ಚುರು ಚುರು ಬೇಸಿಗೆ ಬಿಸಿಗೆ ನದಿ ನೀರಿನ ಸ್ನಾನ ಸಕತ್ ಖುಷಿ ಕೊಡುತ್ತದೆ. ಹಾಗೆಂದೇ ವೈಶಾಖ ಮಾಸ ನದಿ ಸ್ನಾನಕ್ಕೆ ಮಹತ್ವವಿದೆ. ಅದರೊಂದಿಗೆ ನಾಳೆಯ ಬದುಕಿಗೆ ನೀರು ಉಳಿಸಬೇಕೆಂಬ ಕಾಳಜಿಯೂ ಇದೆ. ವೈಶಾಖ ಮಾಸದ ಮಹತ್ವವನ್ನು ಮೊದಲಿಗೆ ನಾರದರು ರಾಜಾ ಅಂಬರೀಷರಿಗೆ ಹೇಳಿದರು. ಶ್ರೀಹರಿಗೆ ಪ್ರಿಯವಾದ ಮಾಸವಿದು. ಈ ಮಾಸದಲ್ಲಿ ಗಂಗಾ, ಯಮುನಾ, ಕಾವೇರಿ, ನರ್ಮದಾ, ಕೃಷ್ಣ ನದಿ ಸ್ನಾನ ಶ್ರೇಷ್ಠವೆಂದು ಹೇಳಲಾಗುತ್ತದೆ.
ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.
ಮಧುಸೂಧನ ದೇವೇಶ ವೈಶಾಖೇ ಮೇಷಗೇ ರವೈ|
ಪ್ರಾತಃಸ್ನಾನಮ್ ಕರಿಷ್ಯಾಮಿ ನಿರ್ವಿಘ್ನಮ್ ಕುರು ಮಾಧವ||
ಅಂದರೆ, ಹೇ ಮಧುಸೂಧನ ಶ್ರೀಹರಿ, ದೇವ ದೇವೇಶನೇ ನಾನೀಗ ವೈಶಾಖ ಮಾಸದ ಪುಣ್ಯ ಸ್ನಾನವನ್ನು ಮಾಡಲು ನದಿ ತೀರಕ್ಕೆ ಬಂದಿರುವೆ. ಬ್ರಾಹ್ಮೀ ಮುಹೂರ್ತದ ಈ ದಿನಗಳಲ್ಲಿ ಸೂರ್ಯದೇವನು ಮೇಷ ರಾಶಿಯಲ್ಲಿರುತ್ತಾನೆ. ಯಾವುದೇ ವಿಘ್ನಗಳು ಕಾಡದೇ ಕೈಗೊಂಡ ಕಾರ್ಯ ಪೂರ್ಣಗೊಳ್ಳುವಂತೆ ಮಾಡು. ಸ್ನಾನಾನಂತರ ಕೊಡುವ ಅಘ್ರ್ಯವನ್ನು ಸೂರ್ಯನಾರಾಯಣನೇ ಸ್ವೀಕರಿಸು. ಜಲಕ್ಷಾಮ ಬಾರದಂತೆ ಹರಸು ಮಾಧವ.
ಈ ಮಾಸದಲ್ಲಿ ಜಲ ದಾನ, ಜಲ ಸಂಗ್ರಹಣೆ, ಜಲ ರಕ್ಷಣೆಗೂ ಅಷ್ಟೇ ಮಹತ್ವವಿದೆ. ಬಾಯಾರಿ ಮನೆ ಬಾಗಿಲಿಗೆ ಬಂದ ಅತಿಥಿಗೆ ತಂಪನೆಯ ನೀರು ಕೊಟ್ಟು ಉಪಚರಿಸುವುದು ಶ್ರೇಷ್ಠ ಕರ್ಮ. ವೈಶಾಖ ಸ್ನಾನ ಮಾಡುವ ಮುನ್ನ ಈ ಮಂತ್ರವನ್ನು ಹೇಳಿಕೊಳ್ಳಿ.
ಮಧುಸೂಧನ ದೇವೇಶ ವೈಶಾಖೇ ಮೇಷಗೇ ರವೈ|
ಪ್ರಾತಃಸ್ನಾನಮ್ ಕರಿಷ್ಯಾಮಿ ನಿರ್ವಿಘ್ನಮ್ ಕುರು ಮಾಧವ||
ಅಂದರೆ, ಹೇ ಮಧುಸೂಧನ ಶ್ರೀಹರಿ, ದೇವ ದೇವೇಶನೇ ನಾನೀಗ ವೈಶಾಖ ಮಾಸದ ಪುಣ್ಯ ಸ್ನಾನವನ್ನು ಮಾಡಲು ನದಿ ತೀರಕ್ಕೆ ಬಂದಿರುವೆ. ಬ್ರಾಹ್ಮೀ ಮುಹೂರ್ತದ ಈ ದಿನಗಳಲ್ಲಿ ಸೂರ್ಯದೇವನು ಮೇಷ ರಾಶಿಯಲ್ಲಿರುತ್ತಾನೆ. ಯಾವುದೇ ವಿಘ್ನಗಳು ಕಾಡದೇ ಕೈಗೊಂಡ ಕಾರ್ಯ ಪೂರ್ಣಗೊಳ್ಳುವಂತೆ ಮಾಡು. ಸ್ನಾನಾನಂತರ ಕೊಡುವ ಅಘ್ರ್ಯವನ್ನು ಸೂರ್ಯನಾರಾಯಣನೇ ಸ್ವೀಕರಿಸು. ಜಲಕ್ಷಾಮ ಬಾರದಂತೆ ಹರಸು ಮಾಧವ.