Please enable javascript.Russia Ukraine Crisis,Russia Ukraine Crisis : ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ ಪುತ್ರನ ದೃಷ್ಟಿ ತೆಗೆದು ಸ್ವಾಗತಿಸಿದ ಪೋಷಕರು - russia ukraine crisis :medical student return to vijayapura from ukraine - Vijay Karnataka

Russia Ukraine Crisis : ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ ಪುತ್ರನ ದೃಷ್ಟಿ ತೆಗೆದು ಸ್ವಾಗತಿಸಿದ ಪೋಷಕರು

Vijaya Karnataka Web 6 Mar 2022, 2:37 pm
Subscribe

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದು ಭಾರೀ ಸಾವು ನೋವು ಸಂಭವಿಸುತ್ತಿದೆ. ಈ ಮಧ್ಯೆ ವಿಧ್ಯಾಭ್ಯಾಸಕ್ಕೆ ತೆರಳಿರುವ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಕರೆತರಲು ಕರ್ನಾಟಕ ಸರ್ಕಾರ ಭಾರೀ ಪ್ರಯತ್ನ ನಡೆಸುತ್ತಿದೆ. ಇದೀಗ ಉಕ್ರೇನ್‌ನಲ್ಲಿ ಮೆಡಿಕಲ್‌ ವಿದ್ಯಾಭ್ಯಾಸ ಮಾಡುತ್ತಿದ್ದ ವಿಜಯಪುರದ ವಿದ್ಯಾರ್ಥಿ ವಾಪಸ್ ಆಗಿದ್ದಾರೆ. ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ ಪುತ್ರನ ದೃಷ್ಠಿ ತೆಗೆದು ಪೋಷಕರು ಸ್ವಾಗತಿಸಿದ್ದಾರೆ.

ಹೈಲೈಟ್ಸ್‌:

  • ಉಕ್ರೇನ್ ವಿರುದ್ಧ ಯುದ್ಧ ಸಾರಿದ ರಷ್ಯಾ :ವಿದ್ಯಾರ್ಥಿಗಳು ಅತಂತ್ರ
  • ಉಕ್ರೇನ್ ನಿಂದ ವಿಜಯಪುರಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿ
  • ಮರಳಿದ ಪುತ್ರನ ದೃಷ್ಠಿ ತೆಗೆದು ಸ್ವಾಗತಿಸಿದ ಪೋಷಕರು, ಕಣ್ಣೀರು
vijayapura
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ ಇನ್ನೂ ಹಲವಾರು ಭಾರತೀಯರು ಸಿಲುಕಿರುವ ಆತಂಕದ ಮಧ್ಯೆಯೇ ಉಕ್ರೇನಿನಿಂದ ವೈದ್ಯಕೀಯ ವಿದ್ಯಾರ್ಥಿಯೋರ್ವ ಸುರಕ್ಷಿತವಾಗಿ ತಾಯ್ನಾಡು ಬಸವ ನಾಡು ತಲುಪಿದ್ದಾನೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ ನಿಂದ ವಾಪಸ್ಸಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾನೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ಸಿದ್ದು ಪೂಜಾರಿ ಗ್ರಾಮಕ್ಕೆ ಬರುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾರ ಹಾಕಿದ ಪೋಷಕರು ಮತ್ತು ಸಂಬಂಧಿಕರು ಸ್ವಾಗತಿಸಿದರು.
ಮನೆಗೆ ಬರುತ್ತಿದ್ದಂತೆ ಸಿದ್ಧು ಪೂಜಾರಿ ಪೋಷಕರು ಮತ್ತು ಸಂಬಂಧಿಕರು ಆತನ ದೃಷ್ಠಿ ತೆಗೆದು ಮನೆಯೊಳಗೆ ಬರಮಾಡಿಕೊಂಡಿದ್ದಾರೆ. ವಿದ್ಯಾರ್ಥಿ ಸಿದ್ಧು ಪೂಜಾರಿ ವಾಪಸ್ಸಾಗಿರುವುದು ನರಸಲಗಿ ಗ್ರಾಮದಲ್ಲಿ ಹಾಗೂ ವಿದ್ಯಾರ್ಥಿಯ ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟು ಮಾಡಿದೆ. ಸಿದ್ದು ಪೂಜಾರಿ ಸುರಕ್ಷಿತವಾಗಿ ಬಂದಿದ್ದಕ್ಕೆ ಆತನ ಪೋಷಕರು ಖುಷಿ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಉಕ್ರೇನ್ ನಲ್ಲಿ ಎದುರಿಸಿದ ಸಂಕಷ್ಟದ ದಿನಗಳನ್ನು ಬಿಟ್ಟಿಟ್ಟ ಸಿದ್ಧು ಪೂಜಾರಿ, ಕಳೆದ ಫೆಬ್ರುವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ. ಮೂರು ದಿನಗಳ ಕಾಲ ರೊಮೇನಿಯಾದಲ್ಲಿ ಉಳಿದುಕೊಂಡಿದ್ದೆ. ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಆಧಿಕಾರಿಗಳು ಸಹಾಯ ಮಾಡಿದರು. ಅಲ್ಲದೇ ಊಟ ಮತ್ತು ವಸತಿಯ ವ್ಯವಸ್ಥೆ ಕಲ್ಪಿಸಿದರು. ರೊಮೇನಿಯಾದಿಂದ ಹೊರಟು ಮಾರ್ಚ್ ರಂದು 4 ದೆಹಲಿ ತಲುಪಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದೇನೆ. ನಿನ್ನೆ ಬೆಂಗಳೂರಿನಿಂದ ಹೊರಟು ಈಗ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮವನ್ನು ತಲುಪಿದ್ದೇನೆ. ಸುರಕ್ಷತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.

Russia Ukraine Crisis: 30 ಕ್ಕೂ ಹೆಚ್ಚು ಬಾಂಬ್ ಶಬ್ದಗಳನ್ನು ನಾನು ಕೇಳಿದ್ದೇನೆ , 8 ದಿನ ಬಂಕರ್ ನಲ್ಲಿ ಅಡಗಿದ್ದೆ : ವಿದ್ಯಾರ್ಥಿ

ರಷ್ಯಾ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಸಿದ್ದು ಪೂಜಾರಿ, ಉಕ್ರೇನ್ ನಲ್ಲಿ ಸಿಲುಕಿರುವ ಇನ್ನುಳಿದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಯ ವೈಖರಿಯನ್ನು ಸಿದ್ಧು ಪೂಜಾರಿ ಶ್ಲಾಘಿಸಿದ್ದಾರೆ.

ಇದೇ ವೇಳೆ ಸಿದ್ಧು ಪೂಜಾರಿ ಪೋಷಕರೂ ಕೂಡ ತಮ್ಮ ಮಗ ಸುರಕ್ಷಿತವಾಗಿ ತವರೂರಿಗೆ ಬಂದಿದ್ದರಿಂದ ಖುಷಿಯಾಗಿದ್ದಾರೆ. ತಮ್ಮ ಮಗ ಸುರಕ್ಷಿತವಾಗಿ ಬರಲು ಕ್ರಮ ಕೈಗೊಂಡ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಾಗೂ ನಮ್ಮ ಅಳಲಿಗೆ ಸ್ಪಂದಿಸಿದ ಮಾಧ್ಯಮದವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಈ ಮಧ್ಯೆ, ಸಿದ್ದು ಪೂಜಾರಿ ಮನೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಹಶಿಲ್ದಾರ್ ವಿಜಯಕುಮಾರ್ ಕಡಕೋಳ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ