ಆ್ಯಪ್ನಗರ

ಭಾರತ ವಿಶ್ವಕಪ್‌ ಗೆಲ್ಲುವ ಬಗ್ಗೆ ಖ್ಯಾತ ಜ್ಯೋತಿಷಿ ನರೇಂದ್ರ ಬುಂಡೆ ಭವಿಷ್ಯ ಏನು ಗೊತ್ತಾ?

ಕ್ರಿಕೆಟ್‌ ಪಂದ್ಯಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಹೆಸರುವಾಸಿಯಾಗಿರುವ ನರೇಂದ್ರ ಬುಂಡೆ, ಭಾರತ 9 ಲೀಗ್‌ ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸುವುದಾಗಿ ಭವಿಷ್ಯ ನುಡಿದಿದ್ದರು. ಮುಂಬೈ 2019ರ ಐಪಿಎಲ್ ಚಾಂಪಿಯನ್ ಆಗುವುದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಸೇರಿದಂತೆ ಇತ್ತೀಚೆಗೆ ಅವರು ನುಡಿದಿದ್ದ 10 ಭವಿಷ್ಯ ನಿಜವಾಗಿವೆ.

TIMESOFINDIA.COM 9 Jul 2019, 11:06 am
ನಾಗ್ಪುರ: ಇಂದಿನಿಂದ ವಿಶ್ವಕಪ್‌ ಸೆಮಿ ಫೈನಲ್‌ ಪಂದ್ಯಗಳು ಆರಂಭವಾಗಿದ್ದು, ಇಂದು ಭಾರತ - ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಆದರೆ, ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಇಲ್ಲಿದೆ ಗುಡ್‌ ನ್ಯೂಸ್‌.
Vijaya Karnataka Web virat kohli prediction


ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2019ರ ವಿಶ್ವಕಪ್‌ ಅನ್ನು ಗೆಲ್ಲಲಿದೆ ಎಂದು ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಜ್ಯೋತಿಷಿ ನರೇಂದ್ರ ಬುಂಡೆ ಭವಿಷ್ಯ ನುಡಿದಿದ್ದಾರೆ. ಕೊಹ್ಲಿಯ ಜಾತಕದ ಪ್ರಕಾರ ಸಂಖ್ಯಾಶಾಸ್ತ್ರ, ನಕ್ಷತ್ರ ಮತ್ತು ಗ್ರಹಗಳ ಸ್ಥಾನಗಳನ್ನು ಆಧರಿಸಿ ಜುಲೈ 14ರಂದು ಟೀಂ ಇಂಡಿಯಾ ಗೆಲ್ಲಲಿದೆ ಎಂದು ಬುಂಡೆ ತಿಳಿಸಿದ್ದಾರೆ. ಇಂಗ್ಲೆಂಡ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯುವ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಗೆಲ್ಲುವ ಪ್ರಬಲ ಅವಕಾಶಗಳು ಇವೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ವಿರುದ್ಧ ಭಾರತ ಪರದಾಡಬಹುದು. ಕೊಹ್ಲಿ ಹೆಚ್ಚು ರನ್‌ಗಳನ್ನು ಗಳಿಸುವುದರೊಂದಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಅಲ್ಲದೆ, ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್‌.ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ವಿಶ್ವಕಪ್‌ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಲಿದ್ದಾರೆ. ಬೌಲರ್‌ಗಳ ಪೈಕಿ ಜಸ್ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಹಾಗೂ ಯಜುವೇಂದ್ರ ಚಾಹಲ್ ಹೆಚ್ಚು ವಿಕೆಟ್‌ಗಳನ್ನು ಪಡೆಯಲಿದ್ದಾರೆ ಎಂದೂ ಬುಂಡೆ ವಿಶ್ವಕಪ್‌ ಆರಂಭಕ್ಕೂ ಮುನ್ನ ಭವಿಷ್ಯ ನುಡಿದಿದ್ದರು.

ಅಲ್ಲದೆ, 1983ರಲ್ಲಿ ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡ ವಿಶ್ವಕಪ್‌ ಗೆಲ್ಲುವಾಗ ಇದ್ದ ಗ್ರಹಗಳ ಸ್ಥಾನಗಳು ಈ ಬಾರಿಯೂ ಬಹುತೇಕ ಹೋಲುತ್ತವೆ. ಭಾರತಕ್ಕೆ ನಂಬರ್ 3 ಲಕ್ಕಿಯಾಗಿದ್ದು, ಇದು 12ನೇ ವಿಶ್ವಕಪ್‌ ಆಗಿದೆ. ಹೀಗಾಗಿ 1 + 2 = 3. ಅಲ್ಲದೆ, 2019 ಅನ್ನು ಲೆಕ್ಕ ಹಾಕಿದರೆ 12 ಆಗುತ್ತದೆ. ಇದು ಕೂಡ 3 ಆಗುತ್ತದೆ. ಜತೆಗೆ, 1983 ಅನ್ನು ಲೆಕ್ಕ ಹಾಕಿದರೂ 21 ಆಗುತ್ತಿತ್ತು. ಅದು ಕೂಡ 3 ಎಂದು ಖ್ಯಾತ ಜ್ಯೋತಿಷಿ ಹೇಳಿಕೊಂಡಿದ್ದಾರೆ.

ಇನ್ನು, ಅನುಷ್ಕಾ ಶರ್ಮಾ ಜತೆಗೆ ವಿರಾಟ್‌ ಕೊಹ್ಲಿ ವಿವಾಹವಾಗುವುದು, ವಿದೇಶಗಳಲ್ಲಿ ಅವರು ಯಶಸ್ವಿಯಾಗುವುದು, ನಂ. 1 ಬ್ರಾಂಡ್ ಅಂಬಾಸಿಡರ್ ಆಗುವುದು, ಭಾರತೀಯ ಕ್ರಿಕೆಟ್ ತಂಡದ ಸುವರ್ಣ ಕಾಲ, ಧೋನಿ 2019 ವಿಶ್ವಕಪ್ ಆಡುವುದು, ಮುಂಬೈ 2019ರ ಐಪಿಎಲ್ ಚಾಂಪಿಯನ್ ಆಗುವುದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಸೇರಿದಂತೆ ಇತ್ತೀಚಿನ 10 ಭವಿಷ್ಯ ನಿಜವಾಗಿವೆ ಎಂದೂ ಬುಂಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ