ಗುಬ್ಬಿ: ಹಲವು ಗ್ರಾಮಗಳಿಗೆ ತುರ್ತು ನೀರು ಒದಗಿಸುವ ಬೋರ್ವೆಲ್ಗಳಲ್ಲಿ ಪಂಪ್ಮೋಟಾರ್ ಕಳಚಿಬಿದ್ದರೆ ಸಂಬಂಧಪಟ್ಟ ಪಿಡಿಒಗಳೇ ನೇರ ಹೊಣೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ತುರ್ತುಸಭೆಯಲ್ಲಿ ಕೆಲ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ ಅವರು, ಮೋಟಾರ್ ಕಳಚಿಬಿದ್ದಿದೆ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಮುಂದೆ ನಿಂತು ನೀರಿನ ವ್ಯವಸ್ಥೆ ಮಾಡಬೇಕು. ಒಬ್ಬ ರೈತ ಮೋಟಾರ್ ಬೀಳದಂತೆ 30 ಬಾರಿ ಹೊರತೆಗೆಯಬಲ್ಲ. ಆದರೆ ಪಿಡಿಒಗಳು ಹೊಸ ಮೋಟಾರ್ಗಳನ್ನೇ ಬೋರ್ವೆಲ್ಗಳಿಗೆ ಆಹುತಿ ನೀಡುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತುರ್ತಾಗಿ ನಡೆಸಿ: ತಾಲೂಕಿನಲ್ಲಿ ಈ ಹಿಂದೆ 300ಕ್ಕೂ ಅಧಿಕ ಬೋರ್ವೆಲ್ ಕೊರೆಸಲಾಗಿದೆ. ಈಗ ಸರಕಾರದ ಹಣ ಸುಲಭವಾಗಿ ಬಳಸಲಾಗದು. ಹೊಸ ಕೊಳವೆಬಾವಿ ಕೊರೆಯುವ ಮುನ್ನ ಅಲ್ಲಿನ ವಾಸ್ತವ ತಿಳಿಯಬೇಕು. ನೀರಿನ ಮಟ್ಟ ಕ್ಷೀಣಿಸಿದ್ದರೆ ಮತ್ತೆ ಲೆಂತ್ ಪೈಪ್ ಅಳವಡಿಸಿ ನೀರು ಒದಗಿಸಬೇಕು. ಟ್ಯಾಂಕರ್ ಮೂಲಕ ನೀರು ಕೊಡಬೇಕು. ತೀರಾ ಸಮಸ್ಯೆ ಕಂಡಲ್ಲಿ ರೀಬೋರ್ ವ್ಯವಸ್ಥೆ ಮಾಡಬಹುದಾಗಿದೆ. ಹೊಸ ಬೋರ್ವೆಲ್ಗಳಿಗೆ ಈಗಾಗಲೇ 26 ಗ್ರಾಮಗಳಲ್ಲಿ ಬೇಡಿಕೆ ಬಂದಿದೆ. ಈ ಸಂಬಂಧ ಪಿಡಿಒಗಳು ಮತ್ತು ಗ್ರಾಮಲೆಕ್ಕಿಗರು ನೀರಿನ ಸಮಸ್ಯೆಯನ್ನು ಖುದ್ದು ಆಲಿಸಿ ನಂತರ ಕ್ರಮ ಕೈಗೊಳ್ಳಬೇಕು. ಈ ಕಾರ್ಯ ತುರ್ತು ಕೆಲಸವಾಗಿ ನಡೆಸಬೇಕು ಎಂದರು.
ಕ್ರಿಮಿನಲ್ ಕೇಸ್: ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ಗಣೇಶಪುರ, ಎಕ್ಕಲಕಟ್ಟೆ ಮತ್ತು ಅಂಕಸಂದ್ರ ಪಂಚಾಯಿತಿಯ ಸಾರಿಗೆಪಾಳ್ಯ, ಬಸವನಪಾಳ್ಯ ಗ್ರಾಮಗಳಲ್ಲಿ ಈಗಾಗಲೇ ನೀರಿಗೆ ಹಾಹಾಕಾರವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬೆಸ್ಕಾಂ ಅಧಿಕಾರಿಗಳು ನೀರಿನ ಸಮಸ್ಯೆ ಇರುವಲ್ಲಿ ತುರ್ತು ಪರಿವರ್ತಕ ಅಳವಡಿಕೆ ಮಾಡಬೇಕು. ಈ ಜತೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳು ವಿದ್ಯುತ್ ಮೀಟರ್ಗಳನ್ನು ಕೂಡಲೇ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗುವುದು ಎಂದು ಎಚ್ಚರಿಕೆ ನೀಡಿದರು.
''ಈವರೆವಿಗೆ ಹೊಸದಾಗಿ ಕೊರೆಸಿ ಪಂಪ್ಮೋಟಾರ್ ಅವಳಡಿಸಿದ ಅಂಕಿ-ಅಂಶವನ್ನು ಶೀಘ್ರದಲ್ಲಿ ನನಗೆ ಒದಗಿಸಬೇಕು. ನೀರಿನ ಅವಶ್ಯಕತೆ ಇರುವ ಗ್ರಾಮಗಳ ಪಟ್ಟಿಯನ್ನು ಖುದ್ದು ಪರಿಶೀಲಿಸಬೇಕಿದೆ. ಈ ಹಿಂದೆ ಕೊರೆಸಿದ ಬೋರ್ಗಳಿಗೆ ಹಣ ಪಾವತಿ ಮಾಡಿಲ್ಲ. 1.50 ಕೋಟಿ ರೂ. ಇನ್ನೂ ಬಾಕಿ ಇದೆ. ಟ್ಯಾಂಕರ್ ಮೂಲಕ ನೀರು ಬಳಕೆಗೆ ಹಣ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಅನಾವಶ್ಯಕ ಕಾಮಗಾರಿಗಳಿಗೆ ಹಣ ತಾತ್ಕಾಲಿಕವಾಗಿ ನಿಲ್ಲಿಸಬೇಕು ಹಾಗೂ ನಿರಂತರ ಯೋಜನೆ ಸಂಪರ್ಕದ ಗ್ರಾಮಗಳಿಗೆ ತುರ್ತು ವಿದ್ಯುತ್ ನೀಡಲು ಅಧಿಕಾರಿಗಳಿಗೆ ಸೂಚಿಸಿದ ಅವರು, ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಗದ ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡರು. ಆರೇಳು ಬಾರಿ ಫೋನ್ ಮಾಡಿದರೂ ನಿರ್ಲಕ್ಷ ್ಯ ತೋರಿದ ದೊಡ್ಡಗುಣಿ ಪಿಡಿಒ ವಿರುದ್ಧ ಕಿಡಿಕಾರಿದರು. ವರ್ಗಾವಣೆ ಶಿಕ್ಷೆಗೆ ಗುರಿಯಾಗಿಸುವ ಎಚ್ಚರಿಕೆ ನೀಡಿ ಸಾರ್ವಜನಿಕರ ಕೆಲಸ ಮಾಡಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪಿಡಿಒಗಳ ಬೇಜವಾಬ್ದಾರಿ ಬಗ್ಗೆ ಕಿಡಿಕಾರಿದ ತಹಸೀಲ್ದಾರ್ ಎಂ.ಮಮತಾ, ಗ್ರಾಮಗಳಲ್ಲಿರುವ ಸಿಸ್ಟನ್ಗಳಿಗೆ ಮುಚ್ಚಳವಿಲ್ಲ. ವರ್ಷಗಳಿಂದ ಸ್ವಚ್ಛತೆ ಕಂಡಿಲ್ಲ. ಪಾಚಿ ಕಟ್ಟಿಕೊಂಡು ನೀರು ವಿಷಕಾರಿಯಾಗಿದೆ. ಸಿಸ್ಟನ್ ಸ್ವಚ್ಛತೆ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ. ಖುದ್ದು ಪರಿಶೀಲನೆ ಮಾಡುತ್ತಿದ್ದು, ಮತ್ತೆ ನಿರ್ಲಕ್ಷ ್ಯ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ತುರ್ತುಸಭೆಯಲ್ಲಿ ಕೆಲ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಿಡಿಕಾರಿದ ಅವರು, ಮೋಟಾರ್ ಕಳಚಿಬಿದ್ದಿದೆ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಮುಂದೆ ನಿಂತು ನೀರಿನ ವ್ಯವಸ್ಥೆ ಮಾಡಬೇಕು. ಒಬ್ಬ ರೈತ ಮೋಟಾರ್ ಬೀಳದಂತೆ 30 ಬಾರಿ ಹೊರತೆಗೆಯಬಲ್ಲ. ಆದರೆ ಪಿಡಿಒಗಳು ಹೊಸ ಮೋಟಾರ್ಗಳನ್ನೇ ಬೋರ್ವೆಲ್ಗಳಿಗೆ ಆಹುತಿ ನೀಡುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ತುರ್ತಾಗಿ ನಡೆಸಿ: ತಾಲೂಕಿನಲ್ಲಿ ಈ ಹಿಂದೆ 300ಕ್ಕೂ ಅಧಿಕ ಬೋರ್ವೆಲ್ ಕೊರೆಸಲಾಗಿದೆ. ಈಗ ಸರಕಾರದ ಹಣ ಸುಲಭವಾಗಿ ಬಳಸಲಾಗದು. ಹೊಸ ಕೊಳವೆಬಾವಿ ಕೊರೆಯುವ ಮುನ್ನ ಅಲ್ಲಿನ ವಾಸ್ತವ ತಿಳಿಯಬೇಕು. ನೀರಿನ ಮಟ್ಟ ಕ್ಷೀಣಿಸಿದ್ದರೆ ಮತ್ತೆ ಲೆಂತ್ ಪೈಪ್ ಅಳವಡಿಸಿ ನೀರು ಒದಗಿಸಬೇಕು. ಟ್ಯಾಂಕರ್ ಮೂಲಕ ನೀರು ಕೊಡಬೇಕು. ತೀರಾ ಸಮಸ್ಯೆ ಕಂಡಲ್ಲಿ ರೀಬೋರ್ ವ್ಯವಸ್ಥೆ ಮಾಡಬಹುದಾಗಿದೆ. ಹೊಸ ಬೋರ್ವೆಲ್ಗಳಿಗೆ ಈಗಾಗಲೇ 26 ಗ್ರಾಮಗಳಲ್ಲಿ ಬೇಡಿಕೆ ಬಂದಿದೆ. ಈ ಸಂಬಂಧ ಪಿಡಿಒಗಳು ಮತ್ತು ಗ್ರಾಮಲೆಕ್ಕಿಗರು ನೀರಿನ ಸಮಸ್ಯೆಯನ್ನು ಖುದ್ದು ಆಲಿಸಿ ನಂತರ ಕ್ರಮ ಕೈಗೊಳ್ಳಬೇಕು. ಈ ಕಾರ್ಯ ತುರ್ತು ಕೆಲಸವಾಗಿ ನಡೆಸಬೇಕು ಎಂದರು.
ಕ್ರಿಮಿನಲ್ ಕೇಸ್: ಶಿವಪುರ ಗ್ರಾಮ ಪಂಚಾಯಿತಿಯಲ್ಲಿ ಗಣೇಶಪುರ, ಎಕ್ಕಲಕಟ್ಟೆ ಮತ್ತು ಅಂಕಸಂದ್ರ ಪಂಚಾಯಿತಿಯ ಸಾರಿಗೆಪಾಳ್ಯ, ಬಸವನಪಾಳ್ಯ ಗ್ರಾಮಗಳಲ್ಲಿ ಈಗಾಗಲೇ ನೀರಿಗೆ ಹಾಹಾಕಾರವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಬೆಸ್ಕಾಂ ಅಧಿಕಾರಿಗಳು ನೀರಿನ ಸಮಸ್ಯೆ ಇರುವಲ್ಲಿ ತುರ್ತು ಪರಿವರ್ತಕ ಅಳವಡಿಕೆ ಮಾಡಬೇಕು. ಈ ಜತೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳು ವಿದ್ಯುತ್ ಮೀಟರ್ಗಳನ್ನು ಕೂಡಲೇ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗುವುದು ಎಂದು ಎಚ್ಚರಿಕೆ ನೀಡಿದರು.
''ಈವರೆವಿಗೆ ಹೊಸದಾಗಿ ಕೊರೆಸಿ ಪಂಪ್ಮೋಟಾರ್ ಅವಳಡಿಸಿದ ಅಂಕಿ-ಅಂಶವನ್ನು ಶೀಘ್ರದಲ್ಲಿ ನನಗೆ ಒದಗಿಸಬೇಕು. ನೀರಿನ ಅವಶ್ಯಕತೆ ಇರುವ ಗ್ರಾಮಗಳ ಪಟ್ಟಿಯನ್ನು ಖುದ್ದು ಪರಿಶೀಲಿಸಬೇಕಿದೆ. ಈ ಹಿಂದೆ ಕೊರೆಸಿದ ಬೋರ್ಗಳಿಗೆ ಹಣ ಪಾವತಿ ಮಾಡಿಲ್ಲ. 1.50 ಕೋಟಿ ರೂ. ಇನ್ನೂ ಬಾಕಿ ಇದೆ. ಟ್ಯಾಂಕರ್ ಮೂಲಕ ನೀರು ಬಳಕೆಗೆ ಹಣ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು. ಅನಾವಶ್ಯಕ ಕಾಮಗಾರಿಗಳಿಗೆ ಹಣ ತಾತ್ಕಾಲಿಕವಾಗಿ ನಿಲ್ಲಿಸಬೇಕು ಹಾಗೂ ನಿರಂತರ ಯೋಜನೆ ಸಂಪರ್ಕದ ಗ್ರಾಮಗಳಿಗೆ ತುರ್ತು ವಿದ್ಯುತ್ ನೀಡಲು ಅಧಿಕಾರಿಗಳಿಗೆ ಸೂಚಿಸಿದ ಅವರು, ದೂರವಾಣಿ ಮೂಲಕ ಸಂಪರ್ಕಕ್ಕೆ ಸಿಗದ ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡರು. ಆರೇಳು ಬಾರಿ ಫೋನ್ ಮಾಡಿದರೂ ನಿರ್ಲಕ್ಷ ್ಯ ತೋರಿದ ದೊಡ್ಡಗುಣಿ ಪಿಡಿಒ ವಿರುದ್ಧ ಕಿಡಿಕಾರಿದರು. ವರ್ಗಾವಣೆ ಶಿಕ್ಷೆಗೆ ಗುರಿಯಾಗಿಸುವ ಎಚ್ಚರಿಕೆ ನೀಡಿ ಸಾರ್ವಜನಿಕರ ಕೆಲಸ ಮಾಡಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪಿಡಿಒಗಳ ಬೇಜವಾಬ್ದಾರಿ ಬಗ್ಗೆ ಕಿಡಿಕಾರಿದ ತಹಸೀಲ್ದಾರ್ ಎಂ.ಮಮತಾ, ಗ್ರಾಮಗಳಲ್ಲಿರುವ ಸಿಸ್ಟನ್ಗಳಿಗೆ ಮುಚ್ಚಳವಿಲ್ಲ. ವರ್ಷಗಳಿಂದ ಸ್ವಚ್ಛತೆ ಕಂಡಿಲ್ಲ. ಪಾಚಿ ಕಟ್ಟಿಕೊಂಡು ನೀರು ವಿಷಕಾರಿಯಾಗಿದೆ. ಸಿಸ್ಟನ್ ಸ್ವಚ್ಛತೆ ಮಾಡಲು ನೋಟಿಸ್ ಜಾರಿ ಮಾಡಲಾಗಿದೆ. ಖುದ್ದು ಪರಿಶೀಲನೆ ಮಾಡುತ್ತಿದ್ದು, ಮತ್ತೆ ನಿರ್ಲಕ್ಷ ್ಯ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.