ಆ್ಯಪ್ನಗರ

ಕಾರ್ತಿಕ ದೋಷಕ್ಕೊಂದು ಪರಿಹಾರ

ಅಜ್ಞಾನ ಕಳೆವ ಮಾಸವೇ ಕಾರ್ತಿಕ ಮಾಸ. ಕಾರ್ತಿಕ ಮಾಸದಲ್ಲಿ ಸೂರ್ಯ ಕಾರ್ತಿಕ ಸಂಕ್ರಾಂತಿ, ಕಾರ್ತಿಕ ಅಷ್ಟಮಿ ಅಥವಾ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರ ದೋಷ ಪರಿಹಾರ ಹೇಗೆ?

Vijaya Karnataka 17 Nov 2018, 1:06 pm
ಕಾರ್ತಿಕ ಮಾಸದಲ್ಲಿ ಅದರಲ್ಲೂ ಕಾರ್ತಿಕ ಸಂಕ್ರಾಂತಿ, ಕಾರ್ತಿಕ ಅಷ್ಟಮಿ ಅಥವಾ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದರೆ ಕಾರ್ತಿಕ ದೋಷವೆನ್ನುವ ಮಾತಿದೆ. ಅದರ ಪರಿಹಾರ ಹೇಗೆ ನೋಡೋಣ. ಕೃತ್ತಿಕೆ ಅಗ್ನಿ ನಕ್ಷತ್ರ. ಸೂರ್ಯನ ಕಾರಣ ಈ ನಕ್ಷತ್ರದವರಿಗೆ ಮಹಾದಶೆ, ಅಂತರ್‌ದೆಶೆ ಉಂಟಾಗುತ್ತದೆ. ಹಿಂದೂ ಪಂಚಾಂಗದ ರೀತ್ಯ ಸೂರ್ಯ ತುಲಾರಾಶಿಯನ್ನು ಪ್ರವೇಶಿಸಿದಾಗ ಅಂದರೆ ತುಲಾ ಸಂಕ್ರಮಣ ಕಾಲದಲ್ಲಿ ಕಾರ್ತಿಕ ಮಾಸ ಆರಂಭವಾಗಿ ಸೂರ್ಯ ವೃಶ್ಚಿಕ ಸಂಕ್ರಾಂತಿಯನ್ನು ಪ್ರವೇಶಿಸುವುದರೊಂದಿಗೆ ಅಂತ್ಯವಾಗುತ್ತದೆ.
Vijaya Karnataka Web karthika-masa


ತುಲಾರಾಶಿಯನ್ನು ಸೂರ್ಯ ಪ್ರವೇಶಿಸುವ ಸಂದರ್ಭದಲ್ಲಿ ಮಗುವಿನ ಜನನವಾದಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಒಳ್ಳೆಯದು. ಆದರೆ ಕಾರ್ತಿಕ ದೋಷ ಕ್ಷಣಿಕದ್ದಾದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಕಾರ್ತಿಕ ದೋಷವುಳ್ಳವರಲ್ಲಿ ಸಾಮಾನ್ಯವಾಗಿ ರವಿದೋಷ ಹೆಚ್ಚಾಗಿ ಕಾಡುತ್ತದೆ.

ಹಾಗೆಂದು ಕಾರ್ತಿಕ ಮಾಸದಲ್ಲಿ ಜನಿಸಿದರೆ ಅದೃಷ್ಟಹೀನರು ಎಂದು ಭಾವಿಸಬೇಕಿಲ್ಲ. ಕಾರ್ತಿಕ ಮಾಸದಲ್ಲಿ ಜನಿಸಿದ ಅದೆಷ್ಟೋ ಸೆಲಿಬ್ರಿಟಿಗಳು ಅತ್ಯುನ್ನತ ಪದವಿಯನ್ನು ಹೊಂದಿರುವುದನ್ನು ಗಮನಿಸಬಹುದು. ಉದಾ: ಪಂಡಿತ್‌ ಜವಹರಲಾಲ್‌ ನೆಹರು, ಐಶ್ವರ್ಯ ರೈ, ಬಾಲಿವುಡ್‌ ನಟಿ ಸ್ಮಿತ ಪಾಟೀಲ್‌ ಇತ್ಯಾದಿ.

ಪರಿಹಾರ ಹೇಗೆ?

ಸಾಮಾನ್ಯವಾಗಿ ಕಾರ್ತಿಕಮಾಸದಲ್ಲಿ ಜನಿಸಿದವರಿಗೆ ಜೀವನದಲ್ಲಿ ಅಡಚಣೆ ಹೆಚ್ಚು ಎನ್ನುವ ನಂಬಿಕೆಯಿದೆ. ಅದರ ನಿವಾರಣೆಗೆ ಕಾರ್ತಿಕ ದೋಷ ನಿವಾರಣ ಪೂಜೆ ಅಥವಾ ಹೋಮವನ್ನು ಮಾಡುವುದು ಒಳ್ಳೆಯದು. ಗಣೇಶ, ಶಿವ ಮತ್ತು ಸೂರ್ಯನ ಆರಾಧನೆಯಿಂದಲೂ ದೋಷ ಪರಿಹಾರ. ಪ್ರತಿನಿತ್ಯ ಸೂರ್ಯನಮಸ್ಕಾರ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಅಶಕ್ತರಿಗೆ, ಅಗತ್ಯವಿರುವವರಿಗೆ ದಾನ, ಧರ್ಮಗಳನ್ನು ಮಾಡಿ. ಸ್ನಾನಾನಂತರ ಸೂರ್ಯ ಮಂತ್ರವನ್ನು 108 ಬಾರಿ ಪಠಿಸಿ. ಗುರು, ಹಿರಿಯರನ್ನು ಗೌರವಿಸಿ. ಅವರನ್ನು ಆದರದಿಂದ ಕಾಣಿರಿ. ಬಡಬಗ್ಗರ ಮೇಲೆ ದಯೆಯಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ