ಅಂಕೋಲಾ : ನಾಟಕಗಳು ನಿರಂತರವಾಗಿ ಉಳಿಯಬೇಕು. ನಾಟಕದ ಮೂಲಕ ಜನರ ಮನಪರಿವರ್ತನೆ, ಮೌಢ್ಯತೆಯನ್ನು ದೂರ ಮಾಡುವ ಆಶಯವಾಗಬೇಕು ಎಂದು ನಾಮಾಂಕಿತ ಕಥೆಗಾರ ಡಾ. ಆರ್.ಜಿ. ಗುಂದಿ ಹೇಳಿದರು.
ತಾಲೂಕಿನ ಹಾರವಾಡದ ಮುಡೆಕಟ್ಟಾದಲ್ಲಿ ಶ್ರೀ ಸನ್ಯಾಸಿದೇವರ ರಥೋತ್ಸವ ಮತ್ತು ದಹಿಂಕಾಲ ಉತ್ಸವ ಸಂದರ್ಭದಲ್ಲಿ ಸುಜಿತ ನಾಯ್ಕ ಅವರ್ಸಾ ಅವರ 8ನೇ ಕೃತಿ 'ತಾಯಿ ಸಾಕ್ಷಿ' ಲೋಕಾರ್ಪಣೆ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷ ತೆವಹಿಸಿ ಸಿರಿಗನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ಸ್ವತಃ ನಟ, ನಾಟಕಕಾರರಾಗಿ ಜನಪ್ರಿಯತೆ ಪಡೆದಿರುವ ಸುಜಿತ ನಾಯ್ಕ ಅಂಕೋಲೆಯ ರಂಗಭೂಮಿ ಚರಿತ್ರೆಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದು, ಅವರ ನಾಟಕಗಳು ಬೆಳಕು ಕಾಣುತ್ತಿರುವುದು ರಂಗಪ್ರಿಯರಿಗೆ ಸಂತಸ ಹಾಗೂ ಸಂಭ್ರಮದ ಸಂಗತಿಯಾಗಿದೆ ಎಂದರು.
ಅವರ್ಸಾ ಗ್ರಾಮ ಪಂಚಾಯತ ಉಪಾಧ್ಯಕ್ಷ ರವಿ ವಿ. ಖಾರ್ವಿ, ಪರ್ಶಿಯನ್ ಬೋಟ್ನ ಪ್ರಮೂಖ ಜಯ ಬಾನಾವಳಿಕರ, ಹಿರಿಯ ರಂಗಭೂಮಿ ಕಲಾವಿದ ನಾಗೇಂದ್ರ ಅಂಚೇಕರ, ಸಾಮಾಜಿಕ ಕಾರ್ಯಕರ್ತ ಸುಧಾಕರ ಎಸ್. ಶೆಟ್ಟಿ, ಹಾರವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಕಾಂಚನ್, ಲೇಖಕ ಸುಜಿತ ಎನ್. ನಾಯ್ಕ, ಶ್ರೀ ಸನ್ಯಾಸಿ ದೇವಸ್ಥಾನದ ಕಮಿಟಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಕಲಾವಿದ ನಾಗರಾಜ ಜಾಂಬಾವಳಿಕರ ಸ್ವಾಗತಿಸಿದರು.
ತಾಲೂಕಿನ ಹಾರವಾಡದ ಮುಡೆಕಟ್ಟಾದಲ್ಲಿ ಶ್ರೀ ಸನ್ಯಾಸಿದೇವರ ರಥೋತ್ಸವ ಮತ್ತು ದಹಿಂಕಾಲ ಉತ್ಸವ ಸಂದರ್ಭದಲ್ಲಿ ಸುಜಿತ ನಾಯ್ಕ ಅವರ್ಸಾ ಅವರ 8ನೇ ಕೃತಿ 'ತಾಯಿ ಸಾಕ್ಷಿ' ಲೋಕಾರ್ಪಣೆ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷ ತೆವಹಿಸಿ ಸಿರಿಗನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ಮಾತನಾಡಿ, ಸ್ವತಃ ನಟ, ನಾಟಕಕಾರರಾಗಿ ಜನಪ್ರಿಯತೆ ಪಡೆದಿರುವ ಸುಜಿತ ನಾಯ್ಕ ಅಂಕೋಲೆಯ ರಂಗಭೂಮಿ ಚರಿತ್ರೆಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದು, ಅವರ ನಾಟಕಗಳು ಬೆಳಕು ಕಾಣುತ್ತಿರುವುದು ರಂಗಪ್ರಿಯರಿಗೆ ಸಂತಸ ಹಾಗೂ ಸಂಭ್ರಮದ ಸಂಗತಿಯಾಗಿದೆ ಎಂದರು.
ಅವರ್ಸಾ ಗ್ರಾಮ ಪಂಚಾಯತ ಉಪಾಧ್ಯಕ್ಷ ರವಿ ವಿ. ಖಾರ್ವಿ, ಪರ್ಶಿಯನ್ ಬೋಟ್ನ ಪ್ರಮೂಖ ಜಯ ಬಾನಾವಳಿಕರ, ಹಿರಿಯ ರಂಗಭೂಮಿ ಕಲಾವಿದ ನಾಗೇಂದ್ರ ಅಂಚೇಕರ, ಸಾಮಾಜಿಕ ಕಾರ್ಯಕರ್ತ ಸುಧಾಕರ ಎಸ್. ಶೆಟ್ಟಿ, ಹಾರವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಉಮೇಶ ಕಾಂಚನ್, ಲೇಖಕ ಸುಜಿತ ಎನ್. ನಾಯ್ಕ, ಶ್ರೀ ಸನ್ಯಾಸಿ ದೇವಸ್ಥಾನದ ಕಮಿಟಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಕಲಾವಿದ ನಾಗರಾಜ ಜಾಂಬಾವಳಿಕರ ಸ್ವಾಗತಿಸಿದರು.