ಆ್ಯಪ್ನಗರ

ತಾರಾಬಲ, ಹುಟ್ಟಿದ ಲಗ್ನದ ಆಧಾರದ ಮೇಲೆ ಸುಮಧುರ ಬಾಂಧವ್ಯ

ಅನುಬಂಧಗಳು ಗಟ್ಟಿಯಾಗದ ಹೊರತು ನಿಜವಾದ ಸಂತೋಷ ಕಾಣಸಿಗುವುದಿಲ್ಲ. ಜ್ಯೋತಿಷ ಗ್ರಹಮೈತ್ರತ್ವವು ಆನಂದದ ಸೂಚಕ ಎನ್ನುತ್ತದೆ. ಸೂರ್ಯ-ಚಂದ್ರ, ಶುಕ್ರ-ಮಂಗಳ, ಗುರು-ಶನಿ ಸಂಬಂಧ ಬಾಂಧವ್ಯಗಳ ಸೂಚಕವಾಗಿದೆ.

Vijaya Karnataka 27 Oct 2018, 12:09 pm
ಮನುಷ್ಯನೊಳಗಿನ ಸಂತೋಷ ಕಂಡುಕೊಳ್ಳಲು ಸಾಧ್ಯವೇ? ಸಾಧ್ಯವಿದೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ಹೃದಯ ಹೃದಯಗಳ ನಡುವಿನ ಬಾಂಧವ್ಯ ಚೆನ್ನಾಗಿದ್ದರೆ ಸಂಬಂಧಗಳು ಚೆನ್ನಾಗಿರುತ್ತವೆ. ಮನಸ್ಸು ಮನಸ್ಸು ಹೊಂದಿಕೊಂಡರೆ ಜೀವನ ಸಕ್ಕರೆಯಷ್ಟೇ ಸವಿಯಾಗಿರುತ್ತದೆ. ಇಲ್ಲವಾದರೆ ಸಕ್ಕರೆಯೂ ಕಹಿಯಾದೀತು. ಬಾಂಧವ್ಯದ ಬೆಸುಗೆಯನ್ನು ಜ್ಯೋತಿಷ ಗ್ರಹಮೈತ್ರಿಯಲ್ಲಿ ಅರ್ಥೈಸುತ್ತದೆ. ಲಕ್ಷ್ಮಿ ಕಟಾಕ್ಷ, ಗೃಹಭಾಗ್ಯ ಯೋಗ, ಸಂತಾನ ಸೌಭಾಗ್ಯ, ಗುರಿ ಸಾಧನೆ, ಉದ್ಯೋಗ ಪ್ರಾಪ್ತಿಯ ನಿಟ್ಟಿನಲ್ಲಿ ಚಿಂತಿಸುತ್ತದೆ.
Vijaya Karnataka Web relationship


ಜ್ಯೋತಿಷಿ ಗ್ರಹಮೈತ್ರಿ, ತಾರಾಬಲ, ಹುಟ್ಟಿದ ಲಗ್ನದ ಆಧಾರದ ಮೇಲೆ ಸಂಬಂಧಗಳ ಬೆಸುಗೆ, ಸಂತೋಷವನ್ನು ಲೆಕ್ಕ ಹಾಕುತ್ತಾನೆ. ಗ್ರಹ ಸ್ಥಾನದ ಆಧಾರದ ಮೇಲೆ ವ್ಯಕ್ತಿಯ ಮನಸ್ಥಿತಿಯನ್ನು ಅಳೆಯುತ್ತಾನೆ.

ಬುಧ ಬುದ್ಧಿಕಾರಕ. ನಭೋಮಂಡಲದಲ್ಲಿ ಅವನ ಸುತ್ತ ಮೂರು ಗ್ರಹಗಳಿವೆ. ಸಂಬಂಧಗಳನ್ನು ಲೆಕ್ಕಹಾಕುವಾಗ ಅವುಗಳನ್ನೂ ಗಮನಕ್ಕೆ ತಂದುಕೊಳ್ಳಬೇಕು. ಆ ಗ್ರಹಗಳ ಪ್ರಭಾವದಿಂದ ಮನಸ್ಸಿನಲ್ಲಿ ಕ್ಷೋಭೆ ಉಂಟಾಗುತ್ತದೆ. ಬುಧನೊಂದಿಗೆ ಶನಿಯ ಪ್ರಭಾವ ಮಿಳಿತವಾದಾಗ ಪ್ರೀತಿ, ಬಾಂಧವ್ಯ ಕುಸಿಯುತ್ತದೆ. ಸಂಬಂಧಗಳು ಕೆಡುತ್ತವೆ.

ಗ್ರಹಗಳೇ ಸೇತು

ಪ್ರತಿಯೊಂದು ಸಮಸ್ಯೆಗೂ ಮಾನಸಿಕ ಒತ್ತಡವೇ ಕಾರಣ. ಒತ್ತಡ ಕಳೆದುಕೊಳ್ಳದ ಹೊರತು ಜೀವನದಲ್ಲಿ ಸುಖವಿಲ್ಲ. ಸಮಸ್ಯೆಗಳಿಗೆ ಪರಿಹಾರವಿಲ್ಲ. ದಂಪತಿಯ ಜಾತಕದಲ್ಲಿನ ಗ್ರಹಮೈತ್ರಿ ಬಾಂಧವ್ಯ ಸುಧಾರಣೆಯ ಸೇತುವಾಗುತ್ತದೆ. ಕೆಲವೊಮ್ಮೆ ಯಾವ ಗ್ರಹ ಮತ್ಯಾವ ಗ್ರಹವನ್ನು ದೃಷ್ಟಿಸುತ್ತಿದೆ ಎಂಬುದರ ಆಧಾರದಲ್ಲೂ ಜಾತಕನ ಮನಸ್ಥಿತಿಯನ್ನು ಲೆಕ್ಕಹಾಕಬಹುದು.

ಸೂರ್ಯ-ಚಂದ್ರ ಸಂಬಂಧ

ಸೂರ್ಯ ಮತ್ತು ಚಂದ್ರ ಬದುಕಿನ ಎರಡು ಧ್ರುವಗಳಿದ್ದಂತೆ. ಆದರೆ ಒಂದರ ಹೊರತು ಮತ್ತೊಂದಿಲ್ಲ. ಜ್ಯೋತಿಷದ ಪ್ರಕಾರ ಚಂದ್ರ ಮಹಿಳೆಯನ್ನು ಸೂಚಿಸಿದರೆ, ಸೂರ್ಯ ಪುರುಷತ್ವದ ಸಂಕೇತವಾಗುತ್ತಾನೆ. ಸ್ತ್ರೀಯರ ಜಾತಕದಲ್ಲಿ ರವಿಯ ಸ್ಥಾನವು ಆಕೆಯ ಸಂಗಾತಿ ಹೇಗಿರುತ್ತಾನೆ, ಆತನೊಡನೆ ಆಕೆಯ ಬಾಂಧವ್ಯ ಹೇಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಅಂತೆಯೇ ಪುರುಷನ ಜಾತಕದಲ್ಲಿ ಕಾಣಸಿಗುವ ಚಂದ್ರನ ಸ್ಥಾನ. ಇಲ್ಲಿ ಚಂದ್ರ ಮನೋಕಾರಕನಾಗಿದ್ದಾನೆ. ಸ್ತ್ರೀತ್ವದ ಸಂಕೇತವಾಗುತ್ತಾನೆ. ದಂಪತಿಯ ಜಾತಕದಲ್ಲಿ ಸೂರ್ಯ ಚಂದ್ರರ ಸ್ಥಾನ ಉತ್ತಮವಾಗಿದ್ದರೆ ಅವರ ದಾಂಪತ್ಯ ಜೀವನವೂ ಆದರ್ಶಮಯವಾಗಿರುತ್ತದೆ. ಮಾನಸಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಈಷ್ರ್ಯಾ ಮಟ್ಟವೂ ಕಡಿಮೆಯಾಗುತ್ತದೆ.

ಸೂರ್ಯ ಚಂದ್ರರ ಬಾಂಧವ್ಯ ವೈಜ್ಞಾನಿಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ರವಿ ಪಿತೃಕಾರಕನಾದರೆ, ಚಂದ್ರ ಮಾತೃಕಾರಕನಾಗುತ್ತಾನೆ. ಮದುವೆ ಎನ್ನುವುದು ಮಾನಸಿಕ ಸ್ಥಿತಿಗಳ ಸಂಬಂಧ. ಅದನ್ನೇ ಜ್ಯೋತಿಷ ಋುಣಾನುಬಂಧ ಎನ್ನುತ್ತದೆ. ಮನಸ್ಸು ನಿರಾಳವಾಗಿದ್ದರೆ ತಾನೇ ಸಂತೋಷ, ಸಂಭ್ರಮ. ಇಲ್ಲದಿದ್ದರೆ ಬೆಳಕೂ ಕತ್ತಲಂತೆ ಕಾಣುತ್ತದೆ! ಮಧುರ ಕ್ಷಣಗಳೂ ಕಹಿಯಾಗುತ್ತವೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ