ಆ್ಯಪ್ನಗರ

ಗಣಿ ವಿರುದ್ಧ ದನಿ ಎತ್ತಿದವರಿಗೆ ಪ್ರಾಣ ಬೆದರಿಕೆ: ಬಡಗಲಪುರ ನಾಗೇಂದ್ರ ಆರೋಪ

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಈಗ ಬಿರುಕು ಇಲ್ಲದೆ ಇದ್ದರೂ ಮುಂದಿನ ದಿನಗಳಲ್ಲಿ ಅಪಾಯವಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದರೂ ಕದ್ದು ಮುಚ್ಚಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರ ವಿರುದ್ಧ ಹೋರಾಡುವವರಿಗೆ ಪ್ರಾಣ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ.

Vijaya Karnataka 11 Jul 2021, 10:37 pm

ಹೈಲೈಟ್ಸ್‌:

  • ಕೆಆರ್‌ಎಸ್ ಉಳಿಸಲು ಹೋದವರಿಗೆ ಪ್ರಾಣ ಬೆದರಿಕೆ-ಬಡಗಲಪುರ ನಾಗೇಂದ್ರ ಆರೋಪ
  • ಸುಮಲತಾ ತೋರಿಸಿರುವ ಕಾಳಜಿಯನ್ನು ಮೆಚ್ಚುತ್ತೇವೆ
  • ಅಣೆಕಟ್ಟೆ ಒಡೆದರೆ ಆಗುವ ಅನಾಹುತಗಳ ಬಗ್ಗೆ ನೆನೆಸಿಕೊಂಡರೆ ಭಯ ಆಗುತ್ತದೆ
  • ಗಣಿಗಾರಿಕೆ ಮತ್ತು ಸಕ್ಕರೆ ಕಾರ್ಖಾನೆ ವಿಚಾರವಾಗಿ ಒಳ ಒಪ್ಪಂದ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web nagendra
ಮೈಸೂರು: "ಕೃಷ್ಣರಾಜ ಸಾಗರ ಅಣೆಕಟ್ಟೆ ಬಿರುಕು ಬಿಟ್ಟಿಲ್ಲದಿದ್ದರೂ, ಮುಂದೆ ಅಪಾಯ ಇದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಈಗಾಗಲೇ ಹೇಳಿದೆ. ಆದರೂ ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ವಿರುದ್ಧ ಹೋರಾಡುವವರಿಗೆ ಪ್ರಾಣ ಬೆದರಿಕೆಯೂ ಇರುತ್ತದೆ" ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.
ಕೆಆರ್‌ಎಸ್‌ ಉಳಿಸಲು 20 ವರ್ಷಗಳ ಹಿಂದೆಯೇ ಪುಟ್ಟಣ್ಣಯ್ಯ ಮತ್ತು ಎಚ್‌.ಎಸ್‌.ದೊರೆಸ್ವಾಮಿ ನೇತೃತ್ವದಲ್ಲಿಕನ್ನಂಬಾಡಿ ಉಳಿಸಿ, ಗಣಿ ನಿಷೇಧಿಸಿ ಎಂದು ದೊಡ್ಡ ಮಟ್ಟದ ಹೋರಾಟ ನಡೆಸಲಾಗಿತ್ತು. ಮುಂದಿನ ದಿನಗಳಲ್ಲೂ ದೊಡ್ಡಮಟ್ಟದ ಹೋರಾಟ ನಡೆಯಲಿದೆ. ಕೆಆರ್‌ಎಸ್‌ನ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಸಂಪೂರ್ಣ ನಿಷೇಧ ಆಗಬೇಕು ಎಂಬುದು ರೈತ ಸಂಘದ ಒತ್ತಾಯ. ಸಂಸದೆ ಸುಮಲತಾ ತೋರಿರುವ ಕಾಳಜಿಯನ್ನು ಮೆಚ್ಚುತ್ತೇವೆ. ಅವರಿಗೆ ಬೆಂಬಲ ಕೊಡುತ್ತೇವೆ. ಕೆಆರ್‌ಎಸ್‌ ಉಳಿಸಲು ಮತ್ತು ಗಣಿಗಾರಿಕೆ ನಿಷೇಧಕ್ಕೆ ನಡೆಯುವ ಯಾವುದೇ ಹೋರಾಟಕ್ಕೂ ನಮ್ಮ ಬೆಂಬಲ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೋಟ್ಯಂತರ ರೂಪಾಯಿ ಹಾಕಿ ಕ್ರಷರ್‌ ಸ್ಥಾಪಿಸಿದ್ದೇವೆ, ನಮ್ಮನ್ನು ಕಳ್ಳರಂತೆ ನೋಡ್ಬೇಡಿ’; ಗಣಿ ಮಾಲೀಕರ ಮನವಿ
ಕೆಆರ್‌ಎಸ್‌ ಅಣೆಕಟ್ಟೆ ಉಳಿಸುವ ನಿಟ್ಟಿನಲ್ಲಿಎಚ್‌.ಡಿ.ಕುಮಾರಸ್ವಾಮಿ ಮತ್ತು ಮಂಡ್ಯದ ಜೆಡಿಎಸ್‌ ಶಾಸಕರು ಗಂಭೀರವಾಗಿ ಚಿಂತಿಸಬೇಕು. ಅಣೆಕಟ್ಟೆ ಒಡೆದು ಹೋದರೆ ಮುಂದೆ ಆಗಬಹುದಾದ ಅನಾಹುತಗಳನ್ನು ನೆನಸಿಕೊಂಡರೆ ಭಯ ಆಗುತ್ತದೆ ಎಂದರು.

ಕುಮಾರಸ್ವಾಮಿ- ಮುರುಗೇಶ ನಿರಾಣಿ ಒಳ ಒಪ್ಪಂದ!
ಮಂಡ್ಯದಲ್ಲಿ ಗಣಿಗಾರಿಕೆ ಮತ್ತು ಸಕ್ಕರೆ ಕಾರ್ಖಾನೆಗಳ ವಿಷಯಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನಡುವೆ ಒಳಒಪ್ಪಂದ ಆಗಿರುವುದಾಗಿ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಅವರು, ಮೈಶುಗರ್‌ ಕಾರ್ಖಾನೆ ಮೇಲೆ ಕಣ್ಣಿಟ್ಟಿದ್ದಾರೆ. ಗಣಿ ತಂಟೆಗೆ ನೀವು ಬರಬೇಡಿ, ಸಕ್ಕರೆ ಕಾರ್ಖಾನೆ ತಂಟೆಗೆ ನಾವು ಬರುವುದಿಲ್ಲಎಂಬ ಒಪ್ಪಂದ ಆಗಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
'ನಾವು ಮಾಡಬೇಕಾದ ಕೆಲಸ ಬೇರೆಯದೇ ಇದೆ': ಸುಮಲತಾ ಜತೆಗಿನ ಕದನಕ್ಕೆ ವಿರಾಮ ಘೋಷಿಸಿದರೇ ಎಚ್‌ಡಿಕೆ?
ಕೋವಿಡ್‌ನಿಂದ ಸಂಕಷ್ಟ ಎದುರಿಸಿದ ರೈತರ ಸಾಲ ಮರುಪಾವತಿ ಅವಧಿ ವಿಸ್ತರಿಸಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟ ರೈತರ ಸಾಲ ಸಹಕಾರ ಬ್ಯಾಂಕ್‌ಗಳಲ್ಲಿ ಇದ್ದರೆ, ಅದನ್ನು ಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ