Sree Ramulu: ಜನಾರ್ದನ ರೆಡ್ಡಿಯನ್ನ ನಾನು ಯಾಕ್‌ ಭೇಟಿ ಮಾಡಬಾರದು, ಅವರನ್ನ ಓಪನ್‌ ಆಗಿ ಭೇಟಿ ಮಾಡುತ್ತೇನೆ - ಶ್ರೀರಾಮುಲು

ರಾಯಚೂರು : ಬಳ್ಳಾರಿಯಲ್ಲಿ ನಡೆದಿರುವ ಐಟಿ ದಾಳಿಗೆ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಬಳ್ಳಾರಿಯಲ್ಲಿ ಯಾವುದೇ ಐಟಿ ರೇಡ್‌ಗಳಿಗೆಲ್ಲ ರಾಮುಲು ಅವರನ್ನು ಜೋಡಿಸುವುದು ಬೇಕಿಲ್ಲ. ಎಲ್ಲರೂ ನಮಗೂ ಪರಿಚಯಸ್ಥರು ಇಲ್ಲ ಹಂತ ಹೇಳಲ್ಲ, ಸಿಂಧನೂರಿನಲ್ಲಿ ಜನಾರ್ದನ್‌ ರೆಡ್ಡಿ ಪಾರ್ಟಿಯ ಸಮಾವೇಶವನ್ನ ನಾನು ಶೇರ್‌ ಮಾಡಿಲ್ಲ, ಜನಾರ್ದನ್‌ ರೆಡ್ಡಿ ಸಮಾವೇಶದ ಬಗ್ಗೆ ನನ್ನ ಖಾತೆಯಿಂದ ಶೇರ್‌ ಮಾಡಿಲ್ಲ, ಪೊಲೀಸರಿಗೆ ತಿಳಿಸಿದ್ದೇನೆ, ತನಿಖೆಯಾಗುತ್ತಿದೆ.

ನಾನು ಒಂದು ಪಾರ್ಟಿಯಲ್ಲಿ ಇದ್ದೇನೆ, ಜನಾರ್ದನ್‌ ರೆಡ್ಡಿ ಒಂದು ಪಕ್ಷದವರು, ಬಿಜೆಪಿ ಪಕ್ಷ ಸಿದ್ದಾಂತ ಪಕ್ಷ ಅದರ ಮೇಲೆ ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ.
ಜನಾರ್ದನ ರೆಡ್ಡಿ ಮುಂಚೆಯಿಂದಲೂ ಪರಿಚಯಸ್ದರು ಈಗ ಅವರು ಬೇರೆ ಪಕ್ಷ ಕಟ್ಟಿ ರುವ ಕಾರಣ ಬಿಜೆಪಿ ಪಕ್ಷ ಸಿದ್ದಾಂತದ ಮೇಲೆ ರಾಜಕೀಯ ಮಾಡುತ್ತಿದ್ದೇವೆ.

ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ, ಪ್ರಾದೇಶಿಕ ಪಕ್ಷದ ಪರಿಸ್ಥಿತಿಗೆ ಬಂದಿದೆ: ಈಶ್ವರಪ್ಪ ವ್ಯಂಗ್ಯ

ಪ್ರಧಾನಿ ಮೊದಿ, ರಾಜ್ಯದಲ್ಲಿ ಭೀಷ್ಮ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಾರೆ ನಮ್ಮ ಸರ್ಕಾರದ ಅವಧಿಯಲ್ಲಿ ಒಳ್ಳೆ ಕೆಲಸ ಮಾಡಿದ್ದೇವೆ ಜನರ ವಿಶ್ವಾಸಗಳಿಸುವಂತ ಕೆಲಸ ಮಾಡುತ್ತಿದ್ದೇವೆ, ಮುಂಬರುವ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ.

ಜನಾರ್ದನ ರೆಡ್ಡಿಯವರ ಹುಟ್ಟುಹಬ್ಬ ದಿನದಂದು ರಹಸ್ಯವಾಗಿ ನಾನು ಭೇಟಿಯಾಗಿಲ್ಲ. ಅವರು ನನಗೆ ಮೊದಲಿನಿಂದಲೂ ಪರಿಚಯಸ್ಥರು ಅವರನ್ನ ಓಪನ್‌ ಆಗಿಯೇ ಭೇಟಿ ಮಾಡುತ್ತೇನೆ. ನಾನು ಯಾಕೆ ಅವರನ್ನ ಭೇಟಿಯಾಗಬಾರದು ಎಲ್ಲೋ ಕಾರ್ಯಕ್ರಮದಲ್ಲಿ ಭೇಟಿಯಾಗಿ ಮಾತನಾಡಿದರೆ ರಾಜಕೀಯ ಮಾತನಾಡಿದ್ರು ಎಂದು ಊಹಿಸಿಕೊಳ್ಳಲು ಹೇಗೆ ಸಾಧ್ಯ ಎಂದರು ಪ್ರಶ್ನೆ ಮಾಡಿದರು.

Vijaya Karnataka Web 19 Jan 2023, 11:07 pm
Loading ...
ಮುಂದಿನ ವಿಡಿಯೋ