ಆ್ಯಪ್ನಗರ

ಮರೆವಿನ ಕಾಯಿಲೆಯಿಂದ ದಾರಿ ತಪ್ಪಿ 3 ದಿನ ಕಾಡಿನಲ್ಲೇ ಉಳಿದ 88ರ ವೃದ್ಧ!

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಸಮೀಪದ ಕಾಡುಮನೆ ನಿವಾಸಿ ಅಣ್ಣು ಪೂಜಾರಿ(88) ಅಕ್ಟೋಬರ್‌ 1ರಂದು ನಾಪತ್ತೆಯಾಗಿದ್ದು, ಅ.4ರಂದು ಸಂಜೆ ಸಮೀಪದ ಕುದುರೆಮುಖ ಅರಣ್ಯ ವ್ಯಾಪ್ತಿಗೊಳಪಟ್ಟ ಕಾಡಿನಲ್ಲಿ ಪತ್ತೆಯಾಗಿದ್ದಾರೆ.

Vijaya Karnataka Web 5 Oct 2020, 9:14 pm
ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಸಮೀಪದ ಕಾಡುಮನೆ ನಿವಾಸಿ ಅಣ್ಣು ಪೂಜಾರಿ(88) ಅಕ್ಟೋಬರ್‌ 1ರಂದು ನಾಪತ್ತೆಯಾಗಿದ್ದು, ಅ.4ರಂದು ಸಂಜೆ ಸಮೀಪದ ಕುದುರೆಮುಖ ಅರಣ್ಯ ವ್ಯಾಪ್ತಿಗೊಳಪಟ್ಟ ಕಾಡಿನಲ್ಲಿ ಪತ್ತೆಯಾಗಿದ್ದಾರೆ.
Vijaya Karnataka Web old
Picture for representational purpose only.


ಅಣ್ಣು ಪೂಜಾರಿ ಅವರು ಅ.1ರಂದು ಸಂಜೆ ನಾಪತ್ತೆಯಾಗಿದ್ದರು. ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿತ್ತು. ಸ್ಥಳೀಯರು ಹಾಗೂ ಮನೆ ಮಂದಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಬಳಿಕ ಮಂಗಳೂರಿನ ಎನ್‌ಡಿಆರ್‌ಎಫ್‌ ಶ್ವಾನದಳಕ್ಕೆ ತನಿಖೆಗೆ ಶಿಫಾರಸು ಮಾಡಲಾಗಿತ್ತು.

ವಯೋಸಹಜ ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದ ಅಣ್ಣು ಪೂಜಾರಿ ಕಾಡಿನ ದಾರಿಯಲ್ಲಿ ತೆರಳಿದ್ದು, ಮನೆಗೆ ಮರಳಲು ದಾರಿ ಸಿಗದ ಕಾರಣ ಕಾಡಿನಲ್ಲೇ ಉಳಿದಿದ್ದರು ಎಂದು ಗೊತ್ತಾಗಿದೆ. ಮಿತ್ತಬಾಗಿಲು ಗ್ರಾಪಂ ಉಪಾಧ್ಯಕ್ಷ ವಿನಯಚಂದ್ರ, ಮಾಜಿ ಸದಸ್ಯ ವಿಜಯ ಗೌಡ, ಸ್ಥಳೀಯರಾದ ಸಂದೀಪ್‌ ಪೂಜಾರಿ, ಸುರೇಂದ್ರ ಪೂಜಾರಿ, ತಿಮ್ಮಪ್ಪ ಪೂಜಾರಿ, ಸುಧಾಕರ್‌ ಸೇರಿದಂತೆ 60ಕ್ಕೂ ಅಧಿಕ ಮಂದಿ ಅರಣ್ಯಾಧಿಕಾರಿಗಳ ಅನುಮತಿ ಪಡೆದು 7 ತಂಡಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಿದ್ದು, ಮನೆಯಿಂದ 8 ಕಿ.ಮೀ. ದೂರದಲ್ಲಿರುವ ಕಾಡುಮನೆ ಕುಕ್ಕಾಡಿ ಎಂಬಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ದೀಪಾವಳಿಗೆ ಚಿನ್ನದ ಬೆಲೆ ಇಳಿಯಲಿದೆಯೇ? ತಜ್ಞರ ಅಭಿಪ್ರಾಯವಿದು!

ಮೂರು ದಿನಗಳಿಂದ ಕಾಡಿನಲ್ಲಿ ಕೇವಲ ನೀರು ಕುಡಿದು ದಿನ ರಾತ್ರಿ ಕಳೆದಿದ್ದ ಅಣ್ಣು ಪೂಜಾರಿ ಅವರು ಸಾಕಷ್ಟು ಬಳಲಿದ್ದರು. ಇದೀಗ ಅವರನ್ನು ಮನೆಗೆ ಕರೆತಂದು ಉಪಚರಿಸಲಾಗಿದೆ ಎಂದು ಪುತ್ರಿ ವನಿತಾ ಉಮೇಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ