ಶಿರಸಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗಕ್ಕೆ 45 ಹೊಸ ಬಸ್ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿಶನಿವಾರ ಶಿರಸಿ-ಮುಂಡಗೊಡ-ಹುಬ್ಬಳ್ಳಿ ಮಾರ್ಗದಲ್ಲಿಎರಡು ಹೊಸ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ನಗರ ಸಾರಿಗೆ ವ್ಯವಸ್ಥೆಗೆ 12 ಹೊಸ ಡಬಲ್ ಡೋರ್ ಬಸ್ಗಳನ್ನು ನೀಡಲಾಗುತ್ತದೆ ಎಂದರು.
ವಾಕರಸಾ ಸಂಸ್ಥೆಯಡಿ 9 ವಿಭಾಗಗಳು ಬರುತ್ತವೆ. ಆ ಎಲ್ಲವಿಭಾಗಗಳಿಗೂ ಇದೇ ರೀತಿ ಹೊಸ ಬಸ್ ಸೌಲಭ್ಯ ಒದಗಿಸಲಾಗುತ್ತದೆ. ಸಂಸ್ಥೆಗೆ ಪ್ರತಿ ದಿನ 50 ಲಕ್ಷ ರೂ. ಹಾನಿಯಾಗುತ್ತಿದೆ. ಶಿರಸಿ ಡಿಪೋ ವ್ಯಾಪ್ತಿಯಲ್ಲಿತಿಂಗಳಿಗೆ 2 ಲಕ್ಷ ರೂ. ಹಾನಿಯುಂಟಾಗುತ್ತಿದೆ ಎಂದು ವಿವರಿಸಿದರು.
ಬಸ್ ನಿಲ್ದಾಣದಲ್ಲಿಸಿಸಿಟಿವಿ ಅಳವಡಿಕೆ ಟೆಂಡರ್ ಪ್ರಕ್ರಿಯೆ ಬೆಂಗಳೂರಿನ ಹಂತದಲ್ಲಿನಡೆಯುತ್ತದೆ. ಆದರೆ ಅಲ್ಲಿಟೆಂಡರ್ ಕರೆದರೂ ಯಾರೂ ಹಾಕದೇ ಇರುವುದರಿಂದ ವಿಳಂಬವಾಗಿದೆ. ಹೀಗಾಗಿ ಅದರಲ್ಲಿನ ನಿಯಮ ಸರಳೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಬಸ್ ಓಡಿಸಿದ ಪಾಟೀಲ್ : ಹೊಸ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಹೊಸ ಬಸ್ ಏರಿ ಡ್ರೈವರ್ ಸೀಟ್ನಲ್ಲಿಕುಳಿತು ನಿಲ್ದಾಣದ ಅನತಿ ದೂರ ಬಸ್ ಚಲಾಯಿಸಿದರು. ಈ ಸಂದರ್ಭದಲ್ಲಿಸೇರಿದ್ದ ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು.
ಹೊಸ ಬಸ್ ನಿಲ್ದಾಣ ನಿರ್ಮಾಣ : ಶಿರಸಿಯ ಹಳೆ ಬಸ್ ನಿಲ್ದಾಣ ಕೆಡವಿ ಹೊಸ ಬಸ್ ನಿಲ್ದಾಣವನ್ನು ಇಲ್ಲೇ ಅಂಚಿನಲ್ಲಿಕಟ್ಟಲಾಗುತ್ತದೆ. ಇದಕ್ಕಾಗಿ ಈಗಾಗಲೇ ಕ್ರಿಯಾಯೋಜನೆ ಕಳುಹಿಸಿದ್ದೇವೆ. ಅನುದಾನ ದೊರೆತರೆ ಕೆಲವೇ ತಿಂಗಳಲ್ಲಿಕೆಲಸ ಆರಂಭಿಸುತ್ತೇವೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿಶನಿವಾರ ಶಿರಸಿ-ಮುಂಡಗೊಡ-ಹುಬ್ಬಳ್ಳಿ ಮಾರ್ಗದಲ್ಲಿಎರಡು ಹೊಸ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ನಗರ ಸಾರಿಗೆ ವ್ಯವಸ್ಥೆಗೆ 12 ಹೊಸ ಡಬಲ್ ಡೋರ್ ಬಸ್ಗಳನ್ನು ನೀಡಲಾಗುತ್ತದೆ ಎಂದರು.
ವಾಕರಸಾ ಸಂಸ್ಥೆಯಡಿ 9 ವಿಭಾಗಗಳು ಬರುತ್ತವೆ. ಆ ಎಲ್ಲವಿಭಾಗಗಳಿಗೂ ಇದೇ ರೀತಿ ಹೊಸ ಬಸ್ ಸೌಲಭ್ಯ ಒದಗಿಸಲಾಗುತ್ತದೆ. ಸಂಸ್ಥೆಗೆ ಪ್ರತಿ ದಿನ 50 ಲಕ್ಷ ರೂ. ಹಾನಿಯಾಗುತ್ತಿದೆ. ಶಿರಸಿ ಡಿಪೋ ವ್ಯಾಪ್ತಿಯಲ್ಲಿತಿಂಗಳಿಗೆ 2 ಲಕ್ಷ ರೂ. ಹಾನಿಯುಂಟಾಗುತ್ತಿದೆ ಎಂದು ವಿವರಿಸಿದರು.
ಬಸ್ ನಿಲ್ದಾಣದಲ್ಲಿಸಿಸಿಟಿವಿ ಅಳವಡಿಕೆ ಟೆಂಡರ್ ಪ್ರಕ್ರಿಯೆ ಬೆಂಗಳೂರಿನ ಹಂತದಲ್ಲಿನಡೆಯುತ್ತದೆ. ಆದರೆ ಅಲ್ಲಿಟೆಂಡರ್ ಕರೆದರೂ ಯಾರೂ ಹಾಕದೇ ಇರುವುದರಿಂದ ವಿಳಂಬವಾಗಿದೆ. ಹೀಗಾಗಿ ಅದರಲ್ಲಿನ ನಿಯಮ ಸರಳೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಬಸ್ ಓಡಿಸಿದ ಪಾಟೀಲ್ : ಹೊಸ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಹೊಸ ಬಸ್ ಏರಿ ಡ್ರೈವರ್ ಸೀಟ್ನಲ್ಲಿಕುಳಿತು ನಿಲ್ದಾಣದ ಅನತಿ ದೂರ ಬಸ್ ಚಲಾಯಿಸಿದರು. ಈ ಸಂದರ್ಭದಲ್ಲಿಸೇರಿದ್ದ ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು.
ಹೊಸ ಬಸ್ ನಿಲ್ದಾಣ ನಿರ್ಮಾಣ : ಶಿರಸಿಯ ಹಳೆ ಬಸ್ ನಿಲ್ದಾಣ ಕೆಡವಿ ಹೊಸ ಬಸ್ ನಿಲ್ದಾಣವನ್ನು ಇಲ್ಲೇ ಅಂಚಿನಲ್ಲಿಕಟ್ಟಲಾಗುತ್ತದೆ. ಇದಕ್ಕಾಗಿ ಈಗಾಗಲೇ ಕ್ರಿಯಾಯೋಜನೆ ಕಳುಹಿಸಿದ್ದೇವೆ. ಅನುದಾನ ದೊರೆತರೆ ಕೆಲವೇ ತಿಂಗಳಲ್ಲಿಕೆಲಸ ಆರಂಭಿಸುತ್ತೇವೆ ಎಂದು ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದರು.