ಆ್ಯಪ್ನಗರ

ನಗ್ನವಾಗಿ ಈ ಕೆಲಸ ಮಾಡಿದ್ರೆ ಪಾಪ ತಟ್ಟುತ್ತಂತೆ!

ಲವು ಕೆಲಸಗಳನ್ನು ನಗ್ನವಾಗಿ ಮಾಡಿದರೆ, ಆ ಕೆಲಸಕ್ಕೆ ಅಪಮಾನ ಮಾಡಿದಂತಾಗುತ್ತದೆ. ಇದರಿಂದ ಪಾಪ ತಟ್ಟುತ್ತದೆ ಎಂದು ಹೇಳಲಾಗಿದೆ.

Navbharat Times 25 Mar 2019, 12:47 pm
[This story originally published in Navbharat Times]
Vijaya Karnataka Web naked


ವಿಷ್ಣು ಪುರಾಣದ ಪ್ರಕಾರ ಮಾನವನ ಕಲ್ಯಾಣಕ್ಕಾಗಿ ಕೆಲವು ನಿಯಮಗಳನ್ನು ಮಾಡಲಾಗಿದೆ. ಊಟ-ತಿಂಡಿ ಸೇರಿದಂತೆ ವಸ್ತ್ರ ಸಂಹಿತಿ ತನಕದ ಎಲ್ಲ ನಿಯಮಗಳು ಇದರಲ್ಲಿ ಸೇರಿವೆ. ಪುರಾಣದ ಪ್ರಕಾರ, ಕೆಲವು ಕೆಲಸಗಳನ್ನು ನಗ್ನವಾಗಿ ಮಾಡಿದರೆ, ಆ ಕೆಲಸಕ್ಕೆ ಅಪಮಾನ ಮಾಡಿದಂತಾಗುತ್ತದೆ. ಇದರಿಂದ ಪಾಪ ತಟ್ಟುತ್ತದೆ ಎಂದು ಹೇಳಲಾಗಿದೆ.

ಬೆತ್ತಲೆ ಸ್ನಾನ ಮಾಡುವಂತಿಲ್ಲ

ವಿಷ್ಣು ಪುರಾಣದ 12ನೇ ಅಧ್ಯಾಯದಲ್ಲಿ ತಿಳಿಸಿರುವಂತೆ, ಮನುಷ್ಯ ಸಂಪೂರ್ಣ ನಗ್ನವಾಗಿ ಸ್ನಾನ ಮಾಡುವಂತಿಲ್ಲ. ಸ್ನಾನದ ಸಮಯದಲ್ಲಿ ಕನಿಷ್ಠ ಒಂದು ಒಟ್ಟಿಯಾದರೂ ಮೈ ಮೇಲೆ ಇರಲೇಬೇಕು. ಗೋಪಿಕೆಯರು ಸ್ನಾನ ಮಾಡುವಾಗ ಅವರ ವಸ್ತ್ರ ಕದಿಯುವ ಮೂಲಕ ನಿರ್ವಸ್ತ್ರವಾಗಿ ಸ್ನಾನ ಮಾಡುವುದು ತಪ್ಪು ಎಂದು ಭಗವಾನ ಶ್ರೀಕೃಷ್ಣ ತೋರಿಸಿಕೊಟ್ಟಿದ್ದಾರೆ. ಬೆತ್ತಲೆ ಸ್ನಾನದಿಂದ ಜಲ ದೇವತೆಗೆ ಅಪಮಾನ ಮಾಡಿದಂತಾಗುತ್ತದೆ ಎಂದು ವಿಷ್ಣ ಪುರಾಣ ತಿಳಿಸುತ್ತದೆ.

ನಗ್ನವಾಗಿ ಮಲಗುವಂತಿಲ್ಲ

ಪುರಾಣದ ಪ್ರಕಾರ ನಗ್ನವಾಗಿ ಮಗಗುವಂತಿಲ್ಲ. ಬಟ್ಟಿ ಧರಿಸದೆ ಮಲಗುವುದರಿಂದ ಚಂದ್ರ ದೇವನಿಗೆ ಅಪಮಾನ ಮಾಡಿದಂತಾಗುತ್ತದೆ. ರಾತ್ರಿ ಸಮಯದಲ್ಲಿ ಪಿತೃಗಣ ತನ್ನವರನ್ನು ನೋಡಲು ಬರುತ್ತದೆ ಎಂದು ನಂಬಲಾಗಿದ್ದು, ತನ್ನವರು ನಗ್ನವಾಗಿ ಮಲಗಿರುವುದನ್ನು ಕಂಡು ದುಃಖ ಪಡುತ್ತದೆ. ಇದರಿಂದ ಆಶೀರ್ವಾದ ಸಹ ಮಾಡದೇ ತೆರಳುವ ಸಾಧ್ಯತೆ ಇರುತ್ತದೆ. ಅಷ್ಟೆ ಅಲ್ಲದೆ, ನಿರ್ವಸ್ತ್ರವಾಗಿ ನಿದ್ರಿಸುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.

ಬಟ್ಟೆ ಧರಿಸದೇ ಆಚಮನ ಮಾಡುವಂತಿಲ್ಲ

ಆಚಮನ (ವೈದಿಕಕರ್ಮಗಳನ್ನು ಮಾಡುವಾಗ ಶುದ್ಧಿಗಾಗಿ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು) ಸಂದರ್ಭದಲ್ಲಿ ಬೆತ್ತಲೆ ಆಗಿರಬಾರದು. ಆಚಮಾನ ಮಾಡುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಹೀಗಾಗಿ ಶುದ್ಧ ಮನಸ್ಸಿನಿಂದ ಮಾಡಿದ ಪೂಜೆ ಯಾವಾಗಲೂ ಫಲಪ್ರದವಾಗುತ್ತದೆ.

ನಿರ್ವಸ್ತ್ರ ಪೂಜೆ ಮಾಡುವಂತಿಲ್ಲ

ಕೆಲವರು ನಿರ್ವಸ್ತ್ರರಾಗಿ ದೇವರನ್ನು ಆರಾಧಿಸುತ್ತಾರೆ. ಆದರೆ, ಇದನ್ನು ವಿಷ್ಣು ಪುರಾಣದಲ್ಲಿ ತಪ್ಪು ಎಂದು ಹೇಳಲಾಗಿದೆ. ಪೂಜೆ ಪುನಸ್ಕಾರ ಮಾಡುವಾಗ ಕನಿಷ್ಠ ಬಟ್ಟೆಯನ್ನಾದರೂ ಧರಿಸಬೇಕು ಎಂದು ಪುರಾಣ ಹೇಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ