ಬೆಂಗಳೂರು: 'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು' ಎಂದು ಗೃಹ ಸಚಿವ ಆರ್.ಅಶೋಕ್ ನುಡಿದರು.
ಕಾಂಗ್ರೆಸ್ನ ಅಲ್ಲಮಪ್ರಭು ಪಾಟೀಲ್ ಅವರಿಗೆ ಉತ್ತರಿಸಿ, 'ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಜತೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ/ ಅಪರಾಧಗಳನ್ನು ತಡೆಗಟ್ಟಲು ಜನ ಸಂಪರ್ಕ ಸಭೆ ನಡೆಸಲೂ ಉದ್ದೇಶಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ವಿಶೇಷ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಹಣವನ್ನೂ ಮೀಸಲಿಡಲಾಗಿದೆ ಎಂದರು.
ಗಣ್ಯರಿಗೆ ಭದ್ರತೆ, ಮುಷ್ಕರ, ಪ್ರತಿಭಟನೆಗೆ ಕಾವಲು ಇತ್ಯಾದಿಗಳಿಗೆ ಈಗಿನ ಪೊಲೀಸರನ್ನು ನಿಯೋಜಿಸುವ ಬದಲು, ಇದಕ್ಕೆಂದೇ ಪ್ರತ್ಯೇಕ ಪಡೆ ಸ್ಥಾಪಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕೆ.ಗೋವಿಂದರಾಜು ಪ್ರಶ್ನೆಗೆ ಸಚಿವರು ಆಶ್ವಾಸನೆ ನೀಡಿದರು.
ಜೆಡಿಎಸ್ನ ಎಂ.ಸಿ.ನಾಣಯ್ಯ, 'ಗಣ್ಯರ ವಾಹನಗಳ ಹಿಂದೆ- ಮುಂದೆ ಸಾಗುವ ಭದ್ರತಾ ವಾಹನಗಳು ರಸ್ತೆಯಲ್ಲಿ ಭಯ ಹುಟ್ಟಿಸುವ ವೇಗದಲ್ಲಿ ಚಲಿಸುತ್ತಿವೆ. ಇದರಿಂದ ಇತ್ತೀಚೆಗೆ ಸಾಕಷ್ಟು ಪ್ರಾಣಿಹಾನಿ, ಅಪಘಾತ ಪ್ರಕರಣಗಳೂ ನಡೆದಿವೆ. ಆದ್ದರಿಂದ ಗಣ್ಯರ ವಾಹನಗಳು 80 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಹೋಗದಂತೆ ಎಚ್ಚರ ವಹಿಸಿದರೆ, ಸಾರ್ವಜನಿಕರ ಜೀವಕ್ಕೆ ರಕ್ಷಣೆ ಸಿಗುತ್ತದೆ' ಎಂದರು.
ಕಾಂಗ್ರೆಸ್ನ ಅಲ್ಲಮಪ್ರಭು ಪಾಟೀಲ್ ಅವರಿಗೆ ಉತ್ತರಿಸಿ, 'ಒಂಬತ್ತು ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಜತೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ/ ಅಪರಾಧಗಳನ್ನು ತಡೆಗಟ್ಟಲು ಜನ ಸಂಪರ್ಕ ಸಭೆ ನಡೆಸಲೂ ಉದ್ದೇಶಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ವಿಶೇಷ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಹಣವನ್ನೂ ಮೀಸಲಿಡಲಾಗಿದೆ ಎಂದರು.
ಗಣ್ಯರಿಗೆ ಭದ್ರತೆ, ಮುಷ್ಕರ, ಪ್ರತಿಭಟನೆಗೆ ಕಾವಲು ಇತ್ಯಾದಿಗಳಿಗೆ ಈಗಿನ ಪೊಲೀಸರನ್ನು ನಿಯೋಜಿಸುವ ಬದಲು, ಇದಕ್ಕೆಂದೇ ಪ್ರತ್ಯೇಕ ಪಡೆ ಸ್ಥಾಪಿಸಲು ಗಂಭೀರ ಚಿಂತನೆ ನಡೆಸಿದೆ ಎಂದು ಕೆ.ಗೋವಿಂದರಾಜು ಪ್ರಶ್ನೆಗೆ ಸಚಿವರು ಆಶ್ವಾಸನೆ ನೀಡಿದರು.
ಜೆಡಿಎಸ್ನ ಎಂ.ಸಿ.ನಾಣಯ್ಯ, 'ಗಣ್ಯರ ವಾಹನಗಳ ಹಿಂದೆ- ಮುಂದೆ ಸಾಗುವ ಭದ್ರತಾ ವಾಹನಗಳು ರಸ್ತೆಯಲ್ಲಿ ಭಯ ಹುಟ್ಟಿಸುವ ವೇಗದಲ್ಲಿ ಚಲಿಸುತ್ತಿವೆ. ಇದರಿಂದ ಇತ್ತೀಚೆಗೆ ಸಾಕಷ್ಟು ಪ್ರಾಣಿಹಾನಿ, ಅಪಘಾತ ಪ್ರಕರಣಗಳೂ ನಡೆದಿವೆ. ಆದ್ದರಿಂದ ಗಣ್ಯರ ವಾಹನಗಳು 80 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಹೋಗದಂತೆ ಎಚ್ಚರ ವಹಿಸಿದರೆ, ಸಾರ್ವಜನಿಕರ ಜೀವಕ್ಕೆ ರಕ್ಷಣೆ ಸಿಗುತ್ತದೆ' ಎಂದರು.