ಅನೈತಿಕ ತಾಣವಾಗಿದೆ ಕೊರಟಗೆರೆ ಸರ್ಕಾರಿ ಶಾಲೆ, ಪಡ್ಡೆಗಳ ಹುಚ್ಚಾಟಕ್ಕೆ ಇಲ್ಲವೇ ಬ್ರೇಕ್‌ ?!

ಹಗಲಿನಲ್ಲಿ ಇಸ್ಪೀಟ್ ಆಟ.. ಸಂಜೆಯಾದರೇ ಕುಡುಕರ ಅಡ್ಡೆ..ಅಡುಗೆ ಕೊಠಡಿ ಕುರಿಮೇಕೆಯ ದೊಡ್ಡಿ, ಜೊತೆಗೆ ಅನೈತಿಕ ಚಟುವಟಿಕೆಯ ತಾಣ ಆಗಿರುವ ಸರಕಾರಿ ಪ್ರಾಥಮಿಕ ಶಾಲೆಯ ಕಿಟಕಿ ಬಾಗಿಲುಗಳೇ ಮಾಯವಾಗಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿಗಳ ಮಾಹಿತಿಯೇ ಶಿಕ್ಷಕರಿಗೆ ಇಲ್ವಂತೆ ಇದು ನಮ್ಮ ಕೊರಟಗೆರೆ ಶಿಕ್ಷಣ ಇಲಾಖೆಯ ಕತೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಕುರುಡುಗಾನಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಭದ್ರತೆಯ ಜೊತೆ ಶಿಕ್ಷಣವು ಮರೀಚಿಕೆ ಆಗಿದೆ. ಸ್ಥಳೀಯ ಶಿಕ್ಷಕರ ದಿವ್ಯ ನಿರ್ಲಕ್ಷದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಶಾಲಾ ಕಟ್ಟಡ, ಅಡುಗೆ ಕೊಠಡಿ, ನೀರಿನ ತೊಟ್ಟಿ, ಓವರ್‍ಹೆಡ್ ಟ್ಯಾಂಕ್, ನೀರಿನ ಟ್ಯಾಂಕು, ಕೊಳವೆಬಾವಿ, ಶೌಚಾಲಯವು ಸಂಪೂರ್ಣ ನಾಶವಾಗಿವೆ. ಸರಕಾರಿ ಶಾಲೆಯ ಅಭಿವೃದ್ದಿ ಮತ್ತು ವಿದ್ಯಾರ್ಥಿಗಳ ವ್ಯಾಸಂಗದ ಭವಿಷ್ಯದ ದೃಷ್ಟಿಯಿಂದ ಕುರುಡುಗಾನಹಳ್ಳಿ ಗ್ರಾಮದ ರೈತ ಲೇ.ರಂಗಪ್ಪ ತನ್ನ 20ಗುಂಟೆ ಜಮೀನು ಶಾಲಾ ಆಡಳಿತಕ್ಕೆ ದಾನವಾಗಿ ನೀಡಿದ್ದಾರೆ. ಶಿಕ್ಷಣ ಇಲಾಖೆ, ಗ್ರಾಪಂ ಮತ್ತು ಇತರೇ ಅನುಧಾನ ಬಳಕೆಯಿಂದ ಅಭಿವೃದ್ದಿ ಆಗಬೇಕಾದ ಶಾಲೆಯು ರಕ್ಷಕ ಮತ್ತು ರಕ್ಷಣೆ ಎರಡು ಇಲ್ಲದೇ ಶಾಲಾ ಕಟ್ಟಡಗಳು ಗ್ರಾಪಂ ಅಭ್ಯರ್ಥಿಗಳ ಬೆಂಬಲಿಗರ ಪಾರ್ಟಿಯ ಕೊಠಡಿಗಳಾಗಿ ಬದಲಾಗಿದೆ. ಶಾಲೆಯ ಬಾಗಿಲು ಮತ್ತು ಕಿಟಕಿ ಮುರಿದು ಮಧ್ಯ ಸೇವನೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ದ ದೂರು ನೀಡಲು ಕೊರಟಗೆರೆ ಬಿಇಓಗೆ ಸೂಚಿಸುತ್ತೇನೆ. ಪರವಾನಗಿ ಇಲ್ಲದೇ ಖಾಸಗಿಯಾಗಿ ಶಾಲೆ ಬಳಕೆಗೆ ಅವಕಾಶವಿಲ್ಲ. ನಾನೇ ಖುದ್ದಾಗಿ ಕುರುಡುಗಾನಹಳ್ಳಿ ಶಾಲೆಗೆ ಭೇಟಿ ನೀಡುತ್ತೇನೆ ಎಂದು ಮಧುಗಿರಿ ಡಿಡಿಪಿಐ ರೇವಣ್ಣಸಿದ್ದಪ್ಪ ಹೇಳಿದರು.

Vijaya Karnataka Web 11 Jan 2021, 12:52 pm
Loading ...