ಆ್ಯಪ್ನಗರ

ಗ್ರಹಚಾರ ಫಲ ಎಂದರೇನು?

ಗ್ರಹ ಗೋಚಾರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು ಕೆಲವು ಗ್ರಹಗಳು ಕಡಿಮೆ ಕಾಲವನ್ನು, ಇನ್ನು ಕೆಲವು ಗ್ರಹಗಳು ಜಾಸ್ತಿ ಕಾಲವನ್ನು ತೆಗೆದುಕೊಳ್ಳುತ್ತದೆ.

Vijaya Karnataka 28 Oct 2017, 8:00 am

ಮೂಲ್ಕಿ ಹರಿಶ್ಚಂದ್ರ ಪಿ. ಸಾಲ್ಯಾನ್‌

ಗ್ರಹ ಗೋಚಾರವೆಂದರೆ ನವಗ್ರಹಗಳು ಭೂ ಚಕ್ರದ ಸುತ್ತಲೂ ಮೇಷ ದ್ವಾದಶ ರಾಶಿಗಳನ್ನು ಸುತ್ತುವುದು. ಒಂದು ಸುತ್ತು ಸುತ್ತಲು ಕೆಲವು ಗ್ರಹಗಳು ಕಡಿಮೆ ಕಾಲವನ್ನು, ಇನ್ನು ಕೆಲವು ಗ್ರಹಗಳು ಜಾಸ್ತಿ ಕಾಲವನ್ನು ತೆಗೆದುಕೊಳ್ಳುತ್ತದೆ.

Vijaya Karnataka Web what is grahacharaphala
ಗ್ರಹಚಾರ ಫಲ ಎಂದರೇನು?


ಭೂ ಚಕ್ರವನ್ನು ಸುತ್ತಲು ಚಂದ್ರ ಒಂದು ತಿಂಗಳು, ಸೂರ್ಯ ಬುಧ ಶುಕ್ರ ಕುಜರು ಸುಮಾರು ಒಂದು ವರ್ಷವನ್ನು ಗುರು ಹನ್ನೆರಡು ವರ್ಷಗಳನ್ನು, ರಾಹು ಕೇತುಗಳು ಹದಿನೆಂಟು ವರ್ಷಗಳನ್ನು, ಶನಿಯು ಮೂವತ್ತು ವರ್ಷಗಳನ್ನು ತೆಗೆದು ಕೊಳ್ಳುತ್ತದೆ. ಹೀಗೆ ನವಗ್ರಹಗಳು ಕುಂಡಲಿಯಲ್ಲಿ ಸುತ್ತುವಾಗ ಚಂದ್ರನಿರುವ ರಾಶಿಯಿಂದ ಗ್ರಹ ಇರುವ ರಾಶಿಯವರೆಗೆ ಎಣಿಸಿದರೆ ಬರುವ ಸಂಖ್ಯೆಗನುಗುಣವಾಗಿ ಗ್ರಹದ ಫಲ ತಾತ್ಕಾಲಿಕವಾಗಿ ಸಿಗುತ್ತದೆ. ಗ್ರಹಚಾರದ ಫಲ ತಿಳಿಯಬೇಕಾದರೆ ಮುಖ್ಯವಾಗಿ ವಿಷಯವೇನೆಂದರೆ ಬಹು ಮಂದವಾಗಿ ಸಂಚರಿಸುವ ಗ್ರಹದ ಫಲ ಅನುಭವಕ್ಕೆ ಬರುತ್ತದೆ.

ಬಹಳ ಬೇಗ ಸಂಚರಿಸುವ ಗ್ರಹದ ಫಲ ಅಷ್ಟು ಅನುಭವಕ್ಕೆ ಬರುವುದಿಲ್ಲ. ಗ್ರಹಗಳೆಲ್ಲಾ ಅತ್ಯಂತ ಮಂದವಾಗಿ ಸಂಚರಿಸುವ ಶನಿಗ್ರಹದ ಗೋಚಾರ ಹೆಚ್ಚು ಅನುಭವಕ್ಕೆ ಬರುತ್ತದೆ. ಶನಿ ಮನುಷ್ಯನ ಜನ್ಮರಾಶಿಯಿಂದ 12ನೆ ರಾಶಿಗೆ ಬಂದಾಗ ಏಳರಾಷ್ಟ್ರ ಶನಿ ಕಾಟ ಅಥವಾ ಸಾಡೆಸಾತ್‌ ಪ್ರಾರಂಭವಾಗುತ್ತದೆ ಎಂದು ಎಲ್ಲರಿಗೂ ತಿಳಿಯುತ್ತದೆ. ಶನಿಯು ಮೇಲ್ಕಂಡ 12ನೇ ರಾಶಿ, ಜನ್ಮರಾಶಿ, ಮತ್ತು ಜನ್ಮರಾಶಿಗೆ ಎರಡನೇಯ ರಾಶಿಗಳಲ್ಲಿ ಇರುವ ಒಟ್ಟು ಕಾಲ ಅಥವಾ ಏಳೂವರೆ ವರ್ಷಕಾಲ ಮನುಷ್ಯನಿಗೆ ಬಹು ಕಷ್ಟದಾಯಕವಾಗಿರುತ್ತದೆ.

ಈ ಏಳರಾಷ್ಟ್ರ ಶನಿ ಕಾಟ ಅಥವಾ ಏಳುವರೆ ವರ್ಷ ಕಾಲದಲ್ಲಿನ ಮೊದಲಿನ ಎರಡುವರೆ ವರ್ಷಗಳು ಅನೇಕರಿಗೆ ಹೆಚ್ಚು ಕಷ್ಟದಾಯಕವಾಗುವುದು ಅನುಭವದ ಮಾತು. ಆದ್ದರಿಂದ ಈ ಶನಿ ಕಾಟದ ಕಾಲದಲ್ಲಿ ಜಾತಕನಿಗೆ ಗುರುಬಲ ಇದ್ದಾಗ ಕಾರ್ಯಸಿದ್ಧಿ ಕುಟುಂಭದಲ್ಲಿ ವಿವಾಹಾದಿ ಶುಭ ಕೆಲಸಗಳು ನಡೆಯುತ್ತದೆ. ಪಾಪ ಗ್ರಹಗಳಾದ ಶನಿ, ರವಿ, ರಾಹು, ಕೇತು ಜನ್ಮ ರಾಶಿಯಿಂದ ತಮ್ಮ ಗೋಚಾರದಲ್ಲಿ 3-6-11ನೆಯ ಸ್ಥಾನಕ್ಕೆ ಬಂದಾಗ ಶುಭಫಲ ಕೊಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ