‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಆಗಾಗ ವಿನಯ್ ಹಾಗೂ ಕಾರ್ತಿಕ್ ಮಧ್ಯೆ ವಾಕ್ಸಮರ, ಜಗಳ ನಡೆಯುತ್ತಲೇ ಇದೆ. ಈಗ ಮತ್ತೊಮ್ಮೆ ಅದೇ ಜರುಗಿದೆ. ಸ್ಪರ್ಧಿಗಳ ಮೌಲ್ಯ ವಿಚಾರವಾಗಿ ಕಾರ್ತಿಕ್ - ವಿನಯ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ‘‘ಏನೂ ಅಲ್ಲಾಡಿಸೋಕೆ ಆಗಲ್ಲ’’ ಎಂದು ವಿನಯ್ ಆಡಿದ ಮಾತಿಗೆ ಕೌಂಟರ್ ಕೊಟ್ಟ ಕಾರ್ತಿಕ್ ‘’ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ’’ ಎಂದಿದ್ದಾರೆ.
ಕಾರ್ತಿಕ್ - ಅಸಮರ್ಥರು ಅನ್ನೋದು ಕಾರ್ಡ್ ಅಲ್ಲ.
ತನಿಷಾ - ಅದು ನಮಗೆ ಬಂದಿದ್ದು. ಬಂದಿರೋದನ್ನ ಇಲ್ಲ ಅಂತ ಹೇಳೋಕೆ ಆಗಲ್ಲ. ಅದನ್ನ ಕಾರ್ಡ್ ಅಂತ ಕರೆಯೋದು ಸರಿ ಅಲ್ಲ.
ವಿನಯ್ - ಹೇಳಿದೆ ಏನಿವಾಗ?
ಕಾರ್ತಿಕ್ - ಈ ಮನೆಯಲ್ಲಿ ಮೊದಲ ವಾರ ಎಷ್ಟು ಜನ ನಮ್ಮನ್ನ ಅಸಮರ್ಥರು ಅಂತ ಕರೆದಿದ್ದಾರೆ?
ನಮ್ರತಾ - ಇಲ್ಲ.. ಹಾಗೆ ನಾವು ಮಾಡಿಲ್ಲ
ವಿನಯ್ - ಅಸಮರ್ಥರು ಅಂತ ಹೇಳೋದು ಸರಿ ಅಲ್ಲ.
ತನಿಷಾ - ನೀವು ಯಾವ ಕಾರ್ಡ್ ಪ್ಲೇ ಮಾಡ್ತಿದ್ದೀರಾ ಹಾಗಾದ್ರೆ?
ಕಾರ್ತಿಕ್ - ಮೂರು ಜನ ಇದ್ದೀರಾ.. ಏನು ಹೊಡೆಯುತ್ತೀರಾ ಅನ್ನೋದು.. ಇದು ಕಾರ್ಡ್ ಅಂದ್ರೆ..
ವಿನಯ್ - ಏನೂ ಅಲ್ಲಾಡಿಸೋಕೆ ಆಗಲ್ಲ.
ಕಾರ್ತಿಕ್ - ಅಲ್ಲಾಡಿಸಿಬಿಟ್ಟಿದ್ದೀನಿ. ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ.
ವಿನಯ್ - ಅಲ್ಲಾಡಿಸು ರಾಜ.
ಟಾಸ್ಕ್ ಕೊಟ್ಟ ‘ಬಿಗ್ ಬಾಸ್’
‘ಬಿಗ್ ಬಾಸ್ ಕನ್ನಡ 10’ ಸೀಸನ್ ವಿಜೇತರಿಗೆ ನೀಡಲಾಗುವ 50 ಲಕ್ಷ ರೂಪಾಯಿ ಬಹುಮಾನ ಹಣವನ್ನು 9 ಬೇರೆ ಬೇರೆ ಮೌಲ್ಯಗಳಲ್ಲಿ ವಿಂಗಡಿಸಲಾಯಿತು. ಇಲ್ಲಿಯವರೆಗಿನ ಆಟದಲ್ಲಿ ತಮ್ಮ ಸ್ಥಾನ, ಮಾನ, ಮೌಲ್ಯ ಏನು ಎಂಬುದರ ಬಗ್ಗೆ ಸ್ಪರ್ಧಿಗಳು ತಮ್ಮ ನಿಲುವು ವ್ಯಕ್ತಪಡಿಸಿ, ಆ ಮೌಲ್ಯದ ಫಲಕ ಇತರರ ಸಮ್ಮತಿಯ ಮೇರೆಗೆ ತಮ್ಮದಾಗಿಸಿಕೊಳ್ಳಬೇಕಿತ್ತು. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ನೀಡಿದ ಕೊಡುಗೆ, ವೀಕ್ಷಕರಿಗೆ ನೀಡಿದ ಮನರಂಜನೆ, ಆಟದಲ್ಲಿ ಪ್ರದರ್ಶನ, ತಮ್ಮನ್ನು ತಾವು ತೊಡಗಿಸಿಕೊಂಡ ರೀತಿಯ ಆಧಾರದ ಮೇಲೆ ಚರ್ಚಿಸಿ ಒಂದು ನಿಲುವಿಗೆ ಬರಬೇಕಿತ್ತು. ಪರಿಣಾಮ, 20 ಲಕ್ಷ ಮೌಲ್ಯದ ಫಲಕಕ್ಕಾಗಿ ಕಾರ್ತಿಕ್, ವಿನಯ್, ಸಂಗೀತಾ, ತನಿಷಾ ಬೇಡಿಕೆ ಇಟ್ಟರು. ಈ ವೇಳೆ ವಿನಯ್ - ಕಾರ್ತಿಕ್ ಮಧ್ಯೆ ವಾಕ್ಸಮರ ನಡೆಯಿತು.ಸ್ಪರ್ಧಿಗಳ ಬೇಡಿಕೆ
2 ಲಕ್ಷದ ಫಲಕಕ್ಕಾಗಿ ವರ್ತೂರು ಸಂತೋಷ್, 7 ಲಕ್ಷದ ಫಲಕಕ್ಕಾಗಿ ಡ್ರೋನ್ ಪ್ರತಾಪ್, 15 ಲಕ್ಷದ ಫಲಕಕ್ಕಾಗಿ ತುಕಾಲಿ ಸಂತು, ನಮ್ರತಾ ಮತ್ತು ಮೈಕಲ್, 20 ಲಕ್ಷದ ಫಲಕಕ್ಕಾಗಿ ಸಂಗೀತಾ, ವಿನಯ್, ಕಾರ್ತಿಕ್ ಮತ್ತು ತನಿಷಾ ಬೇಡಿಕೆ ಇಟ್ಟರು.‘ಅಸಮರ್ಥರು’ ಬಗ್ಗೆ ಮಾತು
20 ಲಕ್ಷದ ಫಲಕಕ್ಕಾಗಿ ಬೇಡಿಕೆಯಿಟ್ಟ ಸಂಗೀತಾ, ‘’ನಾವು ಅಸಮರ್ಥರಾಗಿ ಶುರು ಮಾಡಿದ್ವಿ’’ ಎಂದು ಮಾತು ಆರಂಭಿಸಿದರು. ಇತ್ತ ಕಾರ್ತಿಕ್ ಸಹ, ‘’ಮೊದಲ ವಾರ ಯಾರೆಲ್ಲಾ ಅಸಮರ್ಥರು ಅಂತ ಬಾಯ್ತುಂಬಾ ಕರೆದಿದ್ದರೋ, ಅದನ್ನೆಲ್ಲಾ ಇವತ್ತಿನ ಮಟ್ಟಕ್ಕೆ ಚೇಂಜ್ ಮಾಡಿದ್ದೀನಿ. ನಾನು ಪ್ರತಿಸ್ಪರ್ಧಿಯೇ ಅಲ್ಲ ಎಂದು ವಿನಯ್ ಈ ಹಿಂದೆ ಹೇಳಿದ್ದರು. ಈಗ ನಾನು ಟಕ್ಕರ್ ಕೊಡ್ತಿದ್ದೀನಿ ಅಂತ ವಿನಯ್ ಅವರೇ ಬಾಯ್ಬಿಟ್ಟು ಹೇಳಿದ್ದಾರೆ. ನಾನು ಬಕೆಟ್ ಹಿಡಿಯುತ್ತಿದ್ದೇನೆ ಅಂತ ಸಂಗೀತಾ ಹೇಳಿದ್ದರು. ಒಂದೇ ದಿನದಲ್ಲಿ ಅವರು ವೇದಿಕೆ ಮೇಲೆ ಸಾರಿ ಕೇಳುವ ಹಾಗೆ ನಾನು ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದ್ದೆ’’ ಎಂದರು.ಕೌಂಟರ್ ಕೊಟ್ಟ ವಿನಯ್
ಅಸಮರ್ಥರು ಎಂಬ ವಾದ ಬಂದಿದ್ದಕ್ಕೆ ‘’ನನಗೆ ಪ್ರತಿಸ್ಪರ್ಧಿಯಾಗಿ ಯಾರು ಬೇಕು ಅಂತ ನಾನೇ ಆಯ್ಕೆ ಮಾಡಿದ್ದು. ನಾನೇ ಆ ಸ್ಥಾನ ಕೊಟ್ಟಿದ್ದೀನಿ ಅಂತ ಕಾರ್ತಿಕ್ ಅವರೇ ಒಪ್ಪಿಕೊಂಡಿದ್ದಾರೆ. ಅಸಮರ್ಥರಾಗಿ ಬಂದಿದ್ವಿ ಅಂತ ಪ್ರತಿಬಾರಿ ಹೇಳ್ತಾರೆ. ಅಸಮರ್ಥರು ಅಂತ ಕರೆದಿದ್ದು ಜನ. ಯಾಕಂದ್ರೆ, ಜನರ ವೋಟಿಂಗ್ ಮೇಲೆ ಅದು ಆಗಿದ್ದು. ನಾವು ವೋಟ್ ಹಾಕಿಲ್ಲ. ಅಸಮರ್ಥರಿಂದ ಸಮರ್ಥರಾಗಿದ್ದೀರಾ ಅನ್ನೋದು ನಿಮ್ಮ ಪ್ರಯತ್ನ. ಅದನ್ನ ಕಾರ್ಡ್ ಪ್ಲೇ ಮಾಡೋದು ಬೇಡ’’ ಎಂದರು ವಿನಯ್. ಈ ವೇಳೆ ಮಾತಿನ ಚಕಮಕಿ ನಡೆಯಿತು.ಕಾರ್ತಿಕ್ - ಅಸಮರ್ಥರು ಅನ್ನೋದು ಕಾರ್ಡ್ ಅಲ್ಲ.
ತನಿಷಾ - ಅದು ನಮಗೆ ಬಂದಿದ್ದು. ಬಂದಿರೋದನ್ನ ಇಲ್ಲ ಅಂತ ಹೇಳೋಕೆ ಆಗಲ್ಲ. ಅದನ್ನ ಕಾರ್ಡ್ ಅಂತ ಕರೆಯೋದು ಸರಿ ಅಲ್ಲ.
ವಿನಯ್ - ಹೇಳಿದೆ ಏನಿವಾಗ?
ಕಾರ್ತಿಕ್ - ಈ ಮನೆಯಲ್ಲಿ ಮೊದಲ ವಾರ ಎಷ್ಟು ಜನ ನಮ್ಮನ್ನ ಅಸಮರ್ಥರು ಅಂತ ಕರೆದಿದ್ದಾರೆ?
ನಮ್ರತಾ - ಇಲ್ಲ.. ಹಾಗೆ ನಾವು ಮಾಡಿಲ್ಲ
ವಿನಯ್ - ಅಸಮರ್ಥರು ಅಂತ ಹೇಳೋದು ಸರಿ ಅಲ್ಲ.
ತನಿಷಾ - ನೀವು ಯಾವ ಕಾರ್ಡ್ ಪ್ಲೇ ಮಾಡ್ತಿದ್ದೀರಾ ಹಾಗಾದ್ರೆ?
ಕಾರ್ತಿಕ್ - ಮೂರು ಜನ ಇದ್ದೀರಾ.. ಏನು ಹೊಡೆಯುತ್ತೀರಾ ಅನ್ನೋದು.. ಇದು ಕಾರ್ಡ್ ಅಂದ್ರೆ..
ವಿನಯ್ - ಏನೂ ಅಲ್ಲಾಡಿಸೋಕೆ ಆಗಲ್ಲ.
ಕಾರ್ತಿಕ್ - ಅಲ್ಲಾಡಿಸಿಬಿಟ್ಟಿದ್ದೀನಿ. ನಿಂತ್ರೆ ಬುಡವನ್ನೇ ಅಲ್ಲಾಡಿಸುತ್ತೇನೆ.
ವಿನಯ್ - ಅಲ್ಲಾಡಿಸು ರಾಜ.