ಕಾರ್ಕಳ: ಆನೆಕೆರೆ ಶ್ರೀಕೃಷ್ಣ ಕ್ಷೇತ್ರ ದೇವಸ್ಥಾನಕ್ಕೆ ಒಳ ನುಗ್ಗಿದ ಕಳ್ಳರು 2.52 ಲಕ್ಷ ರೂ. ಮೌಲ್ಯದ ನಗ, ನಗದನ್ನು ಗುರುವಾರ ರಾತ್ರಿ ಕಳವು ಮಾಡಿದ್ದಾರೆ. ಪತಾಕೆ- 4, ಸತ್ತಿಗೆ-1, 2 ಕಿಲೋ ತೂಕದ ಶ್ರೀಕೃಷ್ಣ ದೇವರ ಬೆಳಿಯ ಪ್ರಭಾವಳಿ, 350 ಗ್ರಾಂ ತೂಕದ ಬೆಳ್ಳಿಯ ಕಿರೀಟ, 175ಗ್ರಾಂ ತೂಕದ ಬೆಳ್ಳಿಯ ಕೊಳಲು, 1750 ಗ್ರಾಂ ತೂಕದ ಚಿನ್ನದ ನೇತ್ರಗಳು, 1350 ಗ್ರಾಂ ತೂಕದ ಬೆಳ್ಳಿಯ ಕಿರೀಟ, ಮುಖವಾಡ ಮತ್ತು 4 ಕೈಗಳ ಕವಚ, 200 ಗ್ರಾಂ.ತೂಕದ ಬೆಳ್ಳಿಯ ಮೂರ್ತಿ, 100 ಗ್ರಾಂ ತೂಕದ ಬೆಳ್ಳಿಯ ಮೂರ್ತಿ, 150 ಗ್ರಾಂ ತೂಕದ ಲಕ್ಮಿ ದೇವರ ಮೂರ್ತಿ, ಸ್ಟೀಲಿನ ಕಾಣಿಕೆ ಡಬ್ಬಿ- 4 ಸೇರಿದಂತೆ 2,52,500ರೂ. ಮೌಲ್ಯದ ನಗ ನಗದನ್ನು ಕಳವು ಮಾಡಿದ್ದಾರೆ.
ಶ್ವಾನ ದಳ: ದೇವಳದ ಕಳವು ಪತ್ತೆಗಾಗಿ ಶ್ವಾನದಳ ಆಗಮಿಸಿದೆ. ಅಲ್ಲದೆ ಕಳೆದ ಒಂದು ವಾರದ ಹಿಂದೆ ನಗರದ ವಿಶ್ವೇಶ್ವರ ವೇಣುಗೋಪಾಲ ದೇವಳದಲ್ಲಿ ಕಳವು ನಡೆದಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ವಾನ ದಳ: ದೇವಳದ ಕಳವು ಪತ್ತೆಗಾಗಿ ಶ್ವಾನದಳ ಆಗಮಿಸಿದೆ. ಅಲ್ಲದೆ ಕಳೆದ ಒಂದು ವಾರದ ಹಿಂದೆ ನಗರದ ವಿಶ್ವೇಶ್ವರ ವೇಣುಗೋಪಾಲ ದೇವಳದಲ್ಲಿ ಕಳವು ನಡೆದಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.