ಆ್ಯಪ್ನಗರ

ಕೆರಿಯರ್‌‌ಗೆ ಪ್ಲಾನೆಟ್‌ ಎಫೆಕ್ಟ್

ಗೆಲುವು ಸುಲಭದ ತುತ್ತಲ್ಲ. ಪರಿಶ್ರಮದ ಜತೆಗೆ ಗ್ರಹಾನುಗ್ರಹವೂ ಬೇಕು. ಶನಿ ದೃಷ್ಟಿ ಕ್ರೂರವಾಗಿದ್ದರೆ ಕೆರಿಯರ್‌ ಪಾತ್‌ನಲ್ಲಿ ಅಡೆತಡೆ ಹೆಚ್ಚು.

Vijaya Karnataka 25 May 2019, 2:46 pm
ನಾಣ್ಯವೊಂದಕ್ಕೆ ಎರಡು ಮುಖ. ಅಂತೆಯೇ ವೃತ್ತಿ ಬದುಕಿಗೂ ಎರಡು ಹಂತ. ಸಿಹಿಯಾದ ಗೆಲುವು, ಕಹಿಯಾದ ಸೋಲು. ಲೋಕಸಭಾ ಚುನಾವಣಾ ಫಲಿತಾಂಶ ಬಂದಿರೋ ಈ ಕ್ಷಣದಲ್ಲಿ ಬಹು ಚರ್ಚಿತ ವಿಷಯವೆಂದರೂ ತಪ್ಪಿಲ್ಲ.
Vijaya Karnataka Web planet


ಗೆಲುವು ಸುಲಭದ ತುತ್ತಲ್ಲ. ಪರಿಶ್ರಮದ ಜತೆಗೆ ಗ್ರಹಾನುಗ್ರಹವೂ ಬೇಕು. ಶನಿ ದೃಷ್ಟಿ ಕ್ರೂರವಾಗಿದ್ದರೆ ಕೆರಿಯರ್‌ ಪಾತ್‌ನಲ್ಲಿ ಅಡೆತಡೆ ಹೆಚ್ಚು. ಸಂಕಟ ಬಂದಾಗ ವೆಂಕಟರಮಣ ಅನ್ನುವಂತೆ ಶನಿ ದೋಷ ನಿವಾರಣೆಗೆ ಆಂಜನೇಯನ ಪೂಜೆ ಮಾಡಿ, ದೇಗುಲಕ್ಕೆ ಭೇಟಿ ಕೊಡಿ, ಎಳ್ಳು ದೀಪ ಹಚ್ಚಿ, ಹನುಮಾನ್‌ ಚಾಲೀಸ ಪಾರಾಯಣ ಮಾಡಿ.

ಕುಂಡಲಿಯ ಹತ್ತನೆಯ ಮನೆಯನ್ನು ವಿಶ್ಲೇಷಿಸುವ ಮೂಲಕ ವ್ಯಕ್ತಿಯ ಜಾಬ್‌ ಅಥವಾ ಕೆರಿಯರ್‌ ಪಾತ್‌ನಲ್ಲಿನ ಸ್ಪಷ್ಟತೆ ಕಂಡ್ಕೋಬಹುದು. ಶನಿಯೇನಾದರೂ ಹತ್ತನೆ ಮನೆಯಲ್ಲಿದ್ದರೆ, ಆತನ ಪ್ರಭಾವವಿದ್ದರೆ ಯಶಸ್ಸು ಶತಸ್ಸಿದ್ಧ. ಅದೇ ಶನಿ ಎಂಟನೇ ಮನೆಯಲ್ಲಿದ್ದರೆ ಸ್ವಲ್ಪ ಮಟ್ಟಿಗೆ ತೊಂದರೆ. ಕೆರಿಯರ್‌ ಗ್ರೋತ್‌ ಆಗಲು ಹತ್ತನೆ ಮನೆಯ ಅಧಿಪತಿಯನ್ನು ಪೂಜಿಸಿ. ಲಾಯರ್‌, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿರುವವರು ಪದೋನ್ನತಿಗಾಗಿ ಗುರು ಗ್ರಹ ಆರಾಧನೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ