ಆ್ಯಪ್ನಗರ

5 ಮೂಢನಂಬಿಕೆಗಳ ಹಿಂದಿರುವ ವೈಜ್ಞಾನಿಕ ನೋಟ

ಮೂಢನಂಬಿಕೆ ಆಚರಿಸುವಷ್ಟು ದೊಡ್ಡ ಮೂರ್ಖತನ ಬೇರೊಂದಿಲ್ಲ. ಆದರೆ ಹಿರಿಯರು ಹೇಳುವ ಕೆಲವೊಂದು ಆಚರಣೆಗಳು ಮೂಢನಂಬಿಕೆ ಅನಿಸಿದರೂ ಸೂಕ್ಷ್ಮವಾಗಿ ನೋಡಿದರೆ ಅವುಗಳ ಹಿಂದೆ ಒಂದು ವೈಜ್ಞಾನಿಕ ಕಾರಣವಿರುತ್ತವೆ.

Vijaya Karnataka Web 12 Jul 2018, 3:21 pm
ಮೂಢನಂಬಿಕೆ ಅನುಸರಿಸುವಷ್ಟು ದೊಡ್ಡ ಮೂರ್ಖತನ ಬೇರೊಂದಿಲ್ಲ. ಆದರೆ ಹಿರಿಯರು ಹೇಳುವ ಕೆಲವೊಂದು ಆಚರಣೆಗಳು ಮೂಢನಂಬಿಕೆ ಅನಿಸಿದರೂ ಸೂಕ್ಷ್ಮವಾಗಿ ನೋಡಿದರೆ ಅವುಗಳ ಹಿಂದೆ ಒಂದು ವೈಜ್ಞಾನಿಕ ಕಾರಣವಿರುತ್ತವೆ.
Vijaya Karnataka Web lemon


ಮೂಢನಂಬಿಕೆಗಳು ಹಾಗೂ ಅವುಗಳ ಹಿಂದಿದೆ ವೈಜ್ಞಾನಿಕ ಕಾರಣ


ಸಂಜೆಯಾದ ಬಳಿಕ ಉಗುರು ಕತ್ತರಿಸಬಾರದು

ಹಿಂದೆ ವಿದ್ಯುತ್‌ ಬೆಳಕು ಇರಲಿಲ್ಲ, ಹರಿತವಾದ ನೈಫ್ , ಬ್ಲೇಡ್‌ ಬಳಸಿ ಉಗುರು ಕತ್ತರಿಸುತ್ತಿದ್ದರು. ಸಂಜೆಯಾದರೆ ಸರಿಯಾಗಿ ಕಾಣದೆ ಉಗುರಿಗೆ ಗಾಯವಾಗುವ ಸಾಧ್ಯತೆ ಇರುವುದರಿಂದ ಸಂಜೆ ಉಗುರು ಕತ್ತರಿಸಬಾರದು ಎಂದು ಹೇಳುತ್ತಿದ್ದರು.

ಸಾವು ಮನೆಗೆ ಹೋಗಿ ಬಂದರೆ ಸ್ನಾನ ಮಾಡಬೇಕು
ದೇಹವನ್ನು ಸುಡುವಾಗ ಕೆಲವೊಮ್ಮೆ ಸೋಂಕು, ಬ್ಯಾಕ್ಟೀರಿಯಾ ಹರಡುವುದು, ಅಲ್ಲದೆ ಸ್ನಾನ ಮಾಡುವುದರಿಂದ ಮನಸ್ಸು ಫ್ರೆಶ್‌ ಆಗುವುದರಿಂದ ಸಾವು ಮನೆಗೆ ಹೋಗಿ ಬಂದರೆ ಸ್ನಾನ ಮಾಡಬೇಕೆಂದು ಹಿರಿಯರು ಹೇಳುತ್ತಾರೆ.

ಮನೆ ಬಾಗಿಲಿಗೆ ನಿಂಬೆ ಹಣ್ಣು, ಮೆಣಸಿನಕಾಯಿಯ ತೋರಣ ಕಟ್ಟುವುದು
ನಿಂಬೆಹಣ್ಣು ಹಾಗೂ ಹಸಿ ಮೆಣಸು ಕೀಟಾಣುಗಳನ್ನು ತಡೆಯುತ್ತವೆ, ಮನೆ ಬಾಗಿಲಿಗೆ ಕಟ್ಟಿದರೆ ಕೀಟಾಣುಗಳು ಒಳಗೆ ಬರುವುದಿಲ್ಲ.

ರಾತ್ರಿ ಅರಳಿ ಮರದ ಬಳಿ ಹೋಗಬಾರದು
ರಾತ್ರಿ ಹೊತ್ತು ಈ ಮರ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುವುದರಿಂದ ಉಸಿರುಕಟ್ಟಿ ಸಾವು ಸಂಭವಿಸುವುದು, ಆದ್ದರಿಂದ ಮಲಗಬಾರದು ಎಂದು ಹೇಳುತ್ತಾರೆ.

ಮುಟ್ಟಿನ ಸಮಯದಲ್ಲಿ ದೇವಾಲಯಕ್ಕೆ ಹೋಗಬಾರದು
ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬಹುದೂರ ನಡೆದುಕೊಂಡು ಹೋಗುತ್ತಿದ್ದರು, ಅಲ್ಲದೆ ಪೂಜೆ ಕಾರ್ಯಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಆ ಸಮಯದಲ್ಲಿ ಅಷ್ಟೊಂದು ಚೈತನ್ಯವಿರುವುದಿಲ್ಲ. ಆದ್ದರಿಂದ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಉದ್ದೇಶದಿಂದ ಆಕೆ ಪೂಜೆಯಲ್ಲಿ ಭಾಗವಹಿಸಬಾರದು, ಅಡುಗೆ ಮನೆಗೆ ಬರಬಾರದು ಮುಂತಾದ ನಿಯಮಗಳನ್ನು ತಂದರು. ಆದರೆ ಕ್ರಮೇಣ ಮುಟ್ಟಿಗೆ ಮೈಲಿಗೆಯ ರೂಪ ನೀಡಿ ಆಕೆಯನ್ನು ದೂರ ಇಡಲಾರಂಭಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ