ಸಾಗರ: ಕಾರ್ಯಗಳ ಒತ್ತಡದ ನಡುವೆಯೂ ಸೃಜನಶೀಲ ಪ್ರಯತ್ನ ಕಾಪಾಡಿಕೊಳ್ಳುವುದು ನಿಜವಾದ ಆಸಕ್ತಿ ಎಂದು ಎಲ್.ಬಿ.ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ತಿರುಮಲ ಮಾವಿನಕುಳಿ ಹೇಳಿದರು.
ಇಲ್ಲಿನ ರಾಜ್ಯ ಸರಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಿ.ನಂಜುಂಡ ರಚಿಸಿದ ಬಾನ್ದನಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಾನ್ದನಿ ಸಂಕಲನದಲ್ಲಿ ನವೋದಯ ಕಾವ್ಯ ಪರಂಪರೆ ಲಕ್ಷ ಣಗಳು ಎದ್ದು ಕಾಣುತ್ತವೆ. ನಿಸರ್ಗದ ವ್ಯವಹಾರ ಹಾಗೂ ಅಧ್ಯಾತ್ಮದ ಸಂಗತಿ ಬಗ್ಗೆ ರಚನೆಯಾದ ಕವಿತೆಗಳಿವೆ. ಪ್ರಾಸ ಬದ್ಧ ಕವಿತೆಗಳನ್ನು ಹಠಕಟ್ಟಿ ಬರೆಯಬೇಕೆಂಬ ಯತ್ನವನ್ನು ಕವಿ ಮಾಡಿದ್ದಾರೆ ಎಂದರು. ಕವಿ, ಕೋಲಸಿರ್ಸಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ನಂಜುಂಡ ಮಾತನಾಡಿ, ಕಾವ್ಯ ಮಾಧ್ಯಮವು ನನ್ನೊಳಗಿನ ಅಭಿವ್ಯಕ್ತಿ ಶೈಲಿ ಎಂಬ ನಂಬಿಕೆಯಿದೆ. ಸಮಾಜಕ್ಕೆ ಸಂದೇಶ ನೀಡಬೇಕೆಂಬ ಹಂಬಲ ನನಗೆ ಇಲ್ಲ. ಮೂಡಿದ ಭಾವನೆಗಳನ್ನು ಪದಬಂಧದಲ್ಲಿಟ್ಟು ಕವನ ರಚಿಸಲು ಯತ್ನಿಸುತ್ತಿದ್ದೇನೆ. ಉದ್ಯೋಗಕ್ಕಾಗಿ ನಿತ್ಯ ಬಸ್ ಸಂಚಾರದ ಸಂದರ್ಭ ರಚಿಸಿದ ಕವನಗಳನ್ನು ಸಂಕಲನದ ರೂಪದಲ್ಲಿ ತರುವ ಹಂಬಲವಿದೆ ಎಂದರು. ಸಾಹಿತಿ ಡಾ.ನಾ.ಡಿಸೋಜ, ಪರಿಷತ್ ಜಿಲ್ಲಾ ಕಾರಾರಯಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್ ಇದ್ದರು. ನಿರ್ಮಲಾ ಮತ್ತು ಶ್ರೀಲಕ್ಷ್ಮೀ ಪ್ರಾರ್ಥಿಸಿ, ಮೇಜರ್ ನಾಗರಾಜ್ ಸ್ವಾಗತಿಸಿದರು. ಜಿ.ಎಸ್.ವೆಂಕಟೇಶ ನಿರೂಪಿಸಿದರು. ಪರಿಷತ್ತಿನ ಸುರೇಶ, ಗಂಗಮ್ಮ, ಡಾ.ಹಾ.ಉಮೇಶ, ವಿ.ಗಣೇಶ್, ಡಾ.ಜಿ.ಎಸ್.ಭಟ್, ವಿವಿಧ ಕಾಲೇಜುಗಳ ಉಪನ್ಯಾಸಕರು, ನಂಜುಂಡ ಅವರ ಕುಟುಂಬದವರು ಇದ್ದರು.
ಇಲ್ಲಿನ ರಾಜ್ಯ ಸರಕಾರಿ ನೌಕರರ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಿ.ನಂಜುಂಡ ರಚಿಸಿದ ಬಾನ್ದನಿ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಬಾನ್ದನಿ ಸಂಕಲನದಲ್ಲಿ ನವೋದಯ ಕಾವ್ಯ ಪರಂಪರೆ ಲಕ್ಷ ಣಗಳು ಎದ್ದು ಕಾಣುತ್ತವೆ. ನಿಸರ್ಗದ ವ್ಯವಹಾರ ಹಾಗೂ ಅಧ್ಯಾತ್ಮದ ಸಂಗತಿ ಬಗ್ಗೆ ರಚನೆಯಾದ ಕವಿತೆಗಳಿವೆ. ಪ್ರಾಸ ಬದ್ಧ ಕವಿತೆಗಳನ್ನು ಹಠಕಟ್ಟಿ ಬರೆಯಬೇಕೆಂಬ ಯತ್ನವನ್ನು ಕವಿ ಮಾಡಿದ್ದಾರೆ ಎಂದರು. ಕವಿ, ಕೋಲಸಿರ್ಸಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ನಂಜುಂಡ ಮಾತನಾಡಿ, ಕಾವ್ಯ ಮಾಧ್ಯಮವು ನನ್ನೊಳಗಿನ ಅಭಿವ್ಯಕ್ತಿ ಶೈಲಿ ಎಂಬ ನಂಬಿಕೆಯಿದೆ. ಸಮಾಜಕ್ಕೆ ಸಂದೇಶ ನೀಡಬೇಕೆಂಬ ಹಂಬಲ ನನಗೆ ಇಲ್ಲ. ಮೂಡಿದ ಭಾವನೆಗಳನ್ನು ಪದಬಂಧದಲ್ಲಿಟ್ಟು ಕವನ ರಚಿಸಲು ಯತ್ನಿಸುತ್ತಿದ್ದೇನೆ. ಉದ್ಯೋಗಕ್ಕಾಗಿ ನಿತ್ಯ ಬಸ್ ಸಂಚಾರದ ಸಂದರ್ಭ ರಚಿಸಿದ ಕವನಗಳನ್ನು ಸಂಕಲನದ ರೂಪದಲ್ಲಿ ತರುವ ಹಂಬಲವಿದೆ ಎಂದರು. ಸಾಹಿತಿ ಡಾ.ನಾ.ಡಿಸೋಜ, ಪರಿಷತ್ ಜಿಲ್ಲಾ ಕಾರಾರಯಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್ ಇದ್ದರು. ನಿರ್ಮಲಾ ಮತ್ತು ಶ್ರೀಲಕ್ಷ್ಮೀ ಪ್ರಾರ್ಥಿಸಿ, ಮೇಜರ್ ನಾಗರಾಜ್ ಸ್ವಾಗತಿಸಿದರು. ಜಿ.ಎಸ್.ವೆಂಕಟೇಶ ನಿರೂಪಿಸಿದರು. ಪರಿಷತ್ತಿನ ಸುರೇಶ, ಗಂಗಮ್ಮ, ಡಾ.ಹಾ.ಉಮೇಶ, ವಿ.ಗಣೇಶ್, ಡಾ.ಜಿ.ಎಸ್.ಭಟ್, ವಿವಿಧ ಕಾಲೇಜುಗಳ ಉಪನ್ಯಾಸಕರು, ನಂಜುಂಡ ಅವರ ಕುಟುಂಬದವರು ಇದ್ದರು.