ಆ್ಯಪ್ನಗರ

ರಿಯಾಯಿತಿ ದರದಲ್ಲಿ ಬೇಳೆ ಕಾಳು ಮಾರಾಟ

ರಿಯಾಯಿತಿ ದರದಲ್ಲಿ ಬೇಳೆ ಕಾಳು ಮಾರಾಟ -ಎಪಿಎಂಸಿ ಯಾರ್ಡ್‌ನಲ್ಲಿ ಮಳಿಗೆ ಉದ್ಘಾಟನೆ ಇಂದು ವಿಕ ಸುದ್ದಿಲೋಕ, ಮೈಸೂರು ಮೈಸೂರು ಧಾನ್ಯ ವರ್ತಕರ ಸಂಘ ರಿಯಾಯಿತಿ ದರದಲ್ಲಿ ...

Vijaya Karnataka Web 18 Jul 2016, 9:00 am

ಮೈಸೂರು: ಮೈಸೂರು ಧಾನ್ಯ ವರ್ತಕರ ಸಂಘ ರಿಯಾಯಿತಿ ದರದಲ್ಲಿ ಬೇಳೆ ಕಾಳುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ನಂಜನಗೂಡು ರಸ್ತೆಯ ಎಪಿಎಂಸಿ ಯಾರ್ಡ್‌ನ 3ನೇ ಕ್ರಾಸ್‌ನ ಎ ಬ್ಲಾಕ್‌ ಪ್ರಾಂಗಣದ ಮಳಿಗೆಯಲ್ಲಿ ಬೇಳೆ ಕಾಳುಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮಳಿಗೆಯನ್ನು ಜು.18ರಂದು ಬೆಳಗ್ಗೆ 11ಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ ಉದ್ಘಾಟಿಸಲಿದ್ದಾರೆ. ಮಳಿಗೆಯಲ್ಲಿ ಜನ ಸಾಮಾನ್ಯರಿಗೆ ರಿಯಾಯಿತಿ ದರದಲ್ಲಿ ಬೇಳೆ ಕಾಳುಗಳನ್ನು ಮಾರಾಟ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಬಿ.ಎಲ್‌.ರಮೇಶ್‌ ತಿಳಿಸಿದ್ದಾರೆ.

ರಿಯಾಯಿತಿ ದರ: ಮುಕ್ತ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಬೇಳೆ ಕಾಳುಗಳನ್ನು ಸಂಘದಿಂದ ಮಾರಾಟ ಮಾಡಲಾಗುತ್ತಿದ್ದು, ಕೆಜಿಗೆ 140ರಿಂದ 150 ರೂ. ಬೆಲೆಯ ತೊಗರಿ ಬೇಳೆಯನ್ನು ಕೆಜಿಗೆ 120 ರೂ. ಹಾಗೂ 120 ರೂ. ಬೆಲೆಯ ಕಡ್ಲೆ ಬೇಳೆಯನ್ನು 100 ರೂ.ಗೆ, 160ರಿಂದ 180 ರೂ. ಬೆಲೆಯ ಉದ್ದಿನ ಬೇಳೆಯನ್ನು ಕೆಜಿಗೆ 140 ರೂ.ಗೆ ಮತ್ತು ಕೆಜಿಗೆ 90 ರೂ. ಇರುವ ಹೆಸರು ಬೇಳೆಯನ್ನು 80 ರೂ.ಗೆ ಮಾರಾಟ ಮಾಡಲಾಗುತ್ತದೆ.

ಗುರುತಿನ ಚೀಟಿ ಕಡ್ಡಾಯ: ಪ್ರತಿಯೊಬ್ಬ ಗ್ರಾಹಕರಿಗೂ 3 ಕೆಜಿ ತೊಗರಿ ಬೇಳೆ, 2 ಕೆಜಿ ಉದ್ದಿನ ಬೇಳೆ, ತಲಾ ಒಂದು ಕೆಜಿ ಉದ್ದಿನ ಬೇಳೆ ಮತ್ತು ಹೆಸರು ಬೇಳೆಯನ್ನು ನೀಡಲಿದ್ದು, ವೋಟರ್‌ ಐಡಿ ಅಥವಾ ಆಧಾರ್‌ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕಿದೆ. ಬೇಳೆ ಕಾಳುಗಳನ್ನು ಖರೀದಿಸುವ ಗ್ರಾಹಕರು ಬಟ್ಟೆ ಬ್ಯಾಗ್‌ ಅನ್ನು ತರಬೇಕು ಎನ್ನುತ್ತಾರೆ ಸಂಘದ ಅಧ್ಯಕ್ಷ ಬಿ.ಎಲ್‌.ರಮೇಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ