ಆ್ಯಪ್ನಗರ

Lakshmi Ganesha Idol: ದೀಪಾವಳಿ ವೇಳೆ ಲಕ್ಷ್ಮಿ ಗಣೇಶನ ವಿಗ್ರಹವನ್ನು ಪೂಜಿಸಿದ ನಂತರ ಹೀಗೆ ಮಾಡಿ.!

ದೀಪಾವಳಿ ಸಮಯದಲ್ಲಿ ಮನೆಗೆ ತಂದು ಪೂಜಿಸಿದ ಲಕ್ಷ್ಮಿ ಗಣೇಶನ ವಿಗ್ರಹವನ್ನು ದೀಪಾವಳಿ ಪೂರ್ಣಗೊಂಡ ನಂತರ ಏನು ಮಾಡಬೇಕು..? ಲಕ್ಷ್ಮಿ ಗಣೇಶನ ಈ ವಿಗ್ರಹವನ್ನು ಮನೆಯಲ್ಲಿಟ್ಟುಕೊಳ್ಳಬೇಕೇ..? ಅಥವಾ ಮನೆಯಿಂದ ಹೊರಗಡೆ ಇಡಬೇಕೇ.? ದೀಪಾವಳಿಗೆ ತಂದ ವಿಗ್ರಹಗಳಿಂದ ಈ ತಪ್ಪನ್ನು ಮಾಡದಿರಿ..

Authored byಮನಿಷಾ ಆನಂದ | Agencies 16 Nov 2023, 1:52 pm

ಹೈಲೈಟ್ಸ್‌:

  • ಪೂಜೆಯ ನಂತರ ಲಕ್ಷ್ಮಿ ಗಣೇಶ ವಿಗ್ರಹ
  • ದೀಪಾವಳಿ ವಿಗ್ರಹವನ್ನು ಪೂಜೆಯ ನಂತರ ಏನು ಮಾಡಬೇಕು..?
  • ಪೂಜೆಯ ನಂತರ ವಿಗ್ರಹವನ್ನು ಹೀಗಿಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshmi ganesha
ಲಕ್ಷ್ಮಿ ಗಣೇಶ
ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿ - ಗಣೇಶನ ವಿಗ್ರಹವನ್ನು ಮನೆಗೆ ತಂದು ಪೂಜಿಸುವುದು ವಾಡಿಕೆ. ಈ ದಿನ ಲಕ್ಷ್ಮಿಯೊಂದಿಗೆ ಗಣೇಶನನ್ನೂ ಪೂಜಿಸುವುದರಿಂದ ಸಂಪತ್ತು, ಸಮೃದ್ಧಿಯ ವರ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ಮನೆಗೆ ಲಕ್ಷ್ಮಿ - ಗಣೇಶನ ವಿಗ್ರಹವನ್ನು ತೆಗೆದುಕೊಂಡು ಬರುತ್ತಾರೆ. ಮತ್ತು ವಿಧಿ - ವಿಧಾನಗಳ ಪ್ರಕಾರ, ಈ ವಿಗ್ರಹವನ್ನು ಪೂಜಿಸುತ್ತಾರೆ. ಆದರೆ, ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ - ಗಣೇಶನ ವಿಗ್ರಹವನ್ನು ಪೂಜಿಸಿದ ಬಳಿಕ ಆ ವಿಗ್ರಹವನ್ನು ಏನು ಮಾಡಬೇಕು..?
Vrishchika Sankranti 2023: ವೃಶ್ಚಿಕ ಸಂಕ್ರಾಂತಿ 2023 ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ.!

ಲಕ್ಷ್ಮಿ - ಗಣೇಶ - PC: Pixabay

ದೀಪಾವಳಿಯ ಸಮಯದಲ್ಲಿ ನಾವು ನಮ್ಮ ಮನೆಗಳಿಗೆ ಹೊಸ ಲಕ್ಷ್ಮಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತೇವೆ ಮತ್ತು ಅವುಗಳನ್ನು ಪೂಜಿಸುತ್ತೇವೆ. ಪೂಜೆಯ ನಂತರ ಈ ವಿಗ್ರಹಗಳನ್ನು ಏನು ಮಾಡಬೇಕೆಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಜನರು ಈ ವಿಗ್ರಹಗಳನ್ನು ಎಲ್ಲೋ ಬಿಟ್ಟು ಹೋಗುತ್ತಾರೆ. ಕೆಲವರು ವಿಗ್ರಹವನ್ನು ನೀರಿನಲ್ಲಿ ಮುಳುಗಿಸುತ್ತಾರೆ. ದೀಪಾವಳಿಯ ನಂತರ ಲಕ್ಷ್ಮಿ ಮತ್ತು ಗಣೇಶನ ಮೂರ್ತಿಗಳನ್ನು ಏನು ಮಾಡಬೇಕು ಎಂದು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ತಪ್ಪದೇ ಓದಿ..

Draupadi: ಶಿವನು ಒಪ್ಪಿದ್ದರೆ ದ್ರೌಪದಿಗೆ 14 ಜನ ಪತಿಯಂದಿರಿರುತ್ತಿದ್ದರಂತೆ ಹೌದೇ.?
1. ಲಕ್ಷ್ಮಿ ಮತ್ತು ಗಣೇಶನ ಚಿನ್ನ ಮತ್ತು ಬೆಳ್ಳಿಯ ಪ್ರತಿಮೆ:
ನೀವು ದೀಪಾವಳಿಯ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಲಕ್ಷ್ಮಿ ಹಾಗೂ ಗಣೇಶನ ವಿಗ್ರಹವನ್ನು ಪೂಜೆಗೆಂದು ಮನೆಗೆ ತಂದಿದ್ದರೆ, ಪೂಜೆಯ ವಿಧಿ-ವಿಧಾನಗಳು ಪೂರ್ಣಗೊಂಡ ನಂತರ ಆ ವಿಗ್ರಹವನ್ನು ಗಂಗಾಜಲದಿಂದ ಶುದ್ಧಗೊಳಿಸಿ. ಇವುಗಳನ್ನು ನೀವು ಮತ್ತೆ ನಿಮ್ಮ ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಬಹುದು. ಅಥವಾ ಅವುಗಳನ್ನು ಶುದ್ಧಗೊಳಿಸಿದ ಬಳಿಕ ಸುರಕ್ಷಿತವಾದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಮುಂದಿನ ವರ್ಷದ ಪೂಜೆಗೆ ಎತ್ತಿಡಬಹುದು.

ಲಕ್ಷ್ಮಿ - ಗಣೇಶ

2. ಲಕ್ಷ್ಮಿ ಮತ್ತು ಗಣೇಶನ ಮಣ್ಣಿನ ಪ್ರತಿಮೆ:
ದೀಪಾವಳಿ ಪೂಜೆಯಲ್ಲಿ ನೀವು ಲಕ್ಷ್ಮಿ ಮತ್ತು ಗಣೇಶನ ಮಣ್ಣಿನ ಪ್ರತಿಮೆಯನ್ನು ಮನೆಗೆ ತಂದು ಪೂಜಿಸಿದ್ದರೆ ಅಥವಾ ಮನೆಯಲ್ಲಿ ಸ್ಥಾಪಿಸಿದ್ದರೆ, ದೀಪಾವಳಿಯ ನಂತರ ನೀವು ಆ ವಿಗ್ರಹವನ್ನು ಅಥವಾ ಮೂರ್ತಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ನದಿಯ ನೀರಿನಲ್ಲಿ ಹರಿ ಬಿಡಬೇಕು. ಒಂದು ವೇಳೆ ನಿಮಗೆ ನದಿ ನೀರಿನಲ್ಲಿ ವಿಗ್ರಹಗಳನ್ನು ಬಿಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಶುದ್ಧವಾದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದರಲ್ಲಿ ವಿಗ್ರಹವನ್ನು ಹಾಕಿ ಅದು ಕರಗುವವರೆಗೆ ಕಾಯಬೇಕು.

Thursday Tips: ಗುರುವಾರ ಶಂಖದಿಂದ ಈ ಕೆಲಸ ಮಾಡಿದರೆ ಜೀವನವೇ
3. ಈ ಕೆಲಸವನ್ನು ನೀವು ಮಾಡಬೇಡಿ:
ಲಕ್ಷ್ಮಿ ಗಣೇಶನನ್ನು ಪೂಜಿಸಿದ ನಂತರ, ಅವರ ವಿಗ್ರಹವನ್ನು ಅನೇಕ ಜನರು ಯಾವುದೋ ಒಂದು ಮರದ ಕೆಳಗೆ ಇಟ್ಟು ಬರುತ್ತಾರೆ. ಈ ತಪ್ಪನ್ನು ಮಾಡುವುದು ಸರಿಯಲ್ಲ. ಇಂತಹ ಸಂದರ್ಭದಲ್ಲಿ ಮರದ ಕೆಳಗೆ ಲಕ್ಷ್ಮಿ ಗಣೇಶನ ಮೂರ್ತಿ ಇಡುವುದನ್ನು ತಪ್ಪಿಸಬೇಕು. ಒಂದು ವೇಳೆ ನೀವು ಈ ತಪ್ಪುಗಳನ್ನು ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಲಕ್ಷ್ಮಿ - ಗಣೇಶ - PC: facebook


Bhagavad Gita: ಯಶಸ್ಸಿಗಾಗಿ ಮೊದಲು ಇವುಗಳನ್ನು ತಲೆಯಲ್ಲಿಟ್ಟುಕೊಳ್ಳಿ ಎನ್ನುತ್ತೆ
ದೀಪಾವಳಿಯಂದು ಪೂಜೆಗೆ ತಂದ ಲಕ್ಷ್ಮಿ ಮತ್ತು ಗಣೇಶನ ವಿಗ್ರಹವನ್ನು ಮರದ ಕೆಳಗೆ ಅಥವಾ ಇನ್ನಾವುದೋ ಸ್ಥಳದಲ್ಲಿ ಎಸೆಯುವ ಬದಲು ಈ ಮೇಲಿನಂತೆ ನಡೆದುಕೊಳ್ಳಿ. ಇದರಿಂದ ನಿಮಗೆ ಪ್ರಕೃತಿಯ ವರದಾನವೂ ಸಿಗುತ್ತದೆ, ದೇವರ ಆಶೀರ್ವಾದವೂ ನಿಮ್ಮ ಮೇಲಿರುತ್ತದೆ.
ಲೇಖಕರ ಬಗ್ಗೆ
ಮನಿಷಾ ಆನಂದ
ಮನಿಷಾ ಆನಂದ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ 6 ವರ್ಷಗಳ ನುರಿತ ಅನುಭವ ಹೊಂದಿರುವ ಬರಹಗಾರರು. ಇವರು 2016 ರಲ್ಲಿ ಆಟೋಮೊಬೈಲ್‌ ವಿಭಾಗಕ್ಕೆ ಬರಹಗಾರರಾಗಿ ಸೇರಿಕೊಳ್ಳುವ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವೃತ್ತಿಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ತಮ್ಮ ಬರವಣಿಗೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬರವಣಿಗೆಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಎಲ್ಲಾ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಹೊಸ ವಿಷಯಗಳ ಮೇಲೆ ಸಂಶೋಧನೆ ಮಾಡಿ ಪ್ರಸ್ತುತ ಪಡಿಸುವ ಮೂಲಕ ಅವರದ್ದೇ ಆದ ಓದುಗರ ಸಮೂಹವನ್ನು ಹೊಂದಿದ್ದಾರೆ. ಮನಿಷಾ ಅವರ ಬರವಣಿಗೆಯ ಕೌಶಲ್ಯದ ಮೇಲೆ ಅವರನ್ನು ಆಟೋಮೊಬೈಲ್‌ ವಿಭಾಗದಿಂದ ಧರ್ಮ ವಿಭಾಗಕ್ಕೆ ಬದಲಾಯಿಸಲಾಯಿತು. ಕಳೆದ ಎರಡು ವರ್ಷಗಳಿಂದ ಅವರು ಧರ್ಮ ವಿಭಾಗದಲ್ಲಿ ಹೊಸ ವಿಚಾರಗಳನ್ನು ಪ್ರಸ್ತುತಪಡಿಸುವ ಮೂಲಕ ಓದುಗರಿಗೆ ಬಹಳ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಮತ್ತು ನಿಖರವಾದ ವಿಷಯಗಳನ್ನು ಓದುಗರಿಗೆ ಒದಗಿಸುವ ಅವರ ಬದ್ಧತೆಯು ಪ್ರಕಟಣೆಗೆ ಅಮೂಲ್ಯವಾದುದ್ದಾಗಿದೆ. ವೃತ್ತಿಯನ್ನು ಹೊರತುಪಡಿಸಿ ಅವರು ಹೊಸ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಲ್ಲಿ, ಯೋಗಾಭ್ಯಾಸ ಮಾಡುವುದರಲ್ಲಿ ಮತ್ತು ಸಂಗೀತವನ್ನು ಕೇಳುವುದರಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಬ್ಯಾಡ್ಮಿಂಟನ್‌ ಆಡುವ ಮೂಲಕ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಯಾವಾಗಲೂ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಇಷ್ಟಪಡುತ್ತಾರೆ. ಇವರ ಕಲಿಕೆಯ ಉತ್ಸಾಹ ಮತ್ತು ಕೌಶಲ್ಯವು ಅವರನ್ನು ಪ್ರತಿಭಾವಂತ ಬರಹಗಾರರನ್ನಾಗಿ ಮಾಡಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ