ಆ್ಯಪ್ನಗರ

ಕೆಲವೊಮ್ಮೆ ನಿರೀಕ್ಷೆಗಳು ಪ್ರಯತ್ನ ಪಟ್ಟರೂ ಕೈಗೂಡುವುದಿಲ್ಲ ಇದಕ್ಕೆ ಏನು ಕಾರಣ?

ವೃತ್ತಿಪರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಅನ್ನೋದು ಪ್ರತಿಯೊಬ್ಬರ ನಿರೀಕ್ಷೆ. ಕೆಲವೊಮ್ಮೆ ನಿರೀಕ್ಷೆಗಳು ಪ್ರಯತ್ನ ಪಟ್ಟರೂ ಕೈಗೂಡುವುದಿಲ್ಲ. ಹಾಗಾಗಲು ಕಾರಣವೇನು? ಗ್ರಹಗಳ ಎಫೆಕ್ಟಾ ಅಥವಾ ಮತ್ತೇನಾದರೂ ಕಾರಣವಾ?

Vijaya Karnataka 8 Jun 2019, 10:35 am
ಜಾಬ್‌ ಮಾರ್ಕೆಟ್‌ ಟ್ರೆಂಡ್‌ ಹಾಗೂ ಎಜುಕೇಷನ್‌ ಟ್ರೆಂಡ್‌ ಔಟ್‌ಪುಟ್‌ನ ಒಮ್ಮೆ ಕಂಪೇರ್‌ ಮಾಡಿನೋಡಿ. ಅವೆರಡರ ರೇಷಿಯೋ ನಡುವೆ ಎಷ್ಟೊಂದು ವ್ಯತ್ಯಾಸ ಇರುತ್ತೆ ಅಂತ. ಆದ್ರೆ ಒಂದಂತು ನಿಜ. ಜಾಬ್‌ ಮಾರ್ಕೆಟ್‌ನಲ್ಲಿ ಕ್ವಾಲಿಫಿಕೇಷನ್‌ ವೇಯಿಟೇಜ್‌ ಒಂದು ಕಡೆ ಆದ್ರೆ ಎಷ್ಟು ಸ್ಮಾರ್ಟ್‌ ಆಗಿ ಓಪನ್‌ ಅಪ್‌ ಆಗ್ತೀರ ಅನ್ನೋದು ಮುಖ್ಯ. ಸ್ಮಾರ್ಟ್‌ ಆಗಿರೋದು ಎಂದರೆ ಎಷ್ಟು ಚುರುಕಾಗಿರ್ತೀರಾ, ವಿಷಯಗಳನ್ನು ಹೇಗೆ ಗ್ರಹಿಸ್ತೀರಾ, ಪ್ರೆಸೆಂಟೇಷನ್‌ ಹೇಗೆ ಮಾಡ್ತೀರಾ ಅನ್ನೋದು ಮುಖ್ಯ. ಈ ಹಂತದಲ್ಲೇ ಬಹಳಷ್ಟು ಅದೆಷ್ಟೇ ಡಿಗ್ರಿ ಪಡೆದಿದ್ದರೂ ಒಳ್ಳೆಯ ಜಾಬ್‌ ಪಡೆಯೋದ್ರಲ್ಲಿ ಕಷ್ಟ ಪಡ್ತಾರೆ. ವೈಜ್ಞಾನಿಕವಾಗಿ ವಿಶ್ಲೇಷಿಸಲ್ಪಡುವ ವ್ಯಕ್ತಿಯ ಔಟ್‌ಲುಕ್‌, ಸ್ವಭಾವ, ಗ್ರಹಣಾ ಸಾಮರ್ಥ್ಯ‌ ಎಲ್ಲವನ್ನು ಜ್ಯೋತಿಷ ಗ್ರಹ ಸ್ಥಾನಗಳ ಆಧಾರದ ಮೇಲೆ ಲೆಕ್ಕ ಹಾಕುತ್ತದೆ. ಗ್ರಹ ಗೋಚಾರ ಫಲದ ಮೇಲೆ ವೃತ್ತಿಕ್ಷೇತ್ರದ ಮುನ್ನಡೆ ನಿರ್ಧಾರವಾಗುತ್ತದೆ ಎನ್ನುತ್ತದೆ.
Vijaya Karnataka Web career


ಶಾಲಾ ದಿನಗಳಲ್ಲಿ ನಾವು ರೇಖಾಗಣಿತದ ಬಗ್ಗೆ ಅಷ್ಟಿಷ್ಟು ಓದಿದ್ದೇವೆ. ರೇಖಾಗಣಿತದಲ್ಲಿ ತ್ರಿಕೋನ, ಚತುಷ್ಕೋನ, ಆಯತ, ಚೌಕ ಮತ್ತಿತರ ವಿನ್ಯಾಸಗಳಿವೆ. ವೈಜ್ಞಾನಿಕವಾದ ಜ್ಯೋತಿಷ ಈ ವಿನ್ಯಾಸಗಳ ಆಧಾರದ ಮೇಲೆ ಯಂತ್ರಗಳನ್ನು ರಚಿಸಿದೆ. ದೋಷಕ್ಕೆ ಸಂಬಂಧ ಪಟ್ಟ ಯಂತ್ರಗಳಲ್ಲಿ ದೇವರನ್ನು ಬೀಜಾಕ್ಷರ ರೂಪದಲ್ಲಿ ಆಹ್ವಾನಿಸಿ ಪೂಜಿಸಿದರೆ ಫಲಪ್ರಾಪ್ತಿ ಎನ್ನುತ್ತದೆ ಫಲ ಜ್ಯೋತಿಷ.

ಯಂತ್ರ, ಮಂತ್ರ, ತಂತ್ರಗಳಿಂದ ಆಗುವ ಲಾಭವೇನು ಎಂದು ಮೊದಲು ಯೋಚಿಸುವ. ಯಂತ್ರಗಳೊಳಗಿನ ವಿನ್ಯಾಸಗಳು ಹಾಗೂ ಮಂತ್ರೋಚ್ಛಾರಣೆಗಳು, ಶಾರೀರಿಕವಾದ ತಂತ್ರ ಕ್ರಮಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷದ ರೀತ್ಯ ಬುಧ ಬುದ್ಧಿಕಾರಕ. ಚಂದ್ರ ಮನೋಕಾರಕ. ಯಾವುದೇ ಕೆಲಸದಲ್ಲಿ ಯಶಸ್ಸು ದೊರೆಯಲು ಬುಧನ ಅನುಗ್ರಹ ಮುಖ್ಯ.

ಹಾಗಾಗಿ ವೃತ್ತಿಕ್ಷೇತ್ರದಲ್ಲಿ ಯಶೋಭಿವೃದ್ಧಿಗಾಗಿ ಯಂತ್ರೋಕ್ತ ಪ್ರಕಾರ ಗಣಪತಿಯ ಆರಾಧನೆ ಒಳ್ಳೆಯದು. ಬೆಳ್ಳಿ ಅಥವಾ ಬಂಗಾರದಿಂದ ಮಾಡಿದ ಗಣಪತಿ ಯಂತ್ರವನ್ನು ಯಥಾಶಕ್ತಿ ಪೂಜಿಸುವುದರಿಂದ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಗಣಪತಿ ಮೂಲ ಮಂತ್ರವನ್ನು ಪ್ರತಿನಿತ್ಯ ಇಂತಿಷ್ಟು ಜಪ ಮಾಡುವುದರಿಂದ ಮನಸ್ಸಿನ ಏಕಾಗ್ರತೆಯೂ ವೃದ್ಧಿಯಾಗುತ್ತದೆ. ಏಕಾಗ್ರತೆಯಿಂದ ಆತ್ಮ ವಿಶ್ವಾಸ, ಆತ್ಮ ವಿಶ್ವಾಸದಿಂದ ಗಾಂಭೀರ್ಯ, ಗಾಂಭೀರ್ಯದಿಂದ ಏಳ್ಗೆ ಶತಸ್ಸಿದ್ಧ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ