ಆ್ಯಪ್ನಗರ

ರಾಹುಕಾಲದಲ್ಲಿ ಚುನಾವಣೆ ಘೋಷಣೆ: ಹಿಂಸಾತ್ಮಕ, ಆದರೆ ಬಿಜೆಪಿಗೆ ಅನುಕೂಲ ಎಂದ ಜ್ಯೋತಿಷಿಗಳು

ಏಳು ಹಂತಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಘೋಷಿಸಿರುವ ಸಮಯದ ಬಗ್ಗೆ ಜ್ಯೋತಿಷಿಗಳು ಹಲವಾರು ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮುಹೂರ್ತ ಅಷ್ಟು ಶುಭವಲ್ಲ. ಏಕಾದಶಿ ಸ್ಥಾನದಲ್ಲಿ ರಾಹು ಇರುವ ಕಾರಣ ಬಿಜೆಪಿಗೆ ಫಲಿತಾಂಶ ಸ್ವಲ್ಪ ಅನುಕೂಲಕರವಾಗಿ ಇರುತ್ತವೆ ಎಂದಿದ್ದಾರೆ.

Samayam Telugu 16 Mar 2019, 3:00 pm
ಸಾರ್ವತ್ರಿಕ ಚುನಾವಣೆ ದಿನಾಂಕವನ್ನು ಮಾರ್ಚ್ 10ರಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದು ಗೊತ್ತೇ ಇದೆ. ಏಳು ಹಂತಗಳಲ್ಲಿ ನಿರ್ವಹಿಸುವ ಈ ಚುನಾವಣೆ ಪ್ರಕ್ರಿಯೆ ಮೇ 23ರಂದು ಫಲಿತಾಂಶದೊಂದಿಗೆ ಮುಗಿಯಲಿದೆ. ಆದರೆ ಚುನಾವಣೆ ಆಯೋಗ ವೇಳಾಪಟ್ಟಿ ಘೋಷಿಸಿದ ಸಮಯದ ಬಗ್ಗೆ ಜ್ಯೋತಿಷಿಗಳು, ಪಂಡಿತರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Vijaya Karnataka Web lok-sabha-elections2018


ಈ ಬಗ್ಗೆ ಶ್ರೀಕಾಳಹಸ್ತಿ ಆಸ್ಥಾನ ಪಂಡಿತ, ಖ್ಯಾತ ಜ್ಯೋತಿಷಿ ಮುಲುಗು ಸಿದ್ಧಾಂತಿ ತಮ್ಮ ಭವಿಷ್ಯವನ್ನು ನುಡಿದಿದ್ದಾರೆ. ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಸಮಯದಲ್ಲಿ ರಾಹುಕಾಲ ಇತ್ತು. ಸಿಂಹ ಲಗ್ನ, ಚತುರ್ದಶಿಯಲ್ಲಿ ಗುರು, ಪಂಚಮದಲ್ಲಿ ಶನಿ ಕೇತು, ಷಷ್ಟಿಯಲ್ಲಿ ಶುಕ್ರ, ಸಪ್ತಮದಲ್ಲಿ ರವಿ, ಒಂಬತ್ತರಲ್ಲಿ ಚಂದ್ರ ಕುಜ, ಏಕಾದಶಿಯಲ್ಲಿ ರಾಹು ಇದ್ದ ಎಂದು ಮುಲುಗು ಸಿದ್ಧಾಂತಿ ಹೇಳಿದ್ದಾರೆ.

ರಾಹುಕಾಲ ಹೊಂದಿರುವ ಕಾರಣ ಗ್ರಹಗತಿಗಳು ಚೆನ್ನಾಗಿಲ್ಲದಿರುವುದು ಕೆಲವು ಕಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಘಟನೆಗಳು ನಡೆಯುವ ಸಾಧ್ಯತೆಗಳಿವೆ ಎಂದಿದ್ದಾರೆ. ಇದುವರೆಗೂ ಚುನಾವಣೆ ಇತಿಹಾಸದಲ್ಲೇ ನೋಡದ ಹಿಂಸಾತ್ಮಕ ಘಟನೆಗಳು, ಕೋಮು ದಳ್ಳುರಿ ತೀವ್ರವಾಗಿ ಹೊತ್ತಿ ಉರಿಯಲಿದೆ ಎಂದಿದ್ದಾರೆ.

ಬುಧ ನೀಚಮುಖ ರಾಜಯೋಗದಲ್ಲಿ ಗುರುವಿನ ಜತೆಗೆ ಇರುವ ಕಾರಣ ಎಂದಿನಂತೆ ಚುನಾವಣೆಯಲ್ಲಿ ಮದ್ಯ, ಹಣದ ಹೊಳೆ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇವು ಊಹಿಸಿರುವುದಕ್ಕಿಂತಲೂ ದುಪ್ಪಟ್ಟು ಇರಲಿವೆ. ಅದೇ ರೀತಿ ವೇಳಾಪಟ್ಟಿ ಘೋಷಿಸಿದ ಮುಹೂರ್ತ ಒಳ್ಳೆಯದು ಅಲ್ಲವಾದ ಕಾರಣ ಲೋಕಸಭೆ ಪೂರ್ಣಾವಧಿವರೆಗೆ ಇರುವ ಅವಕಾಶ ಇಲ್ಲ ಎಂದಿದ್ದಾರೆ.

ಏಕಾದಶಿ ಸ್ಥಾನದಲ್ಲಿ ರಾಹು ಇರುವ ಕಾರಣ ಬಿಜೆಪಿಗೆ ಫಲಿತಾಂಶ ಸ್ವಲ್ಪ ಅನುಕೂಲಕರವಾಗಿ ಇರುತ್ತವೆ. ಇದು ಬಿಜೆಪಿ ಅನುಕೂಲ ಲಗ್ನ, ಗ್ರಹಸ್ಥಿತಿ, ಮುಖ್ಯವಾಗಿ ರಾಹುಕಾಲದಿಂದ ಲಭಿಸುತ್ತದೆ. ಆದರೆ ಬರುವ ಲಾಭವನ್ನು ಅಶುಭ ಮುಹೂರ್ತ ಕಡಿಮೆ ಮಾಡುತ್ತದೆ. ಹೇಳಿಕೊಳ್ಳುವಂತಹ ಪ್ರಯೋಜನಗಳು ಆಗುವ ಅವಕಾಶ ಕಾಣಿಸುತ್ತಿಲ್ಲ ಎಂದು ಸಿದ್ಧಾಂತಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಆಂಧ್ರದಲ್ಲಿ ವೈ ಎಸ್ ಜಗಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ ಎಸ್ ವಿವೇಕಾನಂದ ರೆಡ್ಡಿ ಹತ್ಯೆಯಾಗಿರುವುದು, ಅಲ್ಲಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಲುಗು ಭವಿಷ್ಯ ಚರ್ಚೆಗೆ ಗ್ರಾಸವಾಗುತ್ತಿದೆ.

ಬರಲಿರುವ ಚುನಾವಣೆಯಲ್ಲಿ ಗಾಂಧಿ ಸಿದ್ಧಾಂತ ಅಹಿಂಸೆಯನ್ನು ರಾಜಕೀಯ ಧುರೀಣರು ತಿಳಿದು ಜನರ ಮನಸ್ಸನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ. ಈ ಚುನಾವಣಾ ಮುಹೂರ್ತವು ಕುರುಕ್ಷೇತ್ರ ಸಂಗ್ರಾಮಕ್ಕೆ ನಿಗದಿಪಡಿಸಿರುವ ಮುಹೂರ್ತದಂತಿದೆ. ಕೋಪತಾಪಗಳನ್ನು ಕಡಿಮೆ ಮಾಡಿಕೊಂಡು, ಪ್ರಜಾಪ್ರಭುತ್ವದ ಆಶಯದಂತೆ ಮುಂದೆ ಸಾಗಬೇಕು ಎಂದು ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ