ಆ್ಯಪ್ನಗರ

ದೀಪಗಳ ವೈವಿಧ್ಯತೆ

Vijaya Karnataka Web 13 Oct 2017, 2:42 pm

ಯಾವುದೇ ಕಾರ್ಯಕ್ರಮಕ್ಕೆ ಮುನ್ನ ದೀಪ ಹಚ್ಚುವ ಪದ್ದತಿ ಸಾರ್ವತ್ರಿಕವಾಗಿದೆ. ದೀಪ ಬೆಳಗಿದ ನಂತರವಷ್ಟೇ ದೇವತಾರಾಧನೆ ಮಾಡಿ. ಬೆಳ್ಳಿ, ಹಿತ್ತಾಳೆ, ಕಂಚು ಅಥವಾ ತಾಮ್ರದ ದೀಪಗಳನ್ನು ಬಳಸಬಹುದು. ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವುದು ಶ್ರೇಷ್ಠ. ಸುಮಂಗಲಿಯರು ದೇವಿಯ ಪ್ರೀತ್ಯರ್ಥವಾಗಿ ಬೆಲ್ಲದಾರತಿ ಮಾಡುತ್ತಾರೆ. ಶಕ್ತಿ ದೇವತೆಯ ತೃಪ್ತಿಗಾಗಿ ನಿಂಬೆ ಹಣ್ಣಿನ ದೀಪವನ್ನು ಬೆಳಗುವ ವಾಡಿಕೆಯಿದೆ. ನೆಲ್ಲಿಕಾಯಿಯ ಆರತಿ ಕೃಷ್ಣನಿಗೆ ಅತಿ ಪ್ರಿಯ. ಶನಿದೇವರಿಗೆ ಎಳ್ಳಿನ ಬತ್ತಿಯಾರತಿ ಶ್ರೇಷ್ಠ. ನಮ್ಮಲ್ಲಿ ನದಿಗಳನ್ನು ದೈವೀ ಸ್ವರೂಪದಲ್ಲೇ ಕಾಣುತ್ತೇವೆ. ಆ ಕಾರಣ ನದಿಯಲ್ಲಿ ದೀಪಗಳನ್ನು ತೇಲಿ ಬಿಡುವ ವಾಡಿಕೆಯಿದೆ. ಕಾರ್ತಿಕ ಮಾಸದಲ್ಲಂತೂ ದೀಪಾರಾಧನೆಗೆ ವಿಶೇಷ ಮಹತ್ವ. ಈ ಮಾಸದಲ್ಲಿ ಆಕಾಶ ಬುಟ್ಟಿಗಳನ್ನು ಹಾರಿಬಿಡುವ ಸಂಪ್ರದಾಯವಿದೆ. ಮಲೆನಾಡಿನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಟಿಕೆ-ಪಂಟಿಕೆ ಎಂದು ಕರೆಯುವ ಕಾರ್ಯದಲ್ಲಿ ದೇವಸ್ಥಾನದ ದೀಪವನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ