Please enable javascript.ರಾಮನಗರ: ಮಾವು ಬೆಳೆಗೆ ವಿಮೆ ಕಂತು ಪಾವತಿಯ ಕಂಟಕ! ರೈತರಿಂದ ಆಕ್ರೋಶ - mango crop premium payment increase - Vijay Karnataka

ರಾಮನಗರ: ಮಾವು ಬೆಳೆಗೆ ವಿಮೆ ಕಂತು ಪಾವತಿಯ ಕಂಟಕ! ರೈತರಿಂದ ಆಕ್ರೋಶ

Edited byಶ್ರುತಿ ಡಿ | Vijaya Karnataka Web 28 Jun 2023, 12:48 pm
Subscribe

Mango Crop: ರಾಮನಗರ ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಹವಾಮಾನ ವೈಪರೀತ್ಯ ಹಾಗೂ ಕೀಟ ಬಾಧೆಗೆ ನಲುಗಿ ಬೆಳೆ ಹಾನಿಯಾಗಿದೆ. ರೈತರು ಬೆಳೆ ಪರಿಹಾರಕ್ಕೆ ಮೊರೆ ಹೋಗಿದ್ದು, ಇದರ ಮಧ್ಯೆಯೇ 40ರಿಂದ 60ಕ್ಕೆ ಪ್ರೀಮಿಯಂ ಮೊತ್ತ ಪಾವತಿ ಕೂಡ ಹೆಚ್ಚಳ ಮಾಡಲಾಗಿದೆ. ಇದರಿಂದ ರೈತರು ಆಕ್ರೋಶಗೊಂಡಿದ್ದು, ರಾಜ್ಯ ಮಟ್ಟದಲ್ಲಿ ಮರುಟೆಂಡರ್‌ಗೆ ಆಹ್ವಾನ ಮಾಡಲಾಗಿದೆ.

ಹೈಲೈಟ್ಸ್‌:

  • ಮಾವು ಬೆಳೆಯಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ.
  • ಹವಾಮಾನ ವೈಪರೀತ್ಯ, ಕೀಟ ಬಾಧೆಯಿಂದ ಈ ಬಾರಿ ಮಾವು ಇಳುವರಿ ಕುಂಠಿತ.
  • ಪ್ರೀಮಿಯಂ ಮೊತ್ತ ಪಾವತಿ ಹೆಚ್ಚಳ, ಮಾವು ಬೆಳೆಗಾರರಿಂದ ಆಕ್ರೋಶ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಎಸ್‌.ಶ್ರೀಧರ್‌
ರಾಮನಗರ: ಜಿಲ್ಲೆಯ ಪ್ರಮುಖ ಬೆಳೆಗಳ ಪೈಕಿ ಒಂದಾಗಿರುವ ಮಾವು ಬೆಳೆ ವಿಮಾ ಪ್ರೀಮಿಯಂ ಮೊತ್ತ ಪಾವತಿ ಗಲಾಟೆಯ ಸುಳಿಯಲ್ಲಿ ಸಿಲುಕಿದೆ.

ಕಳೆದ 5 ವರ್ಷಗಳಿಂದಲೂ ಮಾವು ಬೆಳೆ ನಷ್ಟದಲ್ಲಿದೆ. ಹಾಗಾಗಿ ಬೆಳೆ ವಿಮಾ ಕಂಪನಿಗಳು ರೈತರಿಗೆ ಪರಿಹಾರದ ಹಣ ವಿತರಣೆ ಮಾಡಿವೆ. ಈ ಸಂಬಂಧ ನಷ್ಟದಲ್ಲಿರುವ ಕಂಪನಿಗಳು ಈ ಬಾರಿ ಬೆಳೆ ವಿಮೆ ಪ್ರೀಮಿಯಂ ಪಡೆದುಕೊಳ್ಳಲು ಮೊತ್ತ ಹೆಚ್ಚಿಸಿವೆ. ಕಂಪನಿಗಳು ವಿಧಿಸಿರುವ ಹಣಕ್ಕೆ ರೈತ ವರ್ಗದಿಂದ ವಿರೋಧ ವ್ಯಕ್ತವಾಗಿದ್ದು, ಮರು ಟೆಂಡರ್‌ ಕಳುಹಿಸಿಕೊಡಲಾಗಿದೆ.

ಏನಾಗಿದೆ?
ಪ್ರತಿ ವರ್ಷ ವಿವಿಧ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಬೆಳೆ ನಷ್ಟ ಉಂಟಾದರೆ, ಕಂಪನಿಯು ರೈತರಿಗೆ ಪರಿಹಾರ ನೀಡುತ್ತದೆ. ಜುಲೈ ಅಂತ್ಯದವರೆಗೆ ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ವೇಳೆಗಾಗಲೇ ವಿಮಾ ಪ್ರಕ್ರಿಯೆ ಮುಗಿದು ರೈತರಿಂದ ಅರ್ಜಿ ಆಹ್ವಾನ ಮಾಡಬೇಕಿಕಾಗಿತ್ತು. ಆದರೆ, ವಿಮಾ ಮೊತ್ತ ಪಾವತಿ ಸಂಬಂಧ ಆಗಿರುವ ವ್ಯತ್ಯಾಸದಿಂದಾಗಿ ಮರು ಟೆಂಡರ್‌ ಹೋಗಿದೆ.
ಧಾರವಾಡ- ಅನುದಾನ ಕೊರತೆ ನೆಪ, ಸತತ 4ನೇ ವರ್ಷವು ಮಾವು ಮೇಳ ರದ್ದು
ರೈತರು ಪ್ರತಿ ವರ್ಷ 5% ಮಾತ್ರ ಪಾವತಿ ಮಾಡಬೇಕಿತ್ತು. ಬಾಕಿ 35% ಅನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಪಾವತಿ ಮಾಡುತ್ತಿತ್ತು. ಬೆಳೆ ನಷ್ಟ ಉಂಟಾದರೆ ಒಟ್ಟು ಹಣವನ್ನು ರೈತರಿಗೆ ಕಂಪನಿ ಒದಗಿಸಿಕೊಡುತ್ತಿತ್ತು. ಆದರೆ, ಕಳೆದ 5 ವರ್ಷಗಳಿಂದ ನಿರಂತರವಾಗಿ ಬೆಳೆ ನಷ್ಟ ಆಗಿದೆ. ಹೀಗಾಗಿ ವಿಮಾ ಕಂಪನಿಗಳು ನಿರಂತರವಾಗಿ ನಷ್ಟ ಅನುಭವಿಸಿವೆ. ಹಾಗಾಗಿ ಪ್ರೀಮಿಯಂ ಮೊತ್ತ ಪಾವತಿ ಹೆಚ್ಚು ಮಾಡಲಾಗಿದೆ. ಅದು 40ರಿಂದ 60ಕ್ಕೆ ಏರಿಕೆಯಾಗಿದೆ. ಹಾಗಾಗಿ ಹೆಚ್ಚಳ ಪ್ರೀಮಿಯಂಗೆ ಬೇಸತ್ತಿದ್ದು, ರೈತ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ರಾಜ್ಯ ಮಟ್ಟದಲ್ಲಿ ಮರುಟೆಂಡರ್‌ ಆಹ್ವಾನ ಮಾಡಲಾಗಿದ್ದು, ಶೀಘ್ರದಲ್ಲೇ ಈ ಕೆಲಸ ಮುಗಿಯಲಿದೆ.
ಮಾವಿಗೆ ಮೌಲ್ಯ ಹೆಚ್ಚಿಸಿದ ಹೊದಿಕೆ- ವೈಜ್ಞಾನಿಕ ಪದ್ಧತಿಯಿಂದ ಮಾವು ಬೆಳೆಗಾರರಿಗೆ ಲಾಭ
ಈ ಬಾರಿಯೂ ನಷ್ಟ
ಇನ್ನು ಜಿಲ್ಲೆಯಲ್ಲಿ ಈ ಬಾರಿಯ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಹವಾಮಾನ ವೈಪರೀತ್ಯ ಹಾಗೂ ಕೀಟ ಬಾಧೆಗೆ ನಲುಗಿದೆ. ಹಾಗಾಗಿ ರೈತರು ಬೆಳೆ ಪರಿಹಾರಕ್ಕೆ ಮೊರೆ ಹೋಗಲಿದ್ದಾರೆ. ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ರಾಮನಗರ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ.

ಜಿಲ್ಲೆಯ ಬೆಳೆ ವಿಮೆ

ವರ್ಷ ನೋಂದಣಿ ವ್ಯಾಪ್ತಿ
2017ರಲ್ಲಿ -(ನೋಂದಣಿ 759) ( ವ್ಯಾಪ್ತಿ-733.01)
2018ರಲ್ಲಿ- (ನೋಂದಣಿ-306) (ವ್ಯಾಪ್ತಿ- 293.74)
2019ರಲ್ಲಿ- (ನೋಂದಣಿ- 1062) (ವ್ಯಾಪ್ತಿ- 1027.88)
2020ರಲ್ಲಿ -(ನೋಂದಣಿ- 703) (ವ್ಯಾಪ್ತಿ -730. 61)
2021ರಲ್ಲಿ- (ನೋಂದಣಿ 3188) (ವ್ಯಾಪ್ತಿ- 1908.00)
2022ರಲ್ಲಿ- (ನೋಂದಣಿ 4789) (ವ್ಯಾಪ್ತಿ-3492.69)

ಪ್ರೀಮಿಯಂ ಮೊತ್ತ ಪಾವತಿ ಸಂಬಂಧ ಕಂಪನಿಗಳು ಹೆಚ್ಚಿನ ಮೊತ್ತ ಕೋಟ್‌ ಮಾಡಿದ್ದವು. ಅದನ್ನು ಮರುಟೆಂಡರ್‌ ಕಳುಹಿಸಿಕೊಡಲಾಗಿದೆ ಎಂದು ರಾಮನಗರ ತೋಟಗಾರಿಕೆ ಇಲಾಖೆ, ಉಪನಿರ್ದೇಶಕ ಮುನೇಗೌಡ ತಿಳಿಸಿದ್ದಾರೆ.
ಶ್ರುತಿ ಡಿ
ಲೇಖಕರ ಬಗ್ಗೆ
ಶ್ರುತಿ ಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ, ಗುತ್ತಿಗೆ ಆಧಾರದ ಮೇಲೆ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟಿ ಬೆಳೆದಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಬರೆಯುವುದು, ಹಿನ್ನೆಲೆ ಧ್ವನಿ, ಚಾರಣ, ಕವನ ರಚನೆ ನೆಚ್ಚಿನ ಹವ್ಯಾಸ. ಪ್ರಚಲಿತ ವಿದ್ಯಮಾನ, ರಾಜಕೀಯ, ಕೃಷಿ ಆಸಕ್ತಿವುಳ್ಳ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ