ಆ್ಯಪ್ನಗರ

ವದಂತಿ, ಉಹಾಪೋಹಕ್ಕೆ ಕಿವಿಗೊಡದಿರಿ

ಶಿರಸಿ : ಶ್ರೀ ಮಾರಿಕಾಂಬಾ ಜಾತ್ರೆ ನಂತರ 6 ದಿನ ಮೊದಲೇ ಅಂಗಡಿ ಖಾಲಿ ಮಾಡಿದ ವ್ಯಾಪಾರಿಗಳಿಗೆ ಟೆಂಡರ ಮೂಲಕ ಭರಿಸಿದ ಹಣದಲ್ಲಿಶೇ. 10 ಹಿಂದಿರುಗಿಸುವ ವಿಷಯದಲ್ಲಿಯಾವುದೇ ರೀತಿಯ ಊಹಾಪೋಹ, ವದಂತಿಗಳಿಗೆ ಅವಕಾಶ ಮಾಡಿಕೊಡಬಾರದಂತೆ ಶ್ರೀ ಮಾರಿಕಾಂಬಾ ದೇವಸ್ಥಾನ ವಿನಂತಿಸಿದೆ.

Vijaya Karnataka 21 Mar 2020, 5:00 am
ಶಿರಸಿ : ಶ್ರೀ ಮಾರಿಕಾಂಬಾ ಜಾತ್ರೆ ನಂತರ 6 ದಿನ ಮೊದಲೇ ಅಂಗಡಿ ಖಾಲಿ ಮಾಡಿದ ವ್ಯಾಪಾರಿಗಳಿಗೆ ಟೆಂಡರ ಮೂಲಕ ಭರಿಸಿದ ಹಣದಲ್ಲಿಶೇ. 10 ಹಿಂದಿರುಗಿಸುವ ವಿಷಯದಲ್ಲಿಯಾವುದೇ ರೀತಿಯ ಊಹಾಪೋಹ, ವದಂತಿಗಳಿಗೆ ಅವಕಾಶ ಮಾಡಿಕೊಡಬಾರದಂತೆ ಶ್ರೀ ಮಾರಿಕಾಂಬಾ ದೇವಸ್ಥಾನ ವಿನಂತಿಸಿದೆ.
Vijaya Karnataka Web dont listen to rumor and speculation
ವದಂತಿ, ಉಹಾಪೋಹಕ್ಕೆ ಕಿವಿಗೊಡದಿರಿ


ಟೆಂಡರ ಮೂಲಕ ತಾತ್ಕಾಲಿಕ ಅಂಗಡಿ ಹಾಕಲು ಸ್ಥಳ ಪಡೆದಿದ್ದ ವ್ಯಕ್ತಿಗಳಿಂದ ದಾಖಲೆ ಸಮೇತ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಮರು ಪಾವತಿಗಾಗಿ ಸಲ್ಲಿಸುತ್ತಿರುವ ಹಲವಾರು ಅರ್ಜಿಗಳಲ್ಲಿಸರಿಯಾದ ದಾಖಲೆ ಹಾಗೂ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಅರ್ಜಿ ಪರಿಶೀಲಿಸಿ ಅಂತಿಮಗೊಳಿಸಲು ಆಡಳಿತಾತ್ಮಕ ಸಮಸ್ಯೆ ಉಂಟಾಗಿದೆ. ಅರ್ಜಿಗಳ ಪರಿಶೀಲನೆ ಪೂರ್ತಿಗೊಳ್ಳದೇ ಇರುವುದರಿಂದ ನಿರ್ಧರಿತ ವೆಚ್ಚ ಮರುಪಾವತಿಸಲು ಸಾಧ್ಯವಾಗಿರುವುದಿಲ್ಲ. ಆಡಳಿತಾತ್ಮಕ ವಿಷಯಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸರಕಾರ ತಕ್ಷಣದಲ್ಲಿಜಾತ್ರೆ, ಸಮಾರಂಭಗಳು ಇತ್ಯಾದಿ ಜನ ಸೇರುವ ಕಾರ್ಯಕ್ರಮ ಸ್ಥಗಿತಗೊಳಿಸಲು ಆದೇಶಿಸಿದ್ದರಿಂದ ತಕ್ಷಣ ಸ್ಥಳ ತೆರವು ಮಾಡಲು ಅಂಗಡಿಕಾರರಿಗೆ ಸೂಚಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿ ಹಲವಾರು ಅಂಗಡಿಕಾರರು, ಕೂಲಿ ಕಾರ್ಮಿಕರು, ಕಲಾವಿದರು ತಮಗೆ ಉಂಟಾಗಿರುವ ಸಮಸ್ಯೆ ಬಗೆಹರಿಸಿಕೊಡುವಂತೆ, ಟೆಂಡರ ಮೂಲಕ ಭರಿಸಿದ ಹಣ ಹಿಂದಿರುಗಿ ಕೊಡುವಂತೆ ಗುಂಪುಗುಂಪಾಗಿ ದೇವಸ್ಥಾನಕ್ಕೆ ಬಂದು ಮನವಿ ಮಾಡಿದ್ದರು. ಯಾವುದೇ ರೀತಿಯ ಗೊಂದಲಗಳಿಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಸಮಸ್ಯೆಯ ತೀವ್ರತೆ ಅರಿತು ಧರ್ಮದರ್ಶಿಗಳು, ಬಾಬುದಾರರು, ಜಾತ್ರಾ ಸವಾಲು ಸಮಿತಿ ಸದಸ್ಯರು, ಅರ್ಚಕರು, ದೇವಸ್ಥಾನದ ಸಿಬ್ಬಂದಿ ತುರ್ತು ಸಭೆ ಸೇರಿ ಸಮಸ್ಯೆಗೊಳಗಾದ ಕೂಲಿ ಕಾರ್ಮಿಕರು,ಕಲಾವಿದರು ಹಾಗೂ ಬೀದಿ ವ್ಯಾಪಾರಿಗಳ ಬೆಂಬಲಕ್ಕೆ ನಿಂತಿತ್ತು. ಊಟದ ವ್ಯವಸ್ಥೆ ಹಾಗೂ ವ್ಯಾಪಾರ ವಹಿವಾಟು ಇಲ್ಲದೇ ಆರು ದಿನ ಮೊದಲೇ ಅಂಗಡಿ ಖಾಲಿ ಮಾಡಿದ ವ್ಯಾಪಾರಿಗಳಿಗೆ ಟೆಂಡರ ಮೂಲಕ ಭರಿಸಿದ ಹಣದಲ್ಲಿಶೇ. 10 ಹಿಂದಿರುಗಿಸುವ ಕುರಿತು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿತ್ತು.

ಸರ್ವಸಮ್ಮತ ತೀರ್ಮಾನ : ಜಾತ್ರೆಯ ಸಮಯದಲ್ಲಿಸಮಸ್ಯೆಗೆ ಒಳಗಾದ ಜನರಿಗೆ ಅನುಕೂಲ ಮಾಡಿಕೊಡುವ ನಿರ್ಣಯವು ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಸಂಬಂಧಿಸಿ ಧರ್ಮದರ್ಶಿ ಮಂಡಳಿ, ಬಾಬುದಾರರು,ಹರಾಜು ಸಮಿತಿ ಸದಸ್ಯರು, ಅರ್ಚಕರು ಎಲ್ಲರೂ ಸೇರಿ ತೀರ್ಮಾನ ಕೈಗೊಂಡಿದ್ದು ಈ ವಿಷಯದಲ್ಲಿಜಿಲ್ಲಾನ್ಯಾಯಾಧೀಶರಾಗಲೀ, ಜಿಲ್ಲಾಧಿಕಾರಿಗಳಾಗಲೀ ಅಥವಾ ಇನ್ಯಾವುದೇ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಭಾಗವಹಿಸಿದ್ದು ಅಥವಾ ಹಸ್ತಕ್ಷೇಪ ಮಾಡಿದ್ದು ಅಥವಾ ನಿರಾಕರಿಸುವ ಹೇಳಿಕೆ ನೀಡಿದ್ದು ಇಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ನ್ಯಾಯಾಧೀಶರ ಹಾಗೂ ಜಿಲ್ಲಾಧಿಕಾರಿಗಳ ಹೆಸರು ಪ್ರಸ್ತಾಪವಾಗಿದ್ದು ಖೇದಕರ. ಇಂತಹ ಘಟನೆಗಳು ಮರುಕಳಿಸಿದಲ್ಲಿಅವಶ್ಯ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ