ಕಾರವಾರ : ಕುಡಿದು ವಾಹನ ಚಾಲನೆ ಮಾಡಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದ ನೌಕಾದಳದ ಸಿಬ್ಬಂದಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಬಿಣಗಾ ಬಳಿಯ ಕದಂಬ ನೌಕಾದಳ ಗೇಟ್ ಬಳಿ ಶನಿವಾರ ರಾತ್ರಿ ರಾಜಾಶಾಮ್ ಎನ್ನುವ ನೌಕಾದಳದ ಸಿಬ್ಬಂದಿ ಕುಡಿದು ವಾಹನ ಚಲಾಯಿಸಿದ್ದಾನೆ. ಕುಡಿದ ಮತ್ತಿನಲ್ಲಿ 3-4 ವಾಹನಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ಮುಂದೆ ಸಾಗಿದ್ದ. ಕಾರನ್ನು ಬಿಣಗಾ ಬಳಿಯ ನೌಕಾದಳದ ಗೇಟ್ ಬಳಿ ನಿಲ್ಲಿಸಿದ್ದ ವೇಳೆ ತಕ್ಷ ಣ ಸ್ಥಳಕ್ಕೆ ಬಂದ ಅಪಘಾತಕ್ಕೊಳಗಾದವರು, ನೌಕಾದಳ ಸಿಬ್ಬಂದಿಗೆ ಧರ್ಮದೇಟು ನೀಡಿದ್ದಾರೆ.
ಕುಡಿದು ವಾಹನ ಚಲಾವಣೆ ಕುರಿತು ಕಾರವಾರ ಸಂಚಾರಿ ಠಾಣೆಯಲ್ಲಿ ರಾಜಾಶಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಬಿಣಗಾ ಬಳಿಯ ಕದಂಬ ನೌಕಾದಳ ಗೇಟ್ ಬಳಿ ಶನಿವಾರ ರಾತ್ರಿ ರಾಜಾಶಾಮ್ ಎನ್ನುವ ನೌಕಾದಳದ ಸಿಬ್ಬಂದಿ ಕುಡಿದು ವಾಹನ ಚಲಾಯಿಸಿದ್ದಾನೆ. ಕುಡಿದ ಮತ್ತಿನಲ್ಲಿ 3-4 ವಾಹನಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ಮುಂದೆ ಸಾಗಿದ್ದ. ಕಾರನ್ನು ಬಿಣಗಾ ಬಳಿಯ ನೌಕಾದಳದ ಗೇಟ್ ಬಳಿ ನಿಲ್ಲಿಸಿದ್ದ ವೇಳೆ ತಕ್ಷ ಣ ಸ್ಥಳಕ್ಕೆ ಬಂದ ಅಪಘಾತಕ್ಕೊಳಗಾದವರು, ನೌಕಾದಳ ಸಿಬ್ಬಂದಿಗೆ ಧರ್ಮದೇಟು ನೀಡಿದ್ದಾರೆ.
ಕುಡಿದು ವಾಹನ ಚಲಾವಣೆ ಕುರಿತು ಕಾರವಾರ ಸಂಚಾರಿ ಠಾಣೆಯಲ್ಲಿ ರಾಜಾಶಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.