Please enable javascript.ಐಸಿಸಿಯಿಂದ 'ಅವಳಿಗೆ ಇಫ್ತಾರ್' ಕಾರ್ಯಕ್ರಮ,ಕತಾರ್: ರಂಜಾನ್ ಪ್ರಯುಕ್ತ ಐಸಿಸಿಯಿಂದ 'ಅವಳಿಗೆ ಇಫ್ತಾರ್' ಕಾರ್ಯಕ್ರಮ - qatar: 'iftar for her' program by icc on the occasion of ramadan - Vijay Karnataka

ಕತಾರ್: ರಂಜಾನ್ ಪ್ರಯುಕ್ತ ಐಸಿಸಿಯಿಂದ 'ಅವಳಿಗೆ ಇಫ್ತಾರ್' ಕಾರ್ಯಕ್ರಮ

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka Web 15 Apr 2024, 3:08 pm
Subscribe

ಪವಿತ್ರ ರಂಜಾನ್ ಮಾಸದ ಅಂಗವಾಗಿ ಕತಾರ್‌ನ ಭಾರತೀಯ ದೂತವಾಸದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು “ಅವಳಿಗೆ ಇಫ್ತಾರ್” ಎಂಬ ಕಾರ್ಯಕ್ರಮವನ್ನು ದುರ್ಬಲ ಮಹಿಳೆಯರಿಗೆ ಹಮ್ಮಿಕೊಂಡಿತ್ತು. ಐಸಿಸಿ ಮಹಿಳೆಯರ ಒಕ್ಕೂಟವು ಗೃಹ ಕೆಲಸದವರಿಗೆ ಹಾಗೂ ದುರ್ಬಲ ಮಹಿಳೆಯರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಗೌರವಿಸಿದರು.

ಹೈಲೈಟ್ಸ್‌:

  • ಕತಾರ್‌ನಲ್ಲಿ ರಂಜಾನ್ ಪ್ರಯುಕ್ತ ಐಸಿಸಿಯಿಂದ 'ಅವಳಿಗೆ ಇಫ್ತಾರ್' ಕಾರ್ಯಕ್ರಮ
  • ಗೃಹ ಕೆಲಸದವರು, ದುರ್ಬಲ ಮಹಿಳೆಯರಿಗೆ ವಿಶೇಷ ಕೊಡುಗೆ
  • ಐಸಿಸಿ ಮಹಿಳೆಯರ ಒಕ್ಕೂಟವು ಈ ಕಾರ್ಯಕ್ರಮವನ್ನು ಆಯೋಜಿಸಿ, ನಡೆಸಿಕೊಟ್ಟಿತು

ಕತಾರ್: ರಂಜಾನ್ ಪ್ರಯುಕ್ತ ಐಸಿಸಿಯಿಂದ ಅವಳಿಗೆ ಇಫ್ತಾರ್ ಕಾರ್ಯಕ್ರಮ
ಕತಾರ್: ರಂಜಾನ್ ಪ್ರಯುಕ್ತ ಐಸಿಸಿಯಿಂದ 'ಅವಳಿಗೆ ಇಫ್ತಾರ್' ಕಾರ್ಯಕ್ರಮ
ಕತಾರ್: ಇಲ್ಲಿರುವ ಭಾರತೀಯ ದೂತವಾಸದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು (ಐಸಿಸಿ) ಪವಿತ್ರ ರಂಜಾನ್ ಮಾಸದ ಪ್ರಯುಕ್ತ “ಅವಳಿಗೆ ಇಫ್ತಾರ್” ಎಂಬ ಕಾರ್ಯಕ್ರಮವನ್ನು ದುರ್ಬಲ ಮಹಿಳೆಯರಿಗೆ ಹಮ್ಮಿಕೊಂಡಿತ್ತು. ಐಸಿಸಿ ಮಹಿಳೆಯರ ಒಕ್ಕೂಟವು ಈ ಕಾರ್ಯಕ್ರಮವನ್ನು ಆಯೋಜಿಸಿ, ನಡೆಸಿಕೊಟ್ಟಿತು.
ಐಸಿಸಿಯ ಅಶೋಕಾ ಸಭಾಂಗಣವನ್ನು ಈ ವಿಶೇಷ ಆಚರಣೆಗೆ ಅಲಂಕೃತಗೊಳಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತೀಯ ದೂತವಾಸದ ಪ್ರಥಮ ಕಾರ್ಯದರ್ಶಿಯಾದ ಡಾ. ವೈಭವ್ ತಾಂಡಾಲೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಡಾ. ಮನೀಷಾ ತಂಡಾಳೆ ಅವರು ಉಪಸ್ಥಿತರಿದ್ದರು .

Eid 2024 Wishes: ನಾಡಿನ ಸಮಸ್ತ ಜನತೆಗೆ ಈದ್‌ 2024 ರ ಶುಭಾಶಯಗಳು.!
ಐಸಿಸಿ ಅಧ್ಯಕ್ಷರಾದ ಏ ಪಿ ಮಣಿಕಂಠನ್ ಅವರು ಸಮಸ್ತ ಸಭಿಕರನ್ನು ಸ್ವಾಗತಿಸಿದರು. ಡಾ. ವೈಭವ್ ಅವರು ಮಾತನಾಡಿ, ಪವಿತ್ರ ರಂಜಾನ್ ತಿಂಗಳಿನ ಮಹತ್ವವನ್ನು ಹೇಳಿ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಈ ವರ್ಷದ ರಂಜಾನ್ ಹಬ್ಬವು ಆರೋಗ್ಯ ಹಾಗೂ ಸಂತೋಷವನ್ನು ತರಲೆಂದು ಹಾರೈಸಿದರು. ನೆರೆದಿದ್ದ ಸಭಿಕರಲ್ಲಿ ದುರ್ಬಲ ಮಹಿಳೆಯರು ಹಾಗೂ ಗೃಹ ಕೆಲಸದವರಿಗೆ ಡಾ.ವೈಭವ್ ಹಾಗೂ ಐಸಿಸಿ ಆಡಳಿತ ಸಮಿತಿಯ ಸದಸ್ಯರು ಸೇರಿ ವಿಶೇಷ ಕಾಣಿಕೆಯನ್ನು ನೀಡಿ ಗೌರವಿಸಿದರು.

ಯುಗಾದಿ, ರಂಜಾನ್ ಹಬ್ಬಗಳ ಮೇಲೆ ಹದ್ದಿನ ಕಣ್ಣು; ಬಟ್ಟೆ ವ್ಯಾಪಾರದ ಮೇಲೂ ನಿಗಾ
ಐಸಿಸಿ ಉಪಾಧ್ಯಕ್ಷರಾದ ಕರ್ನಾಟಕ ಮೂಲದವರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಪ್ರಧಾನ ಕಾರ್ಯದರ್ಶಿಯಾದ ಮೋಹನ್ ಕುಮಾರ್ ಅವರು ಹಾಗೂ ಭಾರತೀಯ ಮೂಲದ ಸಮಿತಿಗಳ ಅಧ್ಯಕ್ಷರುಗಳು, ಐಸಿಸಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಂದಿನಿ ಅಬ್ಬಾ ಗೌಣಿ ಹಾಗೂ ಐಸಿಸಿ ಆಡಳಿತ ಸಮಿತಿಯ ಸದಸ್ಯರು ಮತ್ತು ಮಹಿಳಾ ಒಕ್ಕೂಟದ ಆಡಳಿತ ಸಮಿತಿಯ ಸದಸ್ಯರು, ಸಮುದಾಯದ ನಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಲಕ್ಷ್ಮೀ ಎಚ್ಎಲ್
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ