ಪಿರಿಯಾಪಟ್ಟಣ : ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಯೋಜನಾ ವರದಿಯನ್ನು ಕೂಡಲೇ ಸಿದ್ಧಪಡಿಸುವಂತೆ ಕಾವೇರಿ ನೀರಾವರಿ ನಿಗಮ ಮಂಡಳಿಯ ಮುಖ್ಯ ನಿರ್ದೇಶಕ ಕೆ.ಜಯರಾಮ್ಕುಮಾರ್ ಅಧಿಕಾರಿಗಳಿಗೆ ಆದೇಶಿದರು.
ಪಿರಿಯಾಪಟ್ಟಣ ತಾಲೂಕಿನ ಕರಡಿಲಕ್ಕನ ಕೆರೆ ಏತನೀರಾವರಿ ಯೋಜನೆಯ ಕಟ್ಟಡದ ಬಳಿ ಪರಿಶೀಲನೆ ನಡೆಸಿ ಮಾತನಾಡಿದರು. ಸುತ್ತಮುತ್ತಲ ಹಾರಂಗಿ ಕಾಲುವೆಗಳಿಂದ ಕಷಿಭೂಮಿಗೆ ನೀರು ಹರಿಸಲು ಅನುಕೂಲವಾಗುವ ಜಾಗಗಳನ್ನು ಗುರುತಿಸಿ ನೀರು ಸರಬರಾಜು ಮಾಡುವಂತೆ ಮತ್ತು ಕಿತ್ತೂರಿನಲ್ಲಿರುವ ಹಾರಂಗಿ ಪ್ರವಾಸಿ ಮಂದಿರದ ಜಾಗವನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಲು ಸೂಚನೆ ಪತ್ರ ನೀಡಿ ಕ್ರಮವಹಿಸುವಂತೆ ಸೂಚಿಸಿದರು.
ಮುಖ್ಯ ನಿರ್ದೇಶಕರೊಂದಿಗೆ ಮಾತನಾಡಿದ ಶಾಸಕ ಕೆ.ವೆಂಕಟೇಶ್ ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಪಿರಿಯಾಪಟ್ಟಣ ತಾಲೂಕಿನ ರೈತರು ಇದ್ದರೂ ಸಹ ಕೇವಲ 800 ಎಕರೆ ಭೂಪ್ರದೇಶಕ್ಕೆ ಮಾತ್ರ ಹಾರಂಗಿ ನೀರು ದೊರೆಯುತ್ತಿತ್ತು. ಪಿರಿಯಾಪಟ್ಟಣ ತಾಲೂಕಿನ ಯಾವುದೇ ಜಲಾಶಯವಿಲ್ಲದೆ ಕೇವಲ ಮಳೆಯನ್ನೇ ಅವಲಂಬಿಸಿದ್ದು, ಹಾರಂಗಿ ಜಲಾಶಯದಿಂದ ಕೆ.ಆರ್.ನಗರ ಮತ್ತು ಹುಣಸೂರು ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದ್ದರಿಂದ ರಾಮಕಷ್ಣ ಹೆಗಡೆ ಯವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರಕ್ಕೆ ಒತ್ತಡ ತಂದು ಕರಡಿಲಕ್ಕನಕೆರೆ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದು. ಈ ಯೋಜನೆಯಿಂದ 30 ಸಾವಿರ ಎಕರೆಗೆ ನೀರಿನ ಅನುಕೂಲವಾಯಿತು. ಇತ್ತೀಚಿನ ದಿನಗಳಲ್ಲಿ ಅರೆಮಲೆನಾಡಾಗಿದ್ದರೂ ಸಹ ಮಳೆಯ ಕೊರತೆ ಹೆಚ್ಚು ಕಾಡುತ್ತಿದೆ ಎಂದರು.
ಏತ ನೀರಾವರಿಯಲ್ಲಿ ಪ್ರಸ್ತುತವಾಗಿ ಕೇವಲ 2 ಯಂತ್ರಗಳನ್ನು ಮಾತ್ರ ಬಳಸುತ್ತಿದ್ದು ಮತ್ತೆರಡು ಯಂತ್ರಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಿ ಹೆಚ್ಚು ನೀರು ಹರಿಯುವಂತೆ ಮಾಡಿ ತಾಲೂಕಿನ ಕಸಬಾ, ಬೆಟ್ಟದಪುರ ಹೋಬಳಿಯ ಅನೇಕ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ಶಾಸಕರ ಮನವಿ ಆಲಿಸಿದ ಎಂಡಿ, ಮುಂಬರುವ ಕಾವೇರಿ ನೀರಾವರಿ ನಿಗಮದ ಮಂಡಳಿ ಸಭೆಗೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಇಡುವಂತೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಶಿವಶಂಕರ್ರವರಿಗೆ ಜಯ್ಕುಮಾರ್ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಶಿವಣ್ಣ, ಮತ್ತು ತಹಶೀಲ್ಧಾರ್ ಬಿ.ಎಫ್.ತಳವಾರ್, ಹಾರಂಗಿ ಬಲ ಮತ್ತು ಎಡದಂಡ ನಾಲೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಪಿರಿಯಾಪಟ್ಟಣ ತಾಲೂಕಿನ ಕರಡಿಲಕ್ಕನ ಕೆರೆ ಏತನೀರಾವರಿ ಯೋಜನೆಯ ಕಟ್ಟಡದ ಬಳಿ ಪರಿಶೀಲನೆ ನಡೆಸಿ ಮಾತನಾಡಿದರು. ಸುತ್ತಮುತ್ತಲ ಹಾರಂಗಿ ಕಾಲುವೆಗಳಿಂದ ಕಷಿಭೂಮಿಗೆ ನೀರು ಹರಿಸಲು ಅನುಕೂಲವಾಗುವ ಜಾಗಗಳನ್ನು ಗುರುತಿಸಿ ನೀರು ಸರಬರಾಜು ಮಾಡುವಂತೆ ಮತ್ತು ಕಿತ್ತೂರಿನಲ್ಲಿರುವ ಹಾರಂಗಿ ಪ್ರವಾಸಿ ಮಂದಿರದ ಜಾಗವನ್ನು ಕಂದಾಯ ಇಲಾಖೆಗೆ ಹಿಂತಿರುಗಿಸಲು ಸೂಚನೆ ಪತ್ರ ನೀಡಿ ಕ್ರಮವಹಿಸುವಂತೆ ಸೂಚಿಸಿದರು.
ಮುಖ್ಯ ನಿರ್ದೇಶಕರೊಂದಿಗೆ ಮಾತನಾಡಿದ ಶಾಸಕ ಕೆ.ವೆಂಕಟೇಶ್ ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಪಿರಿಯಾಪಟ್ಟಣ ತಾಲೂಕಿನ ರೈತರು ಇದ್ದರೂ ಸಹ ಕೇವಲ 800 ಎಕರೆ ಭೂಪ್ರದೇಶಕ್ಕೆ ಮಾತ್ರ ಹಾರಂಗಿ ನೀರು ದೊರೆಯುತ್ತಿತ್ತು. ಪಿರಿಯಾಪಟ್ಟಣ ತಾಲೂಕಿನ ಯಾವುದೇ ಜಲಾಶಯವಿಲ್ಲದೆ ಕೇವಲ ಮಳೆಯನ್ನೇ ಅವಲಂಬಿಸಿದ್ದು, ಹಾರಂಗಿ ಜಲಾಶಯದಿಂದ ಕೆ.ಆರ್.ನಗರ ಮತ್ತು ಹುಣಸೂರು ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಆದ್ದರಿಂದ ರಾಮಕಷ್ಣ ಹೆಗಡೆ ಯವರು ಮುಖ್ಯಮಂತ್ರಿಯಾಗಿದ್ದಾಗ ಸರಕಾರಕ್ಕೆ ಒತ್ತಡ ತಂದು ಕರಡಿಲಕ್ಕನಕೆರೆ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದು. ಈ ಯೋಜನೆಯಿಂದ 30 ಸಾವಿರ ಎಕರೆಗೆ ನೀರಿನ ಅನುಕೂಲವಾಯಿತು. ಇತ್ತೀಚಿನ ದಿನಗಳಲ್ಲಿ ಅರೆಮಲೆನಾಡಾಗಿದ್ದರೂ ಸಹ ಮಳೆಯ ಕೊರತೆ ಹೆಚ್ಚು ಕಾಡುತ್ತಿದೆ ಎಂದರು.
ಏತ ನೀರಾವರಿಯಲ್ಲಿ ಪ್ರಸ್ತುತವಾಗಿ ಕೇವಲ 2 ಯಂತ್ರಗಳನ್ನು ಮಾತ್ರ ಬಳಸುತ್ತಿದ್ದು ಮತ್ತೆರಡು ಯಂತ್ರಗಳ ಬಳಕೆಯ ಸಾಮರ್ಥ್ಯವನ್ನು ಹೆಚ್ಚಿಸಿ ಹೆಚ್ಚು ನೀರು ಹರಿಯುವಂತೆ ಮಾಡಿ ತಾಲೂಕಿನ ಕಸಬಾ, ಬೆಟ್ಟದಪುರ ಹೋಬಳಿಯ ಅನೇಕ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ಶಾಸಕರ ಮನವಿ ಆಲಿಸಿದ ಎಂಡಿ, ಮುಂಬರುವ ಕಾವೇರಿ ನೀರಾವರಿ ನಿಗಮದ ಮಂಡಳಿ ಸಭೆಗೆ ಯೋಜನಾ ವರದಿಯನ್ನು ಸಿದ್ಧಪಡಿಸಿ ಇಡುವಂತೆ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಶಿವಶಂಕರ್ರವರಿಗೆ ಜಯ್ಕುಮಾರ್ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಶಿವಣ್ಣ, ಮತ್ತು ತಹಶೀಲ್ಧಾರ್ ಬಿ.ಎಫ್.ತಳವಾರ್, ಹಾರಂಗಿ ಬಲ ಮತ್ತು ಎಡದಂಡ ನಾಲೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.