ಉಡುಪಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಮಂಗಳೂರು, ಉಡುಪಿ ಕಡೆಯಿಂದ ಹೋಗುವ ಎಲ್ಲ ರೈಲುಗಳು 10 ಗಂಟೆಗೂ ಅಧಿಕ ತಡವಾಗಿ ಚಲಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಮಹಾರಾಷ್ಟ್ರಕ್ಕೆ ತೆರಳುವ ಮಂಗಳ ಎಕ್ಸ್ಪ್ರೆಸ್ ಉಡುಪಿಯಿಂದ ಮಂಗಳವಾರ ಸಂಜೆ 7 ಗಂಟೆಗೆ ದಾಟಿ ಹೋಗಬೇಕಿತ್ತು, ಉಡುಪಿಯಿಂದ 9 ಗಂಟೆಗೆ ಹೊರಟು, ಕುಂದಾಪುರದಲ್ಲೂ 1 ಗಂಟೆ ನಿಂತು ರಾತ್ರಿ 12 ಗಂಟೆ ಹೊತ್ತಿಗೆ ಅಂಕೋಲ ತಲುಪಿದೆ. ಆದರೆ, ಅಲ್ಲಿಂದ ಮುಂದೆ ಚಲಿಸದೆ ಇದ್ದಾಗ ಪ್ರಯಾಣಿಕರು ಆಕ್ರೋಶಿತರಾದರೂ ಏನೂ ಮಾಡುವಂತಿರಲಿಲ್ಲ. ಗೋವಾದ ಮಡಗಾಂವ್ ವರೆಗೆ ಆದರೂ ಹೋಗಿ ಎಂದು ಕೇಳಿಕೊಂಡರೂ ರೈಲು ಚಲಿಸಿಲ್ಲ.
ಬುಧವಾರ ಮತ್ಸ್ಯಗಂಧ ಎಕ್ಸ್ಪ್ರೆಸ್ ಬಂದಾಗ ಅದನ್ನು ಮುಂದಕ್ಕೆ ಹೋಗಲು ಅವಕಾಶ ನೀಡಿದಾಗ ಮಂಗಳ ಎಕ್ಸ್ಪ್ರೆಸ್ನ ಪ್ರಯಾಣಿಕರ ಸಿಟ್ಟು ಕಟ್ಟೆಯೊಡೆದು ಟ್ರಾಕ್ಗೆ ಇಳಿದು ಪ್ರತಿಭಟಿಸಿದರು. ಇದರಿಂದ ಮತ್ಸ್ಯಗಂಧವೂ ಚಲಿಸದಂತಾಯಿತು. ಆಗ ರೈಲ್ವೆ ಅಧಿಕಾರಿಗಳು ಮಂಗಳ ಎಕ್ಸ್ಪ್ರೆಸ್ಗೆ ಮುಂದಕ್ಕೆ ಚಲಿಸಲು ಅವಕಾಶ ನೀಡಿದ್ದರಿಂದ ಪ್ರಯಾಣಿಕರು ಸಂತೋಷಗೊಂಡರಾದರೂ ಅಂಕೋಲದಿಂದ ಕಾರವಾರಕ್ಕೆ ಹೋಗಿ ನಿಂತ ಮಂಗಳ ಎಕ್ಸ್ಪ್ರೆಸ್ ಬುಧವಾರ ಮಧ್ಯಾಹ್ನವರೆಗೂ ಮುಂದಕ್ಕೆ ಚಲಿಸಿಲ್ಲ. ಉಡುಪಿಯ ಛಾಯಾಗ್ರಾಹಕರಾದ ಸುಂದರ್, ಫೋಕಸ್ ರಾಘು ಮತ್ತು ತಂಡ ಕೂಡಾ ಇದೇ ರೈಲಿನಲ್ಲಿ ಚಲಿಸಿ ಸಿಕ್ಕಿಬಿದ್ದಿದ್ದಾರೆ.
ಮಹಾರಾಷ್ಟ್ರಕ್ಕೆ ತೆರಳುವ ಮಂಗಳ ಎಕ್ಸ್ಪ್ರೆಸ್ ಉಡುಪಿಯಿಂದ ಮಂಗಳವಾರ ಸಂಜೆ 7 ಗಂಟೆಗೆ ದಾಟಿ ಹೋಗಬೇಕಿತ್ತು, ಉಡುಪಿಯಿಂದ 9 ಗಂಟೆಗೆ ಹೊರಟು, ಕುಂದಾಪುರದಲ್ಲೂ 1 ಗಂಟೆ ನಿಂತು ರಾತ್ರಿ 12 ಗಂಟೆ ಹೊತ್ತಿಗೆ ಅಂಕೋಲ ತಲುಪಿದೆ. ಆದರೆ, ಅಲ್ಲಿಂದ ಮುಂದೆ ಚಲಿಸದೆ ಇದ್ದಾಗ ಪ್ರಯಾಣಿಕರು ಆಕ್ರೋಶಿತರಾದರೂ ಏನೂ ಮಾಡುವಂತಿರಲಿಲ್ಲ. ಗೋವಾದ ಮಡಗಾಂವ್ ವರೆಗೆ ಆದರೂ ಹೋಗಿ ಎಂದು ಕೇಳಿಕೊಂಡರೂ ರೈಲು ಚಲಿಸಿಲ್ಲ.
ಬುಧವಾರ ಮತ್ಸ್ಯಗಂಧ ಎಕ್ಸ್ಪ್ರೆಸ್ ಬಂದಾಗ ಅದನ್ನು ಮುಂದಕ್ಕೆ ಹೋಗಲು ಅವಕಾಶ ನೀಡಿದಾಗ ಮಂಗಳ ಎಕ್ಸ್ಪ್ರೆಸ್ನ ಪ್ರಯಾಣಿಕರ ಸಿಟ್ಟು ಕಟ್ಟೆಯೊಡೆದು ಟ್ರಾಕ್ಗೆ ಇಳಿದು ಪ್ರತಿಭಟಿಸಿದರು. ಇದರಿಂದ ಮತ್ಸ್ಯಗಂಧವೂ ಚಲಿಸದಂತಾಯಿತು. ಆಗ ರೈಲ್ವೆ ಅಧಿಕಾರಿಗಳು ಮಂಗಳ ಎಕ್ಸ್ಪ್ರೆಸ್ಗೆ ಮುಂದಕ್ಕೆ ಚಲಿಸಲು ಅವಕಾಶ ನೀಡಿದ್ದರಿಂದ ಪ್ರಯಾಣಿಕರು ಸಂತೋಷಗೊಂಡರಾದರೂ ಅಂಕೋಲದಿಂದ ಕಾರವಾರಕ್ಕೆ ಹೋಗಿ ನಿಂತ ಮಂಗಳ ಎಕ್ಸ್ಪ್ರೆಸ್ ಬುಧವಾರ ಮಧ್ಯಾಹ್ನವರೆಗೂ ಮುಂದಕ್ಕೆ ಚಲಿಸಿಲ್ಲ. ಉಡುಪಿಯ ಛಾಯಾಗ್ರಾಹಕರಾದ ಸುಂದರ್, ಫೋಕಸ್ ರಾಘು ಮತ್ತು ತಂಡ ಕೂಡಾ ಇದೇ ರೈಲಿನಲ್ಲಿ ಚಲಿಸಿ ಸಿಕ್ಕಿಬಿದ್ದಿದ್ದಾರೆ.