ಆ್ಯಪ್ನಗರ

ನಿಮ್ಮ ಬೆರಳುಗಳ ನಡುವಿನ ಅಂತರವೇ ಹೇಳುತ್ತೆ ನಿಮ್ಮ ಭವಿಷ್ಯ..!

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಬೆರಳುಗಳ ನಡುವಿನ ಅಂತರದ ಮೂಲಕ ಆತನ ಭವಿಷ್ಯವನ್ನು ತಿಳಿಯಬಹುದು. ವ್ಯಕ್ತಿಯ ಕೈ ಬೆರಳುಗಳು ಮೂಲಕ ಆತನ ಆರ್ಥಿಕ ಸ್ಥಿತಿಯ ಬಗ್ಗೆ ಅನೇಕ ಮಾಹಿತಿ ತಿಳಿಯಬಹುದು.

Vijaya Karnataka Web 13 May 2022, 3:31 pm
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೈಗಳ ರೇಖೆಗಳು ಮತ್ತು ಬೆರಳುಗಳ ವಿನ್ಯಾಸದಿಂದ ಭವಿಷ್ಯದ ವಿಷಯಗಳ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. ಬೆರಳುಗಳ ಆಕಾರದಿಂದ, ವ್ಯಕ್ತಿಯ ಸ್ವಭಾವವನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಇದರೊಂದಿಗೆ, ವ್ಯಕ್ತಿಯ ಕೈ ಬೆರಳುಗಳು ಅವನ ಆರ್ಥಿಕ ಸ್ಥಿತಿಯ ಬಗ್ಗೆ ಅನೇಕ ಮಾಹಿತಿಯನ್ನು ನೀಡುತ್ತವೆ. ಹಾಗಾದರೆ ವ್ಯಕ್ತಿಯ ಬೆರಳಿನ ಆಧಾರದಲ್ಲಿ ಆತನ ಜೀವನಕ್ಕೆ ಸಂಬಂಧಿಸಿದ ಯಾವ ವಿಷಯಗಳನ್ನು ಪತ್ತೆ ಹಚ್ಚಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.
Vijaya Karnataka Web according to palmistry gap between your fingers tells about your future
ನಿಮ್ಮ ಬೆರಳುಗಳ ನಡುವಿನ ಅಂತರವೇ ಹೇಳುತ್ತೆ ನಿಮ್ಮ ಭವಿಷ್ಯ..!


​ಈ ರೀತಿ ಬೆರಳುಗಳಿದ್ದರೆ ಆರ್ಥಿಕ ಸಮಸ್ಯೆಗಳೇ ಹೆಚ್ಚು

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಮಧ್ಯದ ಬೆರಳು ಮತ್ತು ತೋರು ಬೆರಳಿನ ನಡುವೆ ಸಾಮಾನ್ಯಕ್ಕಿಂತ ಹೆಚ್ಚು ಅಂತರವನ್ನು ಹೊಂದಿದ್ದರೆ, ಅಂತಹ ಜನರು ಪ್ರೌಢಾವಸ್ಥೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಜಾತಕದಲ್ಲಿನ ಋಣಬಾಧೆ ಸಮಸ್ಯೆಗೆ ಲಾಲ್ ಕಿತಾಬ್‌ನ ಪರಿಹಾರಗಳು..!

​ಇಂತಹ ಬೆರಳಿರುವವರು ಅದೃಷ್ಟವಂತರು

ಯಾವ ವ್ಯಕ್ತಿಗಳು ತಮ್ಮ ಬೆರಳುಗಳ ನಡುವೆ ಹೆಚ್ಚು ಅಂತರವನ್ನು ಹೊಂದಿರುವುದಿಲ್ಲವೋ ಅವರು ಅದೃಷ್ಟವಂತರು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ವ್ಯಕ್ತಿಗಳು ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ. ಅಂತಹ ಬೆರಳನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ ಮಾಂತ್ರಿಕ ಸಂತೋಷಗಳನ್ನು ಆನಂದಿಸುತ್ತಾರೆ. ಅಲ್ಲದೆ, ಅವರಿಗೆ ಹಣ ಮತ್ತು ಆಹಾರದ ಕೊರತೆಯಿರುವುದಿಲ್ಲ.

​ಮಧ್ಯದ ಮತ್ತು ಉಂಗುರ ಬೆರಳಿನ ನಡುವೆ ಅಂತರವಿದ್ದರೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಮಧ್ಯದ ಬೆರಳು ಉಂಗುರದ ಬೆರಳಿನ ಬಳಿ ಇದ್ದರೆ, ಅಂತಹ ಜನರು ಕಲೆಗೆ ಸಂಬಂಧಿಸಿದ ಕೆಲಸಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇದರೊಂದಿಗೆ ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಈ ಜನರು ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಅಂತಹವರು ತುಂಬಾ ಬುದ್ಧಿವಂತರು ಮತ್ತು ತಮ್ಮ ಕೆಲಸವನ್ನು ಸುಲಭವಾಗಿ ಮಾಡುತ್ತಾರೆ.

ಚಂದ್ರಗ್ರಹಣದ ಸಮಯದಲ್ಲಿ ಈ ಪರಿಹಾರ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ಧಿ..!

​ಉಂಗುರ & ಕಿರಿಯ ಬೆರಳಿನ ನಡುವೆ ಅಂತರವಿದ್ದರೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಕಿರಿಯ ಬೆರಳು ಉಂಗುರ ಬೆರಳಿಗಿಣ ಬಹಳ ದೂರದಲ್ಲಿದ್ದರೆ ಅಂತಹ ವ್ಯಕ್ತಿಯು ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

​ಬೆರಳುಗಳು ಪರಸ್ಪರ ಬಾಗಿದರೆ

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಒಬ್ಬ ವ್ಯಕ್ತಿಯ ಬೆರಳುಗಳು ಒಂದಕ್ಕೊಂದು ಬಾಗಿದರೆ, ಆ ವ್ಯಕ್ತಿಗಳು ಯಾವುದೇ ಪರಿಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ ಎಂದು ಹೇಳಲಾಗಿದೆ. ತೋರುಬೆರಳು ಹೆಬ್ಬೆರಳಿನ ಕಡೆಗೆ ಬಾಗಿದರೆ ಆ ವ್ಯಕ್ತಿಗೆ ಅಹಂಕಾರವಿಲ್ಲ ಎಂದರ್ಥ. ಅಂತಹವರಿಗೆ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ ಎನ್ನಲಾಗುತ್ತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ