Please enable javascript.ಲಗ್ನ ಮುಹೂರ್ತದಲ್ಲಿ ವೈಜ್ಞಾನಿಕ ಪ್ರಭಾವ - ಲಗ್ನ ಮುಹೂರ್ತದಲ್ಲಿ ವೈಜ್ಞಾನಿಕ ಪ್ರಭಾವ - Vijay Karnataka

ಲಗ್ನ ಮುಹೂರ್ತದಲ್ಲಿ ವೈಜ್ಞಾನಿಕ ಪ್ರಭಾವ

Vijaya Karnataka Web 7 Feb 2015, 4:35 am
Subscribe

ಜ್ಯೋತಿಷ್ಯಶಾಸ್ತ್ರದಲ್ಲಿ ಕಾಲವು ಮೂಲಭೂತವಾದ ಕ್ರಿಯಾಸತ್ವ. ಸೂರ್ಯಾದಿ ಗ್ರಹಗಳಿರುವ ಸೌರಮಂಡಲ ಸ್ಥಾನವು ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ, ಆಕಾಶ ತತ್ತ್ವಗಳಿಗೆ ಮೂಲಸ್ಥಾನವಾಗಿದೆ.

ಲಗ್ನ ಮುಹೂರ್ತದಲ್ಲಿ ವೈಜ್ಞಾನಿಕ ಪ್ರಭಾವ
* ಎಂ.ವಿ.ಸತ್ಯನಾರಾಯಣ
ಜ್ಯೋತಿಷ್ಯವು ಕಾಲವನ್ನು ಕುರಿತು ಹೇಳುವ ವಿಜ್ಞಾನ. ಇದು ಮಾನವನ ಆಗುಹೋಗುಗಳ ಮೇಲೆ ಬೆಳಕು ಚೆಲ್ಲುವ ಸಾಧನ. ಇದಲ್ಲದೇ ರಾಜ್ಯಗಳ, ಸಾಮ್ರಾಜ್ಯಗಳ ಯುದ್ಧಕ್ರಾಂತಿಗಳನ್ನು ಮತ್ತಿತರ ಪ್ರಾಪಂಚಿಕ ವಿಷಯಗಳನ್ನು ಕುರಿತು ಹೇಳುವ ಶಾಸ್ತ್ರ. ಅಸ್ಪಷ್ಟ ಊಹಾಪೋಹದಿಂದಲ್ಲ. ಗಣಿತಶಾಸ್ತ್ರದ ಲೆಕ್ಕಾಚಾರಗಳ ಸ್ಥಿರಾಧಾರದಿಂದ ಪರಿಶೀಲಿಸಿ ಕಾರಣಪೂರ್ವಕವಾಗಿ ವ್ಯಕ್ತಿಯ ಜೀವನದ ಘಟನೆಗಳನ್ನು ಸೂಚಿಸುವ ವಿಜ್ಞಾನವಾಗಿದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಕಾಲವು ಮೂಲಭೂತವಾದ ಕ್ರಿಯಾಸತ್ವ. ಸೂರ್ಯಾದಿ ಗ್ರಹಗಳಿರುವ ಸೌರಮಂಡಲ ಸ್ಥಾನವು ಪಂಚಭೂತಗಳಾದ ಅಗ್ನಿ, ಪೃಥ್ವಿ, ವಾಯು, ಜಲ, ಆಕಾಶ ತತ್ತ್ವಗಳಿಗೆ ಮೂಲಸ್ಥಾನ. ಸಕಲ ಚಿರಾಚರಾತ್ಮಕವಾದ ಈ ಪ್ರಪಂಚವು ಅಂದರೆ ಸಸ್ಯವರ್ಗ, ಪ್ರಾಣಿವರ್ಗ, ಜಡವರ್ಗ, ಮಾನವವರ್ಗಗಳೂ ಪಂಚಭೂತಮಯವಾಗಿದೆ. ಇದನ್ನು ಅಥೈಸಿದರೆ ಆಕಾಶಕಾಯಗಳಾದ ಗ್ರಹ, ನಕ್ಷತ್ರಗಳಿಗೂ ಭೂಮಿಯ ಮೇಲೆ ವಾಸ ಮಾಡುವ ಮಾನವರಿಗೂ ಅಲೌಕಿಕವಾದ ಸಂಬಂಧ ಎಲ್ಲ ಮಾನವರ ಮೇಲೆ ಜನನಕಾಲದಲ್ಲಿ ಉಂಟಾಗಿ ಅವನ ಸುಖ ದುಃಖಗಳಿಗೆ, ಏರು ಪೇರುಗಳಿಗೆ, ಗ್ರಹಗಳ, ನಕ್ಷತ್ರಗಳ ಆ ಕಾಲದ ಸ್ಥಿತಿಗತಿಗಳಿಂದ ಕಾರಣವಾಗುತ್ತದೆ ಎಂದು ಹೇಳಬಹುದು. ಈ ಸ್ಥಿತಿಗತಿಗಳನ್ನು ಜನನ ಕಾಲದ ಜಾತಕ ಕುಂಡಲಿ ರಚಿಸಿ ಆಗುವ ಶುಭಾಶುಭಗಳನ್ನು ತಿಳಿಯಬಹುದು. ಮುಂದುವರಿದು ಇದಕ್ಕೆ ವಿಜ್ಞಾನದ ಆಧಾರವೆಂದರೆ ಮೂರು ಬಗೆಯ ಕ್ಷೇತ್ರಗಳಾದ ವಿದ್ಯುತ್ ಕ್ಷೇತ್ರ, ಕಾಂತ ಕ್ಷೇತ್ರ, ಪಂಚಭೂತಗಳಾದ ಅಗ್ನಿ ಪೃಥ್ವಿ, ವಾಯು, ಜಲ, ಆಕಾಶದ ಮೂಲಕ ಸ್ಥಾನವಾದ ಸೂರ್ಯಾದಿ ಸಪ್ತಗ್ರಹಗಳು ಸೌರಮಂಡಲ ಸ್ಥಾನವೇ ವಿದ್ಯುತ್ ಕ್ಷೇತ್ರ. ಈ ಸ್ಥಾನದ ಆಕಾಶ ಕಾಯಗಳ ಶಕ್ತಿ, ಬೆಳಕು ಅಥವಾ ಪ್ರಭಾವಗಳು ಅವುಗಳ ಜ್ಯೋತಿ ಕಿರಣ ಅಥವಾ ರಶ್ಮಿ ಜಾಲದ ಮೂಲಕ ಕಾಂತ ಕ್ಷೇತ್ರದ ಮಾರ್ಗದಿಂದ ಪ್ರವಹಿಸಿದಾಗ ಗುರುತ್ವಾಕರ್ಷಣಶಕ್ತಿ ಹೊಂದಿರುವ ಭೂಮಿಯು ಆ ಶಕ್ತಿಗಳನ್ನು ಸ್ವಾಗತಿಸಿ ಭೂಮಿಯ ಮೇಲೆ ವಾಸವಾಗಿರುವ ಮಾನವರ ಮೇಲೆ ಜನನ ಕಾಲದಲ್ಲಿ ಪರಿಣಾಮ ಬೀರುವಂತೆ ಮಾಡಿ ಅವರ ಹುಟ್ಟಿನಂತೆ ಗ್ರಹಗಳ, ನಕ್ಷತ್ರಗಳ ಆ ಕಾಲದ ಸ್ಥಿತಿಗಳಂತೆ ಜೀವಿತ ಕಾಲದ ಶುಭಾಶುಭ ಫಲಗಳನ್ನು ತಿಳಿಸುವುದಾಗಿದ್ದು ಆ ಕಾಲದಲ್ಲಿ ಬರೆಯುವುದೇ ಜಾತಕ ಕುಂಡಲಿ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ