ಆ್ಯಪ್ನಗರ

'ನನ್ನ ಹೆಂಡ್ತಿ ಚೈತ್ರಾ ಬದುಕಿರೋದು ಮಿರಾಕಲ್ ಅಂತ ಡಾಕ್ಟರ್ ಹೇಳಿದ್ರು'- 'ಅಮೃತಧಾರೆ' ಧಾರಾವಾಹಿ ಆನಂದ್

Actor Silli Lalli Anand Love Story: 'ಅಮೃತಧಾರೆ' ಧಾರಾವಾಹಿಯಲ್ಲಿ ಆನಂದ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ನಟ ಆನಂದ್ ಅವರು ರಿಯಲ್ ಪತ್ನಿ ಚೈತ್ರಾ ಜೊತೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದಾರೆ. ಆ ವೇಳೆ ಪ್ರೀತಿ ಶುರುವಾಗಿದ್ದು ಹೇಗೆ? ಮದುವೆಯಾಗಿದ್ದು? ಮದುವೆಯಾದ ನಂತರ ಅನುಭವಿಸಿದ ಕಷ್ಟದ ಬಗ್ಗೆ ಮಾತನಾಡಿದ್ದಾರೆ. ಇವರಿಬ್ಬರ ಮಧ್ಯೆ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಪ್ರೀತಿ ಮಾತ್ರ ಇದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 10 Sep 2023, 8:51 pm

ಹೈಲೈಟ್ಸ್‌:


  • ಲವ್ ಸ್ಟೋರಿ ಬಗ್ಗೆ ಮಾತನಾಡಿದ 'ಸಿಲ್ಲಿ ಲಲ್ಲಿ' ಆನಂದ್, ಚೈತ್ರಾ
  • 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಆನಂದ್, ಚೈತ್ರಾ ಸ್ಪರ್ಧಿಗಳು
  • ಕೊರೊನಾದಲ್ಲಿ ಪತ್ನಿಯನ್ನು ತುಂಬ ಕೇರ್ ಮಾಡಿದ್ದ ಆನಂದ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web silli lalli anand
'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ನಟ ಆನಂದ್ ಅವರು ರಿಯಲ್ ಪತ್ನಿ ಚೈತ್ರಾ ಜೊತೆಗೆ 'ಜೋಡಿ ನಂ 1 ಸೀಸನ್ 2' ಶೋನಲ್ಲಿ ಭಾಗವಹಿಸಿದ್ದಾರೆ. ಆ ವೇಳೆ ಅವರು ತಮ್ಮ ಪ್ರೀತಿ ವಿಷಯವನ್ನು ಹೇಳಿದ್ದಾರೆ, ಪತ್ನಿ ಕೊರೊನಾ ಟೈಮ್‌ನಲ್ಲಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡಿದ್ದನ್ನು ಕೂಡ ಸ್ಮರಿಸಿಕೊಂಡಿದ್ದಾರೆ.

ಚೈತ್ರಾ ಹೇಳಿದ್ದೇನು?
" 'ಮಾರುತಿ 800' ಸಿನಿಮಾ ನೋಡಿದಾಗ ನನಗೆ ಇವರ ಫೇಸ್ ಮನಸ್ಸಲ್ಲಿ ಮನದಟ್ಟಾಯ್ತು. ಸಿಲ್ಲಿ ಲಲ್ಲಿ ನೋಡಿದಾಗ ಇವರ ಮುಖ ನೆನಪಿಗೆ ಬರುತ್ತಿತ್ತು. ನಾನೇ ಇವರಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಹಾಕಿದೆ. ಎಸ್‌ಪಿ ರೋಡ್ ಅಲ್ಲಿ ನಾವಿಬ್ಬರೂ ಮೊದಲು ಭೇಟಿ ಆಯ್ತು. ನಾನು ಮೊದಲ ಬಾರಿಗೆ ಈ ರೀತಿ ವೇದಿಕೆಯಲ್ಲಿ ನಿಂತಿದ್ದೇನೆ. ಅನಾರೋಗ್ಯ ಆದಾಗ ನನ್ನನ್ನು ತುಂಬ ಕೇರ್ ಮಾಡ್ತಾರೆ" ಎಂದಿದ್ದಾರೆ ಆನಂದ್ ಪತ್ನಿ ಚೈತ್ರಾ.

ಮದುವೆಗೆ 1 ವಾರ ಇದ್ದಾಗಲೇ ಭಾವಿ ಪತಿಯ ನಂಬರ್ ಬ್ಲ್ಯಾಕ್ ಮಾಡಿದ್ದ 'ಶ್ರೀರಸ್ತು ಶುಭಮಸ್ತು' ನಟಿ
ಸಿಲ್ಲಿ ಲಲ್ಲಿ ಆನಂದ್ ಹೇಳಿದ್ದೇನು?

"ಎಸ್‌ಪಿ ರೋಡ್ ಅಲ್ಲಿ ಮಾಸ್ ಸಿನಿಮಾದಲ್ಲಿನ ಹೀರೋ ರೀತಿ ನನಗೆ ಚೈತ್ರಾ ಕಾಣಿಸಿಕೊಂಡರು. ಎಷ್ಟೇ ಕಷ್ಟಬಂದರೂ ಕೂಡ ಗಟ್ಟಿಯಾಗಿ ನಿಲ್ಲುವ ಹೆಂಡ್ತಿ ನನಗೆ ಸಿಕ್ಕಿದ್ದಾಳೆ. ನನಗೆ ಯಾವತ್ತಾದ್ರೂ ಚೈತ್ರಾರನ್ನು ಎತ್ತೋಕೆ ಹೇಳಿದ್ರೆ ಏನು ಮಾಡೋದು ಎನ್ನುವ ಭಯ ಇದೆ" ಎಂದು ಸಿಲ್ಲಿ ಲಲ್ಲಿ ಆನಂದ್ ಹೇಳಿದ್ದಾರೆ.

"ಕಲಾವಿದ ಅಂತ ನನ್ನ ಮನೆಯಲ್ಲಿ ಆನಂದ್ ಅವರನ್ನು ಮದುವೆ ಆಗಲು ಒಪ್ಪಿರಲಿಲ್ಲ. ನಾನು ದಪ್ಪ ಇದ್ದೀನಿ, ಮಕ್ಕಳಾಗಲ್ಲ ಅಂತ ಅವರ ಮನೆಯಲ್ಲಿ ಒಪ್ಪುತ್ತಿರಲಿಲ್ಲ. ಆದರೆ ಈಗ ನಾವಿಬ್ಬರೂ ಚೆನ್ನಾಗಿದ್ದೇವೆ" ಎಂದು ಆನಂದ್ ಹೇಳಿದ್ದಾರೆ.

"ಕೊರೊನಾ ವೈರಸ್ ಬಂದಾಗ ಆರಂಭದಲ್ಲಿ ನನ್ನ ತಾಯಿಗೆ ಪಾಸಿಟಿವ್ ಆಗಿತ್ತು. ಆಗ ಬೆಡ್ ವ್ಯವಸ್ಥೆ ಮಾಡಲು ತುಂಬ ಕಷ್ಟಪಟ್ಟಿದ್ದೆ. ಮರುದಿನ ನನ್ನ ಹೆಂಡ್ತಿಗೆ ಉಸಿರಾಡಲು ಕಷ್ಟ ಆಗ್ತಿತ್ತು. ನಾನು ಹೇಗೋ ಏನೋ ಮಾಡಿ ಹೆಂಡ್ತಿಗೂ ಬೆಡ್ ವ್ಯವಸ್ಥೆ ಮಾಡಿದ್ದೆ. ನನ್ನ ತಾಯಿಗೆ ದೇವಸ್ಥಾನ ಕಟ್ಟಬೇಕು ಅಂತ ಆಸೆ ಇತ್ತು, ಇನ್ನೊಂದು ಎರಡೂವರೆ ವರ್ಷದ ಮಗುವಿದೆ, ಅದಕ್ಕೆ ತಾಯಿ ಬೇಕು, ಹಾಗಾಗಿ ನನಗೆ ಇಬ್ಬರನ್ನೂ ಉಳಿಸಿಕೊಡು ಅಂತ ದೇವರ ಬಳಿ ಕೇಳಿಕೊಂಡಿದ್ದೆ" ಎಂದು ಆನಂದ್ ಹೇಳಿದ್ದಾರೆ.

'ನಮ್ಮಿಬ್ಬರ ಪರ್ಸನಾಲಿಟಿ ಹಿಂಗಿದೆ, ಪ್ರೀತಿ ನಾಟಕ ಮಾಡ್ತೀದ್ದೀವಿ ಅಂತ ಜನ ಅಂದ್ರು'-ಸಂಜು ಬಸಯ್ಯ ಪತ್ನಿ ಪಲ್ಲವಿ

"ಪ್ರತಿದಿನ ಬೆಳಗ್ಗೆ ಆಸ್ಪತ್ರೆಯಿಂದ ನೀನು ವಿಡಿಯೋ ಕಾಲ್ ಮಾಡಿ ಹುಷಾರಾಗಿದ್ದೀಯಾ ಅಂತ ಕಾಲ್ ಮಾಡಿ ಹೇಳಿದ್ಮೇಲೆ ನಾನು ಆಸ್ಪತ್ರೆಗೆ ಬರ್ತೀನಿ ಅಂತ ಹೇಳಿದ್ದೆ. ಅಕ್ಕ ಪಕ್ಕದ ಬೆಡ್‌ನಲ್ಲಿ ರಾತ್ರಿ ಚೆನ್ನಾಗಿದ್ದೋರು ಬೆಳಗ್ಗೆ ಸಾಯ್ತಿದ್ರು. ನಮಗಂತೂ ತುಂಬ ಭಯ ಆಗಿತ್ತು. ನನ್ನ ತಾಯಿಗೆ ಅಸ್ತಮಾ ಸಮಸ್ಯೆ ಇತ್ತು. ಹೆಂಡ್ತಿ ದಪ್ಪ ಇದ್ದಾಳೆ. ಇವರಿಬ್ಬರು ಬದುಕಿರೋದು ಮಿರಾಕಲ್ ಅಂತ ನನಗೆ ವೈದ್ಯರು ಹೇಳಿದ್ರು." ಎಂದು ಸಿಲ್ಲಿ ಲಲ್ಲಿ ಆನಂದ್ ಹೇಳಿದ್ದಾರೆ.

ಚೈತ್ರಾ ಹೇಳಿದ್ದೇನು?
"ನಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯ ಇದ್ದರೂ ಕೂಡ ಇವರು ನನ್ನನ್ನು ಎಂದೂ ಬಿಟ್ಟುಕೊಟ್ಟಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿ ಇದೆ" ಎಂದು ಚೈತ್ರಾ ಹೇಳಿದ್ದಾರೆ.

ಆನಂದ್ ಹಾಗೂ ಚೈತ್ರಾ ಅವರು ಮದುವೆ ಆಗಿ 6 ವರ್ಷಗಳು ಉರುಳಿವೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ