ಆ್ಯಪ್ನಗರ

Amruthadhaare Serial: ಶಾಕುಂತಲಾ ಮಾಡಿದ ಮಾಸ್ಟರ್ ಪ್ಲ್ಯಾನ್‌ಗೆ ಬೆಚ್ಚಿ ಬಿದ್ದ ಗೌತಮ್ ದಿವಾನ್

Amruthadhaare Kannada Tv Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕು ಅಂತ ಗೌತಮ್, ಭೂಮಿ ಇಬ್ಬರೂ ಒದ್ದಾಡುತ್ತಿದ್ದಾರೆ. ಈ ವಿಷಯ ಈಗ ಗೌತಮ್ ಮಲತಾಯಿ ಶಾಕುಂತಲಾ ಕಿವಿಗೆ ಬಿದ್ದಿದೆ. ಇವರಿಬ್ಬರೂ ಒಂದಾಗಬಾರದು ಅಂತ ಶಾಕುಂತಲಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಈಗ ಗೌತಮ್‌ಗೆ ನಡುಕ ಶುರುವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 1 Apr 2024, 2:16 pm

ಹೈಲೈಟ್ಸ್‌:

  • ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್, ಭೂಮಿ ನಡುವೆ ಲವ್ ಶುರು
  • ಪ್ರೀತಿ ಹೇಳಿಕೊಳ್ಳಲು ಒದ್ದಾಡುತ್ತಿರುವ ಗೌತಮ್-ಭೂಮಿ
  • ಗೌತಮ್-ಭೂಮಿ ಒಂದಾಗಬಾರದು ಅಂತ ಶಾಕುಂತಲಾ ಪ್ಲ್ಯಾನ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web amrutjhadhaare serial
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್, ಭೂಮಿ ಪ್ರೀತಿ ಈಗಾಗಲೇ ಹುಟ್ಟಿದ್ದು, ಇನ್ನೇನು ಚಿಗುರೊಡೆದು ಗಿಡವಾಗಬೇಕು ಎನ್ನುವಷ್ಟರಲ್ಲಿ ಶಾಕುಂತಲಾ ಹೊಸ ಟ್ವಿಸ್ಟ್ ಕೊಟ್ಟಿದ್ದಾಳೆ‌.


ಶಾಕುಂತಲಾಗೆ ಗೌತಮ್ ಲವ್ ವಿಷ್ಯ ಗೊತ್ತಾಯ್ತು

ಹೌದು, ಭೂಮಿ- ಗೌತಮ್ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ವಿಷಯ ಶಾಕುಂತಲಾಗೆ ಗೊತ್ತಾಗಿದೆ. ಮದುವೆಯಾದರೂ ಕೂಡ ಇವರಿಬ್ಬರೂ ದೂರ ಇರುತ್ತಾರೆ ಅಂತ ಭಾವಿಸಿ ಶಾಕುಂತಲಾ ಈ ಮದುವೆ ಮಾಡಿಸಿದ್ದಳು.‌ ಈಗ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದೆ. ಭೂಮಿಗೆ ಪ್ರೇಮ ನಿವೇದನೆ ಮಾಡಬೇಕು ಅಂತ ಗೌತಮ್ ತಯಾರಿ ಮಾಡುತ್ತಿರೋದು ಶಾಕುಂತಲಾ ಕಣ್ಣಿಗೆ ಬಿದ್ದಿತ್ತು. ಗೌತಮ್‌ಗೆ ಭೂಮಿ ಲವ್ ಲೆಟರ್ ಬರೆದಿದ್ದು ಶಾಕುಂತಲಾ ಕಣ್ಣಿಗೆ ಬಿದ್ದಿತ್ತು. ಒಟ್ಟಿನಲ್ಲಿ ಹೇಗಾದರೂ ಮಾಡಿ ಈ ಜೋಡಿ ಒಂದಾಗಬಾರದು ಅಂತ ಅಮ್ಮ ಮಗಳು ಪ್ಲ್ಯಾನ್ ಮಾಡಿದ್ದಾರೆ.

Amruthadhaare Serial: ಗೌತಮ್ ಮುಚ್ಚಿಟ್ಟ ರಹಸ್ಯ ಏನು? ಮಾನ್ಯ ರಿವೀಲ್ ಮಾಡ್ತಾಳಾ?
ಭೂಮಿ-ಗೌತಮ್ ದೂರ ಮಾಡಲು ಶಾಕುಂತಲಾ ಪ್ಲ್ಯಾನ್

ಶಾಕುಂತಲಾ ತನಗೆ ಹುಷಾರಿಲ್ಲ ಅಂತ ನಾಟಕ ಮಾಡಿದ್ದಳು. ಇದನ್ನು ನೋಡಿ ಎಲ್ಲರೂ ಗಾಬರಿ ಬಿದ್ದಿದ್ದಾರೆ.‌ ಇನ್ನೊಂದು ಕಡೆ ಗೌತಮ್, ಭೂಮಿ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳುವ ವಿಷಯವನ್ನು ಬದಿಗಿಟ್ಟು, ಶಾಕುಂತಲಾ ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಶಾಕುಂತಲಾ ಈ ಸಮಸ್ಯೆಗೆ ಸರಿಯಾದ ಪರಿಹಾರ ಹುಡುಕಬೇಕು ಅಂತ ಪಣ ತೊಟ್ಟಿದ್ದಾಳೆ.


ಜ್ಯೋತಿಷಿ ಹೇಳಿದ್ದೇನು?

ಮನೆಗೆ ಜ್ಯೋತಿಷಿಯನ್ನು ಕರೆಸಿದ ಶಾಕುಂತಲಾ ಅವರ ಬಳಿ ಗೌತಮ್ ಮುಂದೆಯೇ ಸುಳ್ಳು ಭವಿಷ್ಯ ಹೇಳಿಸಿದ್ದಾಳೆ. ಗೌತಮ್ ಹತ್ತಿರ ಜ್ಯೋತಿಷಿ ಬಂದು, ನಿಮ್ಮ ಹಾಗೂ ನಿಮ್ಮ ಪತ್ನಿಯ ಜಾತಕ ಹೊಂದಾಣಿಕೆ ಆಗ್ತಿಲ್ಲ, ನೀವಿಬ್ಬರೂ ಒಂದಾಗಬಾರದು, ನೀವಿಬ್ಬರೂ ಒಂದಾದರೆ ನಿಮ್ಮ ಪತ್ನಿ ಸಾಯುತ್ತಾಳೆ ಅಂತ ಹೇಳಿದ್ದಾರೆ. ಇದನ್ನು ಕೇಳಿ ಗೌತಮ್ ಶಾಕ್ ಆಗಿದ್ದಾನೆ. ಭೂಮಿಗೆ ಲವ್ ವಿಚಾರವನ್ನು ಅವನು ಹೇಳೋದು ಡೌಟ್ ಎನ್ನಬಹುದು.‌ ಭೂಮಿ ಹತ್ತಿರ ಅವನು ನಿಮ್ಮ ಮೇಲೆ ಲವ್ ಇಲ್ಲ ಅಂತ ಹೇಳಬಹುದು. ‌


Seetha Raama Serial: ಹಳೇ ಜೀವನದ ಬಗ್ಗೆ ಅರ್ಧ ಸತ್ಯ ಹೇಳಿದ ಸೀತಾ, ರಾಮ್‌ಗೆ ಶುರುವಾಯ್ತು ಅನುಮಾನ
ಈಗ ಇರುವ ಪ್ರಶ್ನೆ ಏನು?

ಒಟ್ಟಿನಲ್ಲಿ ಇವರಿಬ್ಬರು ಒಂದಾಗಲು ಶಾಕುಂತಲಾ ಅಡ್ಡಿ ಮಾಡುತ್ತಿದ್ದಾಳೆ. ಇದೆಲ್ಲವನ್ನೂ ಮೀರಿ ಈ ಜೋಡಿ ಒಂದಾಗತ್ತಾ? ತಮ್ಮ ಪ್ರೀತಿಯನ್ನು ಹೇಳಿಕೊಂಡು ಸಂಸಾರ ನಡೆಸತ್ತಾ ಅಂತ ಕಾದು ನೋಡಬೇಕಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ