Please enable javascript.ನೌಕಾದಳದ ಸಿಬ್ಬಂದಿಗೆ ಧರ್ಮದೇಟು - naval personnel - Vijay Karnataka

ನೌಕಾದಳದ ಸಿಬ್ಬಂದಿಗೆ ಧರ್ಮದೇಟು

Vijaya Karnataka 24 Jun 2019, 5:00 am
Subscribe

ಕಾರವಾರ : ಕುಡಿದು ವಾಹನ ಚಾಲನೆ ಮಾಡಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ ನೌಕಾದಳದ ಸಿಬ್ಬಂದಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ನಗರದಲ್ಲಿ ನಡೆದಿದೆ.

naval personnel
ನೌಕಾದಳದ ಸಿಬ್ಬಂದಿಗೆ ಧರ್ಮದೇಟು
ಕಾರವಾರ : ಕುಡಿದು ವಾಹನ ಚಾಲನೆ ಮಾಡಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ ನೌಕಾದಳದ ಸಿಬ್ಬಂದಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಬಿಣಗಾ ಬಳಿಯ ಕದಂಬ ನೌಕಾದಳ ಗೇಟ್‌ ಬಳಿ ಶನಿವಾರ ರಾತ್ರಿ ರಾಜಾಶಾಮ್‌ ಎನ್ನುವ ನೌಕಾದಳದ ಸಿಬ್ಬಂದಿ ಕುಡಿದು ವಾಹನ ಚಲಾಯಿಸಿದ್ದಾನೆ. ಕುಡಿದ ಮತ್ತಿನಲ್ಲಿ 3-4 ವಾಹನಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ಮುಂದೆ ಸಾಗಿದ್ದ. ಕಾರನ್ನು ಬಿಣಗಾ ಬಳಿಯ ನೌಕಾದಳದ ಗೇಟ್‌ ಬಳಿ ನಿಲ್ಲಿಸಿದ್ದ ವೇಳೆ ತಕ್ಷ ಣ ಸ್ಥಳಕ್ಕೆ ಬಂದ ಅಪಘಾತಕ್ಕೊಳಗಾದವರು, ನೌಕಾದಳ ಸಿಬ್ಬಂದಿಗೆ ಧರ್ಮದೇಟು ನೀಡಿದ್ದಾರೆ.

ಕುಡಿದು ವಾಹನ ಚಲಾವಣೆ ಕುರಿತು ಕಾರವಾರ ಸಂಚಾರಿ ಠಾಣೆಯಲ್ಲಿ ರಾಜಾಶಾಮ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ