ಆ್ಯಪ್ನಗರ

ಜ್ಯೋತಿಷ್ಯದ ಪ್ರಕಾರ ವಿದ್ಯಾರ್ಥಿಗಳಿಗೆ ಸಕ್ಸಸ್‌ ಮಂತ್ರ

ವಿದ್ಯಾರ್ಥಿಗಳೇ ಪರೀಕ್ಷೆ ಭಯ ಬೇಡ. ಯಾರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೋ ಅವರನ್ನು ಯಾವ ಗ್ರಹಗಳೂ ಪೀಡಿಸೋಲ್ಲ ಎನ್ನುವುದು ಸರ್ವ ವಿದಿತ.

Vijaya Karnataka 2 Mar 2019, 11:58 am
ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಆತಂಕ, ಗೊಂದಲ ಸಹಜ. ಹಾಗಂತ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕಾನ್ಫಿಡೆಂಟ್‌ ಆಗಿರಬೇಕು. ಜ್ಯೋತಿಷ ಕೇವಲ
Vijaya Karnataka Web success-mantra

ಸೈಕಾಲಜಿಕಲ್‌ ಫ್ಯಾಕ್ಟರ್‌ನಂತೆ ಕೆಲಸ ಮಾಡುತ್ತದೆ. ಕಾನ್ಫಿಡೆನ್ಷಿಯಲ್‌ ಮಟ್ಟ ಸುಧಾರಿಸಲು ಕೆಲ ಸೂಚನೆಗಳನ್ನಷ್ಟೇ ನೀಡುತ್ತದೆ. ಆದರೆ ಅದೇ ಫೈನಲ್‌ ಅಲ್ಲ.

ಕಾನ್ಫಿಡೆನ್ಸ್‌ ಅನ್ನೋದೇ ಡಿಸೈಂಡಿಗ್‌ ಫ್ಯಾಕ್ಟರ್‌! ಅದರ ಆಧಾರದಲ್ಲಿ ಸಕ್ಸಸ್‌ ರೇಟ್‌ ಲೆಕ್ಕಹಾಕಬಹುದು. ಹಾಗಾದರೆ ಜ್ಯೋತಿಷದ ರೀತ್ಯ ಕಾನ್ಫಿಡೆನ್ಸ್‌ ಲೆವೆಲ್‌ ಗುರುತಿಸೋದು ಹೇಗೆ? ಬಹಳಷ್ಟು ವಿದ್ಯಾರ್ಥಿಗಳು ಇನ್ಫಿರಿಯಾರಿಟಿ ಕಾಂಪ್ಲೆಕ್ಸ್‌ ನಿಂದ ಬಳಲುತ್ತಾರೆ. ಅವರು ಹಗಲಿರುಳು ಓದ್ತಾ ಇದ್ದಾರಂತೆ ಆದರೆ ನಾನು? ಅಂತ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ತಾ ಖಿನ್ನರಾಗ್ತಾರೆ.

ಒಂದರ್ಥದಲ್ಲಿ ತಮಗೇ ಗೊತ್ತಿಲ್ಲದಂತೆ ಡಿಪ್ರೆಷನ್‌ಗೆ ಹೋಗ್ತಾರೆ. ಜ್ಯೋತಿಷ್ಯದ ರೀತ್ಯ ವ್ಯಕ್ತಿಯ ಸೈಕಲಾಜಿಕಲ್‌ ಫ್ಯಾಕ್ಟರ್‌ ರವಿ. ಚಂದ್ರ, ಗುರು ಮತ್ತು ಶುಕ್ರನನ್ನು ಆಧರಿಸಿದೆ.
ಇವನ್ನು ವಿದ್ಯಾಕಾರಕ ಗ್ರಹಗಳೆಂದು ಕರೆಯುತ್ತಾರೆ. ಒಂದೊಮ್ಮೆ ಈ ಗ್ರಹಗಳ ಮೇಲೇನಾದರೂ ಪಾಪಗ್ರಹಗಳ ದೃಷ್ಟಿ ಬೀಳುವಂತಿದ್ದರೆ ಅದರ ನಿವಾರಣೆಗೆ ಸುಲಭ
ಪರಿಹಾರವನ್ನು ಮಾಡಿಕೊಳ್ಳಬಹುದು.

ಲಗ್ನದಿಂದ ಎರಡನೇ ಮನೆಯಿಂದ (ಚಂದ್ರ) ಸಮಾನ, 5 ಮತ್ತು 7ರಿಂದ (ಶುಕ್ರ) ಮಧ್ಯಮ, 9 ಮತ್ತು 11ರಿಂದ (ಗುರು) ಉನ್ನತ ಮಟ್ಟದ ವಿದ್ಯೆಯನ್ನು ಕಂಡುಕೊಳ್ಳಬಹುದು. ಒಂದೊಮ್ಮೆ ಎರಡನೆಯ ಮನೆಯಲ್ಲಿ ಚಂದ್ರನೊಂದಿಗೆ ರಾಹು ಅಥವಾ ಕುಜನಿದ್ದರೆ, ಶುಕ್ರನೊಂದಿಗೆ ಕುಜ ಅಥವಾ ಶನಿಯಿದ್ದರೆ, ಗುರುವಿನೊಟ್ಟಿಗೆ ರಾಹು, ಕೇತು ಅಥವಾ ಶನಿಯಿದ್ದರೆ ಸ್ವಲ್ಪ ದೋಷವೆನಿಸುತ್ತದೆ. ಆ ದೋಷದ ಕಾರಣ ಪರೀಕ್ಷೆ ಅಥವಾ ನಿರ್ಣಾಯಕ ಹಂತಗಳಲ್ಲಿ ಆತ್ಮವಿಶ್ವಾಸ ಕುಸಿದಂತೆ ಭಾಸವಾಗುತ್ತದೆ. ಮನಸು ದೃಢಮಾಡಿಕೊಂಡು ಮುನ್ನಡೆಯಿರಿ.

ಗೆಲುವು ನಿಮ್ಮದೇ! ಆದರೂ ಕಾನ್ಫಿ ಡೆನ್ಷಿಯಲ್‌ ಮಟ್ಟ ಹೆಚ್ಚಿಸಲು ಆಯಾ ಗ್ರಹಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳಿಕೊಳ್ತಾ ಹೋಗಿ. ಮಂತ್ರಬಲದಿಂದ ಒದಗಿ ಬಂದ ದೋಷ ಪರಿಹಾರ ಆಯ್ತು ಅನ್ನೋ ಭಾವ ಮೂಡಿದ್ರೆ ಸಾಕು ಕಾನ್ಫಿ ಡೆನ್ಷಿಯಲ್‌ ಲೆವೆಲ್‌ ಬೂಸ್ಟ್‌ ಆದಂತೆ. ಮಕ್ಕಳಲ್ಲಿ ಕಾನ್ಫಿಡೆನ್ಷಿಯಲ್‌ ಲೆವೆಲ್‌ ಹೆಚ್ಚಿಸಲು ಪಾಲಕರ ಪಾತ್ರವೂ ಮುಖ್ಯ. ಅವರ ಪರವಾಗಿ ನೀವೇ ಕೂತು ಮಂತ್ರ ಜಪ ಮಾಡಿದರೆ ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ