ಆ್ಯಪ್ನಗರ

ಜುಲೈ ತಿಂಗಳಲ್ಲಿ ವಕ್ರೀ ಬುಧನ ಪ್ರಭಾವ

ಜುಲೈ ಆರಂಭದೊಂದಿಗೆ ಬೇಸಿಗೆಯ ಬಿಸಿಲು ಜೋರಾಗುತ್ತಿದೆ. ಆಷಾಢದ ಗಾಳಿ ಅತ್ತಿಂದಿತ್ತ ಸುಳಿದಾಡುತ್ತಿದೆ. ಜುಲೈ 1ರಂದು ಸಿಂಹ ರಾಶಿಯನ್ನು ಬುಧ ಪ್ರವೇಶಿಸಿದ್ದಾನೆ. ವಕ್ರೀ ಬುಧನ ಕಾರಣ ಮನಸ್ಸು ಸದಾ ಕ್ರಿಯಾಶೀಲವಾಗಿರುತ್ತದೆ.

Vijaya Karnataka 7 Jul 2019, 7:57 am
ಲವಲವಿಕೆ ಸುದ್ದಿಲೋಕ
Vijaya Karnataka Web horoscope


ಈ ಬಾರಿ ಜುಲೈ 1 ರಂದು ಮಂಗಳ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಿದೆ. ಅಪ್ರತಿಮ ಸಾಹಸಿ ಬುಧ ಎಂದಿಗೂ ಹಿಂದೆ ಸರಿಯುವುದಿಲ್ಲ. ಸದಾ ಕ್ರಿಯಾಶೀಲನಾಗಿರುತ್ತಾನೆ. ಕುಜನ ಕಾರಣ ಜುಲೈ ತಿಂಗಳಲ್ಲಿ ಜನಿಸಿದವರು ಸದಾ ಚಟುವಟಿಕೆಯಿಂದ ಇರುತ್ತಾರೆ. ವೃತ್ತಿಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಸಂಘರ್ಷವಿರುತ್ತದೆ. ಸಿಂಹದ ಅಧಿಪತಿ ಸೂರ್ಯ. ಬುಧ ವೃಷಭ ಮತ್ತು ವೃಶ್ಚಿಕ ರಾಶ್ಯಾಧಿಪತಿ. ಹಾಗಾಗಿ ಸಿಂಹ ರಾಶಿಯವರು ತಾವು ಬಯಸಿದ್ದನ್ನು ಪಡೆಯುತ್ತಾರೆ. ಮೊದಲಿಗಿಂತಲೂ ನಿಷ್ಠುರವಾಗಿರುತ್ತಾರೆ.

ಜುಲೈ 7ರಂದು ವಕ್ರೀ ಬುಧನ ಪ್ರಭಾವ ಶುರುವಾಗುತ್ತದೆ. ಅದರ ನೇರ ಪ್ರಭಾವ ಸಂವಹನ ಕೌಶಲ್ಯ, ಪ್ರವಾಸದ ಮೇಲಾಗುತ್ತದೆ. ಈ ತಿಂಗಳಲ್ಲಿ ವಾಯುಮಂಡಲವು ಸೂಕ್ಷ್ಮವಾಗಿರುವುದರಿಂದ ಮನಸ್ಸು ಗೊಂದಲಕ್ಕೆ ಈಡಾಗುತ್ತದೆ. ನಿರ್ಣಯಗಳಲ್ಲಿ ಹಿಂಜರಿಕೆ ಉಂಟಾಗಿ ಸ್ವಲ್ಪ ಮಟ್ಟಿಗೆ ತೊಂದರೆ ಕಾಣಿಸಬಹುದು. ಆ ಕಾರಣ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಯೋಚಿಸಿ. ವಕ್ರೀ ಬುಧನ ಪ್ರಭಾವ ಮುಂದಿನ ಆರು ತಿಂಗಳ ಕಾಲವಿರುತ್ತದೆ. ಜುಲೈ 16 ಚಂದ್ರಗ್ರಹಣ ಮಕರ ರಾಶಿಯಲ್ಲಿ ಸಂಭವಿಸುವುದರಿಂದ ವೃತ್ತಿಕ್ಷೇತ್ರದಲ್ಲಿ ಶುಭಸುದ್ದಿ ನಿರೀಕ್ಷಿಸಬಹುದು. ಜುಲೈ ತಿಂಗಳಲ್ಲಿ ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ಅದೆಷ್ಟೇ ಒತ್ತಡಗಳಿದ್ದರೂ ಆಶಾಭಾವನೆಯಿಂದ ಮುನ್ನಡೆಯಿರಿ. ಜುಲೈ 22ರ ನಂತರ ಸಿಂಹರಾಶಿಯವರಿಗೆ ಉತ್ತಮ ಫಲವಿದೆ. ಜುಲೈ 27ರಂದು ವಕ್ರೀಶುಕ್ರನ ನೇರ ಪ್ರಭಾವವಿರುತ್ತದೆ. ಈ ಸಮಯದಲ್ಲಿ ಮನೆಯಿಂದ ಆಚೆ ಬಂದು ಸಂಭ್ರಮಿಸಿ. ಬುಧನ ನೇರ ಪ್ರಭಾವ ಜುಲೈ 31ರಂದು ಆಗುವುದರಿಂದ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ.

ಜುಲೈ ತಿಂಗಳಲ್ಲಿ ಜನಿಸಿದವರ ರಾಶಿ ಕಟಕ ಮತ್ತು ಸಿಂಹ. ಪಾಶ್ಚಾತ್ಯ ಜ್ಯೋತಿಷದ ಪ್ರಕಾರ ಜೂನ್‌ 22 ರಿಂದ ಜುಲೈ 23ರೊಳಗೆ ಜನಿಸಿದ ಮಕ್ಕಳು ಕಟಕ ರಾಶಿಯವರು. ದೀರ್ಘಕಾಲೀನ ಯೋಚನೆಗಳಲ್ಲಿ ನಿಷ್ಣಾತರು. ಯಾವುದೇ ಒಂದು ಕ್ಷೇತ್ರದಲ್ಲಿದ್ದರೂ ಸದಾ ಪರ್ಯಾಯ ಮಾರ್ಗವನ್ನು ಹುಡುಕುತ್ತಿರುತ್ತಾರೆ.

ಜುಲೈ 24 ರಿಂದ ಆಗಸ್ಟ್‌ 23ರೊಳಗೆ ಜನಿಸಿದ ಮಕ್ಕಳು ಸಿಂಹ ರಾಶಿಯವರು. ಸಿಂಹದಂತೇ ಗಾಂಭೀರ್ಯ ನಡೆಯುಳ್ಳವರು. ಹಣಕಾಸಿನ ನಿರ್ವಹಣೆಯಲ್ಲಿ ನಿಷ್ಣಾತರು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವವರಾದಾಗ್ಯೂ ನಡೆಯಲ್ಲಿ ಎಚ್ಚರವಿರಲಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ