Please enable javascript.Pariksha Pe Charcha,ಪ್ರಧಾನಿ ಜೊತೆಗಿನ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಭಾಗವಹಿಸಿದ ಮೈಸೂರಿನ ವಿದ್ಯಾರ್ಥಿ ತರುಣ್! - tarun a student from mysuru participates pm modi's pariksha pe charcha - Vijay Karnataka

ಪ್ರಧಾನಿ ಜೊತೆಗಿನ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಭಾಗವಹಿಸಿದ ಮೈಸೂರಿನ ವಿದ್ಯಾರ್ಥಿ ತರುಣ್!

Vijaya Karnataka Web 1 Apr 2022, 8:27 pm
Embed

ಪ್ರಧಾನಿ ಮೋದಿ ಅವರ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಕರ್ನಾಟಕದಿಂದ ಏಕೈಕ ವಿದ್ಯಾರ್ಥಿಯಾಗಿ, ಮೈಸೂರು ಜಿಲ್ಲೆಯ ದೊಡ್ಡ ಮಾರನಗೌಡನಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದ 11ನೇ ತರಗತಿಯ ವಿದ್ಯಾರ್ಥಿ ಎಂ.ಬಿ.ತರುಣ್ ಭಾಗವಹಿಸಿ ಗಮನ ಸೆಳೆದಿದ್ದಾನೆ.ಮಕ್ಕಳು ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆಫ್‌ಲೈನ್ ಯಾವುದೇ ಇದ್ದರೂ ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ ಎಂದು ತರುಣ್ ಹೇಳಿದ್ದಾನೆ.

'ಪರೀಕ್ಷಾ ಪೇ ಚರ್ಚಾ' ಮೂಲಕ ಮಕ್ಕಳ ವಿದ್ವತ್ತಿನ ಪರಿಚಯ ಮಾಡಿಕೊಂಡ ಪ್ರಧಾನಿ ಮೋದಿ!

ಆಫ್‌ಲೈನ್ ಪಾಠಕ್ಕಿಂತ ಆನ್‌ಲೈನ್ ಪಾಠ ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಆಫ್‌ಲೈನ್ ತರಗತಿ ಒಂದು ನಿಗದಿತ ಸ್ಥಳದಲ್ಲಿ ಮಾತ್ರ ಕಲಿಯಲು ಅವಕಾಶ ನೀಡುತ್ತದೆ. ಆದರೆ ಆನ್‌ಲೈನ್ ತರಗತಿಯಿಂದ ಯಾವಾಗ, ಎಲ್ಲಿ ಬೇಕಾದರೂ ಕಲಿಯಬಹುದು ಎಂದು ಪ್ರಧಾನಿ ಹೇಳಿದರು ಎಂದು ತರುಣ್ ತನ್ನ ಅನುಭವಗಳನ್ನು ಬಿಚ್ಚಿಟ್ಟ.ದೇಶದ ಒಟ್ಟು 40 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಮೈಸೂರಿನ ವಿದ್ಯಾರ್ಥಿಗೆ ಅವಕಾಶ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತರುಣ್ ಶಾಲೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿತ್ತು.