Please enable javascript.Travel Tips For Summer,ಮಕ್ಕಳ ಜೊತೆ ಪ್ರವಾಸ ಕೈಗೊಂಡಾಗ ಈ ವಿಷಯಗಳ ಬಗ್ಗೆ ಗಮನ ವಹಿಸಿ - safety tips for summer travel with children - Vijay Karnataka

ಮಕ್ಕಳ ಜೊತೆ ಪ್ರವಾಸ ಕೈಗೊಂಡಾಗ ಈ ವಿಷಯಗಳ ಬಗ್ಗೆ ಗಮನ ವಹಿಸಿ

Authored by ಸೌಮ್ಯ ಟೇಮ್ಕರ್ | Vijaya Karnataka Web 24 Mar 2023, 2:55 pm
Subscribe



safety tips for summer travel with children
ಮಕ್ಕಳ ಜೊತೆ ಪ್ರವಾಸ ಕೈಗೊಂಡಾಗ ಈ ವಿಷಯಗಳ ಬಗ್ಗೆ ಗಮನ ವಹಿಸಿ

PC:pexels

ಮಕ್ಕಳೊಂದಿಗೆ ಅತ್ಯುತ್ತಮವಾದ ಸಮಯವನ್ನು ಕಳೆಯಲು ಸೂಕ್ತವಾದ ಸಮಯವೆಂದರೆ ಅದು ಬೇಸಿಗೆ ಕಾಲ. ಈ ಸಮಯದಲ್ಲಿ ಒಂದೊಳ್ಳೆ ತಂಪಾದ ಸ್ಥಳಕ್ಕೆ ಹೋಗಿ ಪ್ರವಾಸ ಯೋಜಿಸಬಹುದು. ಮಕ್ಕಳೊಂದಿಗೆ ಪ್ರವಾಸಕ್ಕೆ ಹೊರಟಾಗ ಅಲ್ಲಿ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಗಮನವಹಿಸಬೇಕು.

ಅಂದರೆ, ಪ್ರಯಾಣದ ಸಮಯದಲ್ಲಿ ಮಕ್ಕಳಿಗೆ ಕಿರಿಕಿರಿ ಉಂಟು ಮಾಡದ ರೀತಿಯಲ್ಲಿ ಸಾಕಷ್ಟು ವಸ್ತುಗಳನ್ನು ಕೊಂಡೊಯ್ಯಬೇಕು. ಲೇಖನದಲ್ಲಿ ಮಕ್ಕಳ ಜೊತೆ ಪ್ರವಾಸಕ್ಕೆ ಹೋದಾಗ ಯಾವೆಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ ಓದಿ.



ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿ

ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿ

PC:pexels


ದೇಶದ ಹಲವೆಡೆ ಬೇಸಿಗೆಯ ತಾಪಮಾನ ಅತಿಯಾಗುತ್ತಿದೆ. ನೀವು ಹೋಗಲು ಬಯಸುವ ಗಮ್ಯಸ್ಥಾನದ ಬಗ್ಗೆ ಹಾಗು ತಾಪಮಾನದ ಬಗ್ಗೆ ತಿಳಿದುಕೊಳ್ಳಿ. ಬೇಸಿಗೆ ಕಾಲದಲ್ಲಿ ಬಹುತೇಕರು ಜಲಪಾತ, ಸರೋವರ ಅಥವಾ ಹಿಲ್‌ ಸ್ಟೇಷನ್‌ಗಳಿರುವ ಸ್ಥಳಗಳಿಗೆ ಹೋಗಲು ಬಯಸುತ್ತಾರೆ. ನೀವು ಕೂಡ ಇಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ, ಮಕ್ಕಳಿಗೆ ನಿಜವಾಗಿಯು ಇಷ್ಟವಾಗುತ್ತದೆ.

ನಮ್ಮ ದಕ್ಷಿಣ ಭಾರತದಲ್ಲಿ ಸಾಕಷ್ಟು ತಂಪಾದ ಗಿರಿಧಾಮಗಳಿವೆ. ಮುನ್ನಾರ್‌, ಕೂರ್ಗ್‌, ಕೊಡೈಕೆನಾಲ್‌, ಊಟಿ ಸೇರಿದಂತೆ ಇನ್ನು ಅನೇಕ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ರೂಂ ಮೊದಲೇ ಕಾಯ್ದಿರಿಸಿ

ರೂಂ ಮೊದಲೇ ಕಾಯ್ದಿರಿಸಿ

PC:pexels

ಸ್ಥಳವನ್ನು ಆಯ್ಕೆ ಮಾಡಿದ ನಂತರ ಹೋಟೆಲ್‌ನ ರೂಂ ಬುಕ್‌ ಮಾಡುವುದು ಮರೆಯದಿರಿ. ಏಕೆಂದರೆ ಬೇಸಿಗೆ ಕಾಲದಲ್ಲಿ ತಂಪಾದ ಸ್ಥಳಗಳಲ್ಲಿ ಹೋಟೆಲ್‌ಗಳ ರೂಂ ಭರ್ತಿಯಾಗಬಹುದು. ಮಕ್ಕಳನ್ನು ಹಿಡಿದುಕೊಂಡು ರೂಂಗಾಗಿ ಪರದಾಡುವ ಬದಲು ಮೊದಲೇ ಬುಕ್‌ ಮಾಡುವುದು ಬೆಸ್ಟ್.

ಬಟ್ಟೆ ಪ್ಯಾಕಿಂಗ್‌ ಹೀಗೆ ಇರಲಿ…

ಬಟ್ಟೆ ಪ್ಯಾಕಿಂಗ್‌ ಹೀಗೆ ಇರಲಿ…

PC: pexels

ಬೇಸಿಗೆ ಪ್ರವಾಸವಾದ ಕಾರಣ ಬಟ್ಟೆಗಳ ಪ್ಯಾಕಿಂಗ್ ಸ್ಮಾರ್ಟ್‌ ಆಗಿರಲಿ. ಸೀಸನ್‌ಗೆ ಅನುಗುಣವಾಗಿ ಬಟ್ಟೆ ಪ್ಯಾಕ್‌ ಮಾಡುವುದು ಬೆಸ್ಟ್. ಅಂದರೆ ಚರ್ಮಕ್ಕೆ ಹಿತವೆನಿಸುವ ಕಾಟನ್‌ ಬಟ್ಟೆಗಳು ನಿಮ್ಮ ಆಯ್ಕೆಯಾಗಿರಲಿ. ಮಲಗುವ ಸಮಯದಲ್ಲಿ ಸೊಳ್ಳೆ ಪರದೆಯನ್ನು ಬಳಸಿ. ಹಾಗೆಯೇ, ಸ್ಕನ್‌ ಸ್ಕ್ರೀನ್‌, ಹ್ಯಾಟ್‌, ಸನ್‌ ಗ್ಲಾಸ್‌ಗಳನ್ನು ನೀವು ಮರೆಯುವಂತಿಲ್ಲ.

ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಪ್ರಥಮ ಚಿಕಿತ್ಸಾ ಪೆಟ್ಟಿಗೆ

PC:pexels

ಬೇಸಿಗೆಯಲ್ಲಿ ಸೂಕ್ಷ್ಮವಾದ ಕಾಯಿಲೆಗಳು ಬರುವುದಿಲ್ಲ ಎಂದು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಮಕ್ಕಳಿಗೆ ಯಾವುದೇ ಋತುಮಾನದಲ್ಲಿಯು ಗಾಯಗಳಾಗುವುದು ಅಥವಾ ಅನಾರೋಗ್ಯಕ್ಕೆ ಒಳಗಾಗುವುದು ಆಗಾಗ್ಗೆ ನಡೆಯುವ ಪ್ರಕ್ರಿಯೆ. ಹಾಗಾಗಿ ಥರ್ಮಾಮೀಟರ್, ನಂಜುನಿರೋಧಕ ಬ್ಯಾಂಡೇಜ್, ಹತ್ತಿ, ಶೀತ, ಜ್ವರ, ಕೆಮ್ಮಿಗೆ ಬೇಕಾದ ಔಷಧಿಗಳನ್ನು ಮರೆಯದೆ ಪ್ಯಾಕ್ ಮಾಡಿ.

ಮಕ್ಕಳಿಗೆ ಆದಷ್ಟು ಸರಿಯಾದ ಶೂಗಳನ್ನು ಧರಿಸಲು ಹೇಳಿ. ಇದರಿಂದ ಅವರು ಆರಾಮದಾಯಕವಾಗಿ ನಡೆಯುತ್ತಾರೆ.

ಇದನ್ನೂ ಓದಿ: ಯುರೋಪ್‌ಗೆ ಹೋಗಲು ಪ್ಲಾನ್‌ ಮಾಡ್ತಾ ಇದ್ದರೆ…. ಅಗ್ಗದ ಟಿಕೆಟ್‌ ಬುಕ್‌ ಮಾಡುವ ವಿಧಾನ ಇಲ್ಲಿವೆ

ಆರೋಗ್ಯಕರವಾದ ಆಹಾರ

ಆರೋಗ್ಯಕರವಾದ ಆಹಾರ

PC:pexels

ಪ್ರವಾಸದ ಖುಷಿಯಲ್ಲಿ ಮಕ್ಕಳು ಅನಾರೋಗ್ಯಕರವಾದ ಆಹಾರಗಳನ್ನು ಅಥವಾ ಜಂಕ್‌ ಫುಡ್‌ಗಳನ್ನು ಸೇವಿಸಲು ಹಾತೊರೆಯಬಹುದು. ಆದರೆ ಈ ಸಮಯದಲ್ಲಿ ಆರೋಗ್ಯಕರವಾಗಿರುವ ಹಣ್ಣು-ತರಕಾರಿಗಳಿರುವ ಆಹಾರಗಳನ್ನು ಸೇವಿಸಲು ನೀಡಿ. ಸಾಕಷ್ಟು ನೀರು ಅಥವಾ ಜ್ಯೂಸ್‌ಗಳನ್ನು ಸೇವಿಸುವುದು ಉತ್ತಮ.

ಪ್ರವಾಸದ ಸಮಯದಲ್ಲಿ ಕುರುಕಲು ತಿಂಡಿಗಳಿಂದ ದೂರ ಉಳಿಯಿರಿ. ತಾಜಾ ಎಳನೀರು ಅಥವಾ ಹಣ್ಣಿನ ಜ್ಯೂಸ್‌ಗಳನ್ನು ಕುಡಿಯಿರಿ. ಮಾರುಕಟ್ಟೆಯಲ್ಲಿ ದೊರೆಯುವ ಜ್ಯೂಸ್‌ಗಳಿಂದ ದೂರವಿದ್ದರೆ ಒಳ್ಳೆಯದು.

ಇದನ್ನೂ ಓದಿ: ಮನಸ್ಸಿಗೆ ವಿಶ್ರಾಂತಿ ಬೇಕಾ? ಹಾಗಾದರೆ ಇಂತಹ ತಾಣಗಳಿಗೆ ಹೋಗಿ

 ಸೌಮ್ಯ ಟೇಮ್ಕರ್
ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ