ಆ್ಯಪ್ನಗರ

ಸೂರ್ಯ ಮಂತ್ರಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ ಸೂರ್ಯ ಮಂತ್ರಗಳು

ಸೂರ್ಯದೇವನನ್ನು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗಿ ಗುಣಾತ್ಮಕ ಶಕ್ತಿಯು ನೆಲೆಯಾಗುತ್ತದೆ. ಜ್ಞಾನವು ಹೆಚ್ಚಾಗಲು ಸೂರ್ಯನನ್ನು ಪ್ರತಿನಿತ್ಯ ಮಡಿಯಿಂದ, ಶುದ್ಧ ಮನಸ್ಸಿನಿಂದ ಪೂಜಿಸಬೇಕು. ಸೂರ್ಯದೇವನನ್ನು ಒಲಿಸಿಕೊಳ್ಳುವ ಮಂತ್ರಗಳಿವು.

Agencies 19 May 2020, 3:11 pm
ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ ಮತ್ತು ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ. ಏಳು ಕುದುರೆಗಳುಳ್ಳ ರಥವು ಸೂರ್ಯದೇವನ ವಾಹನವಾಗಿದ್ದು, ಈತ ದೇಹದಲ್ಲಿನ 7 ಚಕ್ರಗಳನ್ನು ಹಾಗೂ ಕಾಮನಬಿಲ್ಲಿನ 7 ಬಣ್ಣಗಳನ್ನು ಪ್ರತಿನಿಧಿಸುತ್ತಾನೆ.
Vijaya Karnataka Web Surya Mantra
ಸೂರ್ಯ ಮಂತ್ರ


ಗೋ ಪೂಜೆಯ ಪ್ರಯೋಜನಗಳೇನು ಗೊತ್ತಾ..? ಗೋ ವನ್ನು ಹೇಗೆ ಪೂಜಿಸಬೇಕು..?

ಹಿಂದೂ ಧರ್ಮದಲ್ಲಿ ನಾಗರಹಾವನ್ನು ಹೊರತುಪಡಿಸಿ ಕಣ್ಣಿಗೆ ಕಾಣುವ ದೇವರೆಂದು ಸೂರ್ಯದೇವನನ್ನು ಕರೆಯುತ್ತಾರೆ. ಈತನನ್ನು ಪ್ರತಿದಿನವು ನಾವು ನೋಡಬಹುದಾಗಿದೆ. ಪ್ರತಿದಿನವು ಈತನಿಂದಲೇ ಆರಂಭ, ಈತನಿಂದಲೇ ಅಂತ್ಯ. ಶೈವ ಧರ್ಮದಲ್ಲಿ ಸೂರ್ಯನನ್ನು ಶಿವನೆಂದು, ವೈಷ್ಣವ ಧರ್ಮದಲ್ಲಿ ವಿಷ್ಣುವೆಂದು ಪೂಜಿಸುತ್ತಾರೆ. ಸೂರ್ಯನನ್ನು ವೈವಸ್ವತ, ರವಿ, ಆದಿತ್ಯ, ಪುಷ, ದಿವಾಕರ, ಸವಿತಾ, ಅರ್ಕ, ಮಿತ್ರ, ಭಾನು, ಭಾಸ್ಕರ ಮತ್ತು ಗ್ರಹಪತಿ ಅಥವಾ ಗ್ರಹರಾಜ ಎಂದೂ ಕೂಡ ಕರೆಯಲಾಗುತ್ತದೆ.

ಸೂರ್ಯ ಮಂತ್ರದ ಉಪಯೋಗ


ಈಗಾಗಲೇ ಹೇಳಿರುವ ಹಾಗೇ ಹಿಂದೂ ಧರ್ಮದ ಪ್ರಮುಖ ದೇವರಾದ ಸೂರ್ಯನು ಕತ್ತಲನ್ನು ನಿವಾರಿಸಿ ಬೆಳಕನ್ನು ಹೊರಸೂಸುತ್ತಾನೆ. ಇದರರ್ಥ ಜಗತ್ತಿನಲ್ಲಿ ಅಜ್ಞಾನವನ್ನು ತೊಡೆದು ಹಾಕಿ ಸುಜ್ಞಾನವು ಬೆಳಗುವಂತೆ ಮಾಡುತ್ತಾನೆ. ಸೂರ್ಯ ದೇವನ ಕಿರಣಗಳಿಗೆ ಜನ ಜೀವನ ವನ್ನು ಸಂರಕ್ಷಿಸುವ, ಸಂಹಾರ ಮಾಡುವ ಎರಡೂ ಗುಣವೂ ಇದೆ. ಈತನ ಕೋಪಕ್ಕೆ ಕಾರಣರಾದವರು ಈತನ ಕಿರಣಗಳಿಂದಲೇ ಸುಟ್ಟು ಬಸ್ಮರಾಗುತ್ತಾರೆ. ಪ್ರತಿದಿನವು ಬೆಳಗಿನಿಂದ ಸಂಜೆಯವರೆಗೆ ಒಳಿತನ್ನು ಮಾಡುವ ಸೂರ್ಯದೇವನನ್ನು ಪೂಜಿಸಿದರೆ ಪ್ರತಿನಿತ್ಯದ ಕಷ್ಟವು ದೂರಾಗುತ್ತದೆ.

ದೇವರನ್ನು ವೀಳ್ಯದೆಲೆ ಹಾಗೂ ಅಡಿಕೆಯಿಂದ ಪೂಜಿಸಿದರೆ ಸಕಲ ಸಂಕಷ್ಟವೂ ಪರಿಹಾರ

ಸೂರ್ಯ ಮಂತ್ರಗಳು:
ಸೂರ್ಯ ದೇವನನ್ನು ಮನಸ್ಸಾದಗಲೆಲ್ಲಾ ಪೂಜಿಸುವಂತಿಲ್ಲ. ಆತನನ್ನು ಪೂಜಿಸಲು ಪ್ರತ್ಯಕ ಸಮಯವಿದೆ. ಮುಂಜಾನೆ ಸೂರ್ಯ ಹುಟ್ಟಿದಾಕ್ಷಣ ಸ್ನಾನ ಮಾಡಿ ಪರಿಶುದ್ಧ ಮನಸ್ಸಿನಿಂದ ಆತನನ್ನು ಪೂಜಿಸಬೇಕು. ಸೂರ್ಯನನ್ನು ಪೂಜಿಸುವಾಗ ಪಠಿಸಬೇಕಾದ ಮಂತ್ರಗಳು ಹೀಗಿವೆ:

1) ಸೂರ್ಯ ಮಂತ್ರ:
ನಮಃ ಸೂರ್ಯಾಯ ಶಾಂತಾಯಾ ಸರ್ವರೋಗ ನಿವಾರಿಣೆ
ಆಯುರ್‌ ಆರೋಗ್ಯ ಮ ಐಶ್ವರ್ಯ ಮ ದೇಹಿ ದೇವಾಃ ಜಗತ್ಪತೆ

2020 ರ ಅಪರಾ ಏಕಾದಶಿ ವ್ರತ ಯಾವಾಗ ಗೊತ್ತಾ..? ಇಲ್ಲಿದೆ ಇದರ ಮಹತ್ವ

ಈ ಮಂತ್ರವು ಸೂರ್ಯದೇವನನ್ನು ಹೊಗಳುವ ಮಂತ್ರವಾಗಿದೆ. ಈ ಮಂತ್ರದಲ್ಲಿ ಸೂರ್ಯನನ್ನು ಬ್ರಹ್ಮಾಂಡದ ಅಧಿಪತಿಯೆಂದು ಹೊಗಳಲಾಗುತ್ತದೆ. ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಸಮೃದ್ಧಿಗಾಗಿ ಭಕ್ತರು ಸೂರ್ಯದೇವನನ್ನು ಪ್ರಾರ್ಥಿಸಲಾಗುತ್ತದೆ. ಮಾನವನ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಮಂತ್ರಕ್ಕಿದೆ ಎಂದು ನಂಬಲಾಗಿದೆ.

ಸೂರ್ಯ ದೇವ


2) ಸೂರ್ಯ ಗಾಯತ್ರಿ ಮಂತ್ರ:

ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನೋಃ ಸೂರ್ಯಃ ಪ್ರಚೋದಯಾತ್

ಸೂರ್ಯನಿಗೆ ಸಂಬಂಧಿಸಿದ ಈ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು. ಈ ಮಂತ್ರವನ್ನು ದಿನನಿತ್ಯ ಜಪಿಸುವುದರಿಂದ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೇ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ. ಅಷ್ಟು ಮಾತ್ರವಲ್ಲ, ಈ ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಪಠಿಸಿದರೆ ಸೂರ್ಯನನ್ನು ಹೊರತುಪಡಿಸಿ ಇತರೆ ಗ್ರಹಗಳಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಲಕ್ಷ್ಮಿ ಚಾಲೀಸ. ಇದರಿಂದ ಧನಲಾಭವಾಗುತ್ತದೆ

3) ಸೂರ್ಯ ವಶೀಕರಣ ಮಂತ್ರ:
ಓಂ ನಮೋ ಭಗವತೇ ಶ್ರೀ ಸೂರ್ಯಾಯಾ ಹ್ರೀಂ ಸಹಸ್ರ ಕಿರಣಾಯ ಐಂ ಅತುಲಬಲ ಪರಾಕ್ರಮಾಯ ನವಗ್ರಹ
ದಶದಿಕ್ಪಾಲ ಲಕ್ಷ್ಮಿ ದೇವತಾಯ ಧರ್ಮಕರ್ಮ ಸಹಿತಾಯ ಅಮುಕ ನಾಥಾಯ ನಾಥಾಯ ನಾಮ ಮೋಹಾಯ ಮೋಹಾಯ
ಆಕರ್ಶಯ ಆಕರ್ಶಯ ದಾಸಾನುದಾಸಂ ಕುರು ಕುರು ವಶಂ ಕುರು ಕುರು ಸ್ವಾಹಾ

ಈ ಮಂತ್ರವನ್ನು ಪಠಿಸಲಿಚ್ಛಿಸುವವರು ಸ್ನಾನ ಮಾಡಿ ಶುದ್ಧತೆಯಿಂದ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಪ್ರೀತಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತದೆ.

ಮಕ್ಕಳ ಒತ್ತಡ ನಿವಾರಣೆಗೆ, ಜ್ಞಾನ ವೃದ್ಧಿಗೆ ಇಲ್ಲಿದೆ ಸರಳ ಧ್ಯಾನ ಹಾಗೂ ಮಂತ್ರಗಳು

ಸೂರ್ಯದೇವನನ್ನು ಪ್ರತಿನಿತ್ಯ ಬೆಳಗ್ಗೆ ಪೂಜಿಸಬೇಕು


ಸತ್ಯನಾರಾಯಣ ಪೂಜೆಯನ್ನು ಮಾಡುವುದು ಹೇಗೆ..? ಇದರ ಮಹತ್ವವೇನು..?

4) ಸೂರ್ಯ ಬೀಜ ಮಂತ್ರ:
ಓಂ ಹ್ರಾಂ ಹ್ರೀಂ ಹ್ರೌಂ ಸಹ ಸೂರ್ಯಾಯ ನಮಃ

ಈ ಮಂತ್ರವು ಸೂರ್ಯದೇವನಿಗೆ ನಮಸ್ಕರಿಸುವ ಮಂತ್ರವಾಗಿದೆ. ಸೂರ್ಯ ಬೀಜ ಮಂತ್ರವು ದೈವಿಕ ಶಕ್ತಿಯನ್ನು ಹೊಂದಿದೆ. ಈ ಮಂತ್ರ ಪಠಿಸುವುದರಿಂದ ಸೂರ್ಯ ದೇವನು ಸಕಾರಾತ್ಮಕ ಶಕ್ತಿಯನ್ನು ಕರುಣಿಸುತ್ತಾನೆ. ಮನುಷ್ಯನಿಗೆ ಈ ಮಂತ್ರವು ಕೀರ್ತಿ, ಸಮೃದ್ಧಿಯನ್ನು ನೀಡಿ ಕಷ್ಟಗಳನ್ನು ದೂರಾಗಿಸುತ್ತಾನೆ. ರೋಗನಿವಾರಣೆಯ ಶಕ್ತಿಯನ್ನು ಇದು ಹೊಂದಿದೆ.

ಕಾಳಸರ್ಪ ದೋಷದಿಂದಾಗುವ ಸಮಸ್ಯೆಗಳಾವುವು ..? ಅದನ್ನು ನಿವಾರಿಸಿಕೊಳ್ಳುವುದು ಹೇಗೆ..?

5) ಆದಿತ್ಯ ಹೃದಯಂ ಮಂತ್ರ:

ಆದಿತ್ಯ ಹೃದಯ ಪುಣ್ಯಂ ಸರ್ವ ಶತ್ರು ವಿನಾಶನಂ
ಜಯಾವಹಂ ಜಪೇನ್ನಿತ್ಯಂ ಅಕ್ಷಯಂ ಪರಂ ಶಿವಂ

ಈ ಮಂತ್ರವು ಸೂರ್ಯದೇವನಿಗೆ ಧನ್ಯವಾದವನ್ನು ಅರ್ಪಿಸುವ ಮಂತ್ರವಾಗಿದೆ. ಈ ಮಂತ್ರವನ್ನು ಸೂರ್ಯದೇವನಿಗೆ ಪಠಿಸುವುದರಿಂದ ನಿರ್ಭಯವನ್ನು, ಜ್ಞಾನವನ್ನು ಪಡೆಯುತ್ತಾನೆ. ವ್ಯಕ್ತಿಯ ಮನಸ್ಸಿನಲ್ಲಿನ ಅಹಂ, ದುರಾಸೆ, ದ್ರೋಹ, ಕೋಪ ಸೇರಿದಂತೆ ಇನ್ನಿತರ ನಕಾರಾತ್ಮಕ ಅಂಶವನ್ನು ತೊಡೆದು ಹಾಕುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ