Please enable javascript.ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ - ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ - Vijay Karnataka

ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ

ವಿಕ ಸುದ್ದಿಲೋಕ 24 May 2013, 8:36 pm
Subscribe

ನಗರ ಪರಿಸರದಲ್ಲಿ ಕಳೆದ ಒಂದು ವರ್ಷದಿಂದ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಗುರುವಾರ ಶಂಕರಪುರದ ವಿಶ್ವಾಸದ ಮನೆಯ ತಂಡ ಈತನನ್ನು ಆದಿ ಉಡುಪಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆ ಹಚ್ಚಿ ತನ್ನೊಂದಿಗೆ ಕರೆದೊಯ್ಯಿತು.

ಮಾನಸಿಕ ಅಸ್ವಸ್ಥ ವಿಶ್ವಾಸದ ಮನೆಗೆ
ಉಡುಪಿ: ನಗರ ಪರಿಸರದಲ್ಲಿ ಕಳೆದ ಒಂದು ವರ್ಷದಿಂದ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಗುರುವಾರ ಶಂಕರಪುರದ ವಿಶ್ವಾಸದ ಮನೆಯ ತಂಡ ಈತನನ್ನು ಆದಿ ಉಡುಪಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆ ಹಚ್ಚಿ ತನ್ನೊಂದಿಗೆ ಕರೆದೊಯ್ಯಿತು.

ಈ ಮಾನಸಿಕ ಅಸ್ವಸ್ಥ ಉಡುಪಿ ನಗರದಲ್ಲಿ ಅರೆನಗ್ನನಾಗಿ ಸಂಚರಿ ಸುತ್ತಿದ್ದ. ಒಂದೆಡೆ ನಿಲ್ಲದೆ ನಿರಂತರವಾಗಿ ತಿರುಗಾಡುತ್ತಿದ್ದ ಕಾರಣ ಈತನನ್ನು ವಿಶ್ವಾಸದ ಮನೆಗೆ ಸೇರಿಸುವ ಪ್ರಯತ್ನ ಸಫಲವಾಗಿರಲಿಲ್ಲ. ಜನರ ಕರೆಯನ್ನು ಆಧರಿಸಿ ಬಂದ ವಿಶ್ವಾಸದ ಮನೆಯ ತಂಡ ಅನೇಕ ಬಾರಿ ಬರಿಗೈಯಲ್ಲಿ ವಾಪಸ್ ಆಗಿತ್ತು. ಗುರುವಾರ ಮತ್ತೆ ಕಾರ್ಯಾಚರಣೆ ನಡೆಸಿದ ತಂಡ ಈತನನ್ನು ಆದಿ ಉಡುಪಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆ ಹಚ್ಚಿ ಸ್ಥಳೀಯರ ಸಹಕಾರದಿಂದ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಹೆಸರು ನೆನಪಿಲ್ಲದ ಈತ ಹಳೆ ಗನ್ನಡದಲ್ಲಿ ಅದೇನೋ ಗುಣಗುಣಿಸುತ್ತಿದ್ದುದು ಕಂಡುಬಂತು.

ಈ ಕಾರ್ಯಾಚರಣೆಯಲ್ಲಿ ವಿಶ್ವಾಸದ ಮನೆಯ ಮುಖ್ಯಸ್ಥ ಫಾ. ಸುನೀಲ್ ಡಿಸೋಜ ಹಾಗೂ ಸಂಸ್ಥೆಯ ಕ್ಸೇವಿಯರ್ ಮ್ಯಾಥ್ಯೂ, ದೀಪಕ್ ಸಾಲಿನ್ಸ್, ಪ್ರಸಾದ್ ಪ್ರಭು ಹಾಗೂ ಎಲಿಜಬೆತ್ ಪಾಲ್ಗೊಂಡಿದ್ದರು.

ಮಾನಸಿಕ ಅಸ್ವಸ್ಥರಿಗೆ ಹಾಗೂ ಅನಾಥರಿಗೆ ಆಶ್ರಯ ನೀಡುವ ಉಡುಪಿ ಸಮೀಪದ ಶಂಕರಪುರದ ವಿಶ್ವಾಸದ ಮನೆ ಉಡುಪಿ, ಮಂಗಳೂರು ಪ್ರದೇಶದಲ್ಲಿ ತಿರುಗಾಡಿಕೊಂಡಿದ್ದ 100ಕ್ಕೂ ಅಧಿಕ ಮಾನಸಿಕ ಅಸ್ವಸ್ಥರಿಗೆ ಉಚಿತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದಲ್ಲದೆ ಅವರನ್ನು ಕ್ಷೇಮವಾಗಿ ಅವರ ಕುಟುಂಬಿಕರ ಕೈಗೊಪ್ಪಿಸಿ ಬಂದಿದೆ. ಸಂಸ್ಥೆಯಲ್ಲಿ ಇನ್ನೂ ಇಂತಹ 70 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಇಲ್ಲಿನ ವಿಶ್ವಾಸದ ಆರೈಕೆಯಿಂದ ಮಾನಸಿಕ ವಿಕಲ್ಪತೆಯಿಂದ ಹೊರಬಂದ ಸುಮಾರು 50 ಮಂದಿ ತಮ್ಮ ಕುಟುಂಬಿಕರನ್ನು ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಮಾನಸಿಕ ಸಮತೋಲನವನ್ನು ಕಳೆದುಕೊಂಡು ಹುಚ್ಚರಾಗಿ ಎಲ್ಲೆಲ್ಲೋ ಅದೆಷ್ಟೋ ವರ್ಷ ಕಳೆದ ಈ ಮಂದಿ ಇದೀಗ ಗುಣಮುಖರಾಗಿ ಮನೆಮಂದಿಯನ್ನು ಜ್ಞಾಪಿಸುತ್ತಾ ಕಣ್ಣೀರಿಡುತ್ತಿದ್ದಾರೆ. ಉತ್ತರಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಸೇರಿದ ಈ ಮಂದಿ ನೆನಪಿಸುವ ಅಸ್ಪಷ್ಟ ವಿಳಾಸ ಹಾಗೂ ಅಷ್ಟುದೂರಕ್ಕೆ ಕರೆದೊಯ್ದು ಬಿಡಲು ಬೇಕಾದ ಅಪಾರ ಹಣಕಾಸು ಸಮಸ್ಯೆಯಿಂದಾಗಿ ಈ ಕಾರ್ಯ ವಿಳಂಬವಾಗುತ್ತಿದೆ. ಸಮಾಜದ ದಾನಿಗಳು ಈ ಬಗ್ಗೆ ಸ್ಪಂದಿಸಿ ನೆರವು ನೀಡಲು ಮುಂದೆ ಬರಬೇಕು ಎಂದು ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ