ. ರಾಜ್ಯದಲ್ಲಿ ಎಪಿಎಲ್ ಕಾರ್ಡ್ದಾರರಿಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದೆ ಹಲವು ತಿಂಗಳುಗಳೇ ಕಳೆದಿದ್ದು, ಎಪಿಎಲ್ ಅಕ್ಕಿಗೆ ಕಾರ್ಡ್ದಾರರು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ಹಣ ಕೊಡ್ತೇವೆ ಅಂದರು ಅಕ್ಕಿ ಸಿಗುತ್ತಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,73,571 ಎಪಿಎಲ್ ಕಾರ್ಡ್ಗಳಿದ್ದು, ಈವರೆಗೆ 6,459 ಕಾರ್ಡ್ಗೆ ಮಾತ್ರ ಅಕ್ಕಿ ವಿತರಣೆಯಾಗಿದೆ. ಎಪಿಎಲ್ ಕಾರ್ಡ್ನಲ್ಲಿ ಒಬ್ಬ ವ್ಯಕ್ತಿಗೆ 5 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಗೆ ಗರಿಷ್ಠ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂ.ಗಳಂತೆ ನೀಡಲಾಗುತ್ತಿದೆ. ಆದರೆ ಹಣ ಕೊಡುತ್ತೇವೆ ಎಂದು ಹೇಳಿದರೂ ಎಪಿಎಲ್ ಅಕ್ಕಿ ಮಾತ್ರ ಸಿಗುತ್ತಿಲ್ಲ.ಪೋರ್ಟಲ್ ವ್ಯವಸ್ಥೆಯಿಂದ ಮಿಸ್ಸಿಂಗ್
ರಾಜ್ಯ ಪಡಿತರ ವಿತರಣೆಯಲ್ಲಿ ಪೋರ್ಟಲ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಯಾವುದೋ ಜಿಲ್ಲೆಯ ಪಡಿತರ ಸೊತ್ತುಗಳನ್ನು ಇನ್ಯಾವುದೇ ಜಿಲ್ಲೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರಿಂದ ಆ ಜಿಲ್ಲೆಯಲ್ಲೇ ವಾಸ್ತವ್ಯವಿರುವವರಿಗೆ ಕೊನೇ ಕ್ಷಣದಲ್ಲಿ ಪಡಿತರ ಸಿಗದಂತಾಗುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 12,048 ವಲಸೆ ಕಾರ್ಮಿಕರು ಪೋರ್ಟಲ್ ಮೂಲಕ 2,242 ಕ್ವಿಂಟಾಲ್ ಅಕ್ಕಿ ಪಡೆದುಕೊಂಡಿದ್ದಾರೆ. ಪ್ರತೀ ತಿಂಗಳ 25ರ ನಂತರ ಈ ಅಕ್ಕಿ ವಿತರಣೆ ಮಾಡಲಾಗುತ್ತಿದೆಯಾದರೂ ಈ ಜಿಲ್ಲೆಯಲ್ಲೇ ವಾಸ್ತವ್ಯವಿರುವವರು ಕೊನೇ ಕ್ಷಣದಲ್ಲಿಅಕ್ಕಿ ಸಿಗದೆ ವಾಪಸಾಗುತ್ತಿದ್ದಾರೆ.
ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಹಣ
ರಾಜ್ಯದಲ್ಲಿಬಿಪಿಎಲ್ ಪಡಿತರಿಗೆ 5 ಕೆಜಿ ಅಕ್ಕಿ ಈಗಾಗಲೇ ವಿತರಣೆಯಾಗಿದ್ದು, ಇನ್ನು 5 ಕೆಜಿಯ ಅಕ್ಕಿ ಹಣ ವಾರದೊಳಗೆ ಎಲ್ಲರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,78,732 ಬಿಪಿಎಲ್ ಕಾರ್ಡ್ದಾರರಿಗೆ 17,30,20,030 ಕೋಟಿ ರೂ. ಮಂಜೂರಾಗಿದ್ದು ಖಾತೆಗೆ ಜಮೆಯಾಗಲಿದೆ. ಬಿಪಿಎಲ್ ಪಟ್ಟಿಯಲ್ಲಿರುವ 6,158 ಮಂದಿ ಅಂತ್ಯೋದಯ ಕಾರ್ಡ್ದಾರರಾಗಿದ್ದು, 6,258 ಮಂದಿ 3 ತಿಂಗಳಿನಿಂದ ಪಡಿತರ ಪಡೆಯದವರು. 18,023 ಮಂದಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಉಳಿದ 2,48,293 ಮಂದಿಯ ಖಾತೆಗೆ ಹಣ ಜಮೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.ಎಪಿಎಲ್ ಕಾರ್ಡ್ದಾರರಿಗೆ ನಿರ್ಲಕ್ಷ್ಯ ಸಲ್ಲದು
ರಾಜ್ಯದಲ್ಲಿಅಕ್ರಮವಾಗಿ ಶ್ರೀಮಂತರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ನಾವು ಬಿಪಿಎಲ್ ಕಾರ್ಡ್ಗೆ ಅರ್ಹವಾಗಿದ್ದರೂ ನಮಗೆ ಇನ್ನೂ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಹಾಗಂತ ಎಪಿಎಲ್ ಅಕ್ಕಿ ಖರೀದಿಸೋಣ ಎಂದು ಪಡಿತರ ಅಂಗಡಿಗೆ ಹೋದರೆ ಎಪಿಎಲ್ ಅಕ್ಕಿಯೂ ಸಿಗುತ್ತಿಲ್ಲ. ನಮ್ಮಂತಹ ಬಡಪಾಯಿಗಳ ಮೇಲೆ ಸರಕಾರದ ಈ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಎಪಿಎಲ್ ಕಾರ್ಡ್ದಾರರಾದ ಸರೋಜಿನಿ ಮಣ್ಣಗುಡ್ಡ. ದ.ಕ. ಜಿಲ್ಲೆಯಲ್ಲಿಎಪಿಎಲ್ ಕಾರ್ಡ್ಗೆ ಬಂದಷ್ಟು ಅಕ್ಕಿ ವಿತರಣೆ ಮಾಡಲಾಗಿದೆ. ಶನಿವಾರಕ್ಕೆ ಈ ತಿಂಗಳ ಪಡಿತರ ಅಂತ್ಯವಾಗುವ ಕಾರಣ ಎಲ್ಲ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಲಭಿಸುವುದು ಕಷ್ಟ. ಎಪಿಎಲ್ ಅಕ್ಕಿ ಒದಗಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ.