Please enable javascript.Shobha Karandlaje,ಲಾಕ್ ಡೌನ್ ಅವಧಿಯಲ್ಲಿ ಶೋಭಾ ಕರಂದ್ಲಾಜೆ ಏನು ಮಾಡಿದ್ರು? ಅವರು ಕೊಟ್ಟ ಉತ್ತರ ಹೀಗಿದೆ ! - bjp leader shobha karandlaje video statement viral on social media - Vijay Karnataka

ಲಾಕ್ ಡೌನ್ ಅವಧಿಯಲ್ಲಿ ಶೋಭಾ ಕರಂದ್ಲಾಜೆ ಏನು ಮಾಡಿದ್ರು? ಅವರು ಕೊಟ್ಟ ಉತ್ತರ ಹೀಗಿದೆ !

Vijaya Karnataka Web 6 May 2020, 9:36 am
Subscribe

ಲಾಕ್‌ಡೌನ್ ಅವಧಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದರು? ಲಾಕ್‌ಡೌನ್ ಕುರಿತಾದ ಆಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅದಕ್ಕೆ ಶೋಭಾ ಕೊಟ್ಟ ಉತ್ತರದ ವಿಡಿಯೋ ಚರ್ಚೆಯನ್ನು ಹುಟ್ಟುಹಾಕಿದೆ.

shobha karandaje
ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಶೋಭಾ ಸ್ಪಂದಿಸುತ್ತಿದ್ದಾರಾ? ಲಾಕ್‌ಡೌನ್‌ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಶೋಭಾ ಕರಂದ್ಲಾಜೆ ನೀಡುತ್ತಿರುವ ಸಹಕಾರ ಏನು ಎಂಬ ಕುರಿತಾಗಿ ಅವರು ನೀಡಿದ ವಿಡಿಯೋ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಂಸದೆ ಶೋಭಾ ನಡೆಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಂಸದೆಗೆ ಯುವಕನೋರ್ವ ಮಾಡಿದ ಫೋನ್‌ ಕಾಲ್‌ ಹಾಗೂ ಅದಕ್ಕೆ ಶೋಭಾ ನೀಡಿರುವ ಉತ್ತರವೂ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಏನಿದು ಶೋಭಾ v/s ಫೋನ್ ಕಾಲ್‌ ?

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಂಡಿರುವ ಕುರಿತಾಗಿ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಫೋನ್ ಮಾಡುತ್ತಾರೆ. ಲಾಕ್‌ಡೌನ್ ಕುರಿತಾಗಿ ಜನರಲ್ಲಿ ಗೊಂದಲವಿದ್ದು ಅದನ್ನು ಬಗೆಹರಿಸುವಂತೆ ಕೇಳುತ್ತಾರೆ. ಆದರೆ ಇದಕ್ಕೆ ಶೋಭಾ ಕರಂದ್ಲಾಜೆ ಸೂಕ್ತ ಉತ್ತರ ನೀಡಿಲ್ಲ. ಲಾಕ್‌ಡೌನ್ ಅವಧಿ ಕುರಿತಾಗಿ ನನಗೂ ತಿಳಿದಿಲ್ಲ ಎಂಬ ಅರ್ಥದಲ್ಲಿ ಉತ್ತರ ನೀಡಿದ್ದರು.

ಬೆಂಗಳೂರು ಬಿಟ್ಟು ಹಸಿದು ಹೋಗದಿರಲೆಂದು ಹೊಟ್ಟೆ ತುಂಬ ಆಹಾರ ಕೊಟ್ಟು ಕಳುಹಿಸುತ್ತಿರುವ ದಾನಿಗಳು

ಈ ಆಡಿಯೋ ಸಾಕಷ್ಟು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಂಸದೆಯ ಉತ್ತರಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶೋಭಾ ಕರಂದ್ಲಾಜೆ ನೀಡಿರುವ ವಿಡಿಯೋ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ತನ್ನ ಕುರಿತಾದ ಆಡಿಯೋವನ್ನು ಕೆಲವರು ವೈರಲ್ ಮಾಡುತ್ತಿರುವ ಕುರಿತಾಗಿ ಅಸಮಧಾನ ವ್ಯಕ್ತಪಡಿಸಿದ ಶೋಭಾ, ಲಾಕ್‌ಡೌನ್ ಅವಧಿಯಲ್ಲಿ ತಾನು ಏನೆಲ್ಲಾ ಕೆಲಸ ಮಾಡಿದ್ದೇನೆ ಎಂಬ ವಿವರಣೆಯನ್ನು ವಿಡಿಯೋ ಮೂಲಕ ನೀಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ‘ಜಿಹಾದಿಗಳ’ ವಿರುದ್ಧ ಸಿಡಿದೆದ್ದ ಶೋಭಾ !

ಲಾಕ್‌ ಡೌನ್ ಅವಧಿಯಲ್ಲಿ ಶೋಭಾ ಕರಂದ್ಲಾಕೆ ಮಸ್ಕತ್‌ನಲ್ಲಿರುವ ಜಿಹಾದಿಗಳ ವಿರುದ್ಧ ಸಿಡಿದೆದ್ದಿದ್ದಾರೆ ಎಂಬ ವಿಚಾರವನ್ನು ಅವರು ತಮ್ಮ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ. ಮಸ್ಕತ್‌ನಲ್ಲಿರುವ ಕೇರಳದ ಡ್ರೈವರ್‌ ಓರ್ವನಿಗೆ ಕೆಲವು ಯುವಕರು ಹಲ್ಲೆ ಮಾಡಿರುವ ವಿಡಿಯೋ ಒಂದು ವೈರಲ್ ಆಗಿತ್ತು.

ಕೈಮುಗಿಯುವೆ ಕಾರ್ಮಿಕರೇ, ಬೆಂಗಳೂರು ಬಿಟ್ಟು ಹೋಗ್ಬೇಡಿ: ಸಿಎಂ ಯಡಿಯೂರಪ್ಪ ವಿನಂತಿ

ಹಲ್ಲೆಗೊಳಗಾದ ವ್ಯಕ್ತಿ ಕೇರಳದ ಬಿಜೆಪಿ ಕಾರ್ಯಕರ್ತನಾಗಿದ್ದು ಲಾಕ್‌ಡೌನ್ ಅವಧಿಯಲ್ಲಿ ಅವರ ಸಹಾಯಕ್ಕೆ ತಾನು ಧಾವಿಸಿದ್ದೇನೆ ಎಂದು ಶೋಭಾ ಹೇಳಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಈ ಕುರಿತಾಗಿ ಪತ್ರವನ್ನು ಬರೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನೂರಾರು ಬೆದರಿಕೆ ಕರೆಗಳು ಬರುತ್ತಿವೆ ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.


ಲಾಕ್‌ಡೌನ್ ಕುರಿತಾದ ಮಾಹಿತಿಯನ್ನು ಕೇಳಿದ ಆಡಿಯೋ ವೈರಲ್ ಆದ ಬಳಿಕ ವಿದೇಶದಿಂದ ಕರೆಗಳು ಬರುತ್ತಿವೆ ಎಂದಿದ್ದಾರೆ. ತಮ್ಮ ವಿರುದ್ಧ ಮಾತನಾಡುವ ನಿಮಗೆ ಲಾಕ್‌ಡೌನ್ ಅವಧಿಯ ಕುರಿತಾಗಿ ಇಲ್ವಾ ಎಂದು ಕೇಳಿದ್ದಾರೆ ಎಂದಿದ್ದಾರೆ ಶೋಭಾ. ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಪೊಲೀಸರು ಇಂಟರ್‌ನೆಟ್‌ ಕಾಲ್‌ ಪತ್ತೆಹಚ್ಚಲು ಸಾಧ್ಯವಿಲ್ಲ ಎಂದು ಕೈತೊಳೆದುಬಿಡುತ್ತಾರೆ ಎಂದೂ ಶೋಭಾ ಆರೋಪಿಸಿದ್ದಾರೆ.

ಊರಿಗೆ ಯಾಕೆ ಹೊಂಟೀವಿ ಅಂದ್ರ, ನಮ್ಮೂರಲ್ಲಿ ನೆಮ್ಮದಿಯಾಗಿ ಸಾಯಬೋದಲ್ರೀ...

ಒಟ್ಟಿನಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಲಾಕ್‌ಡೌನ್ ಮಾಹಿತಿ ಕೋರಿದ ಯುವಕನೊಬ್ಬನ ಆಡಿಯೋ ಹಾಗೂ ಅದಕ್ಕೆ ಉತ್ತರವಾಗಿ ಶೋಭಾ ಅವರು ನೀಡಿರುವ ಉತ್ತರದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಶೋಭಾ ಅವರು ಲಾಕ್‌ಡೌನ್ ಅವಧಿಯಲ್ಲಿ 'ಜಿಹಾದಿ'ಗಳ ವಿರುದ್ಧ ಹೋರಾಟ ಮಾಡಿದರು ಎಂದು ಕೆಲವರು ಮೆಚ್ಚುಗೆ ಸೂಚಿಸಿದರೆ, ಜನರ ಸಮಸ್ಯೆಗೆ ಸ್ಪಂದಿಸದ ಸಂಸದೆ ಕೇರಳದ ಯವಕನ ಮೇಲೆ ಮಸ್ಕತ್‌ನಲ್ಲಿ ನಡೆದ ಹಲ್ಲೆ ಘಟನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎನ್ನುತ್ತಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ