ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲಸಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ವಾಸ್ತು ಅಂದಮಾತ್ರಕ್ಕೆ ದಿಕ್ಕುಗಳು ಎಂದು ಪರಿಗಣಿಸಲಾಗುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಾವು ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಮಾಡುವ ಕೆಲವು ತಪ್ಪುಗಳಿಂದಾಗಿ, ಹಣದ ನಷ್ಟ ಉಂಟಾಗಬಹುದು ಮತ್ತು ಮನೆಯ ವಾತಾವರಣವು ಕೆಡಲು ಪ್ರಾರಂಭಿಸುತ್ತದೆ. ಈ ತಪ್ಪುಗಳಿಂದಾಗಿ, ನಕಾರಾತ್ಮಕತೆಯು ಮನೆಯಲ್ಲಿ ಹಿಡಿತ ಸಾಧಿಸುತ್ತದೆ, ಇದರಿಂದಾಗಿ ಪ್ರಗತಿಗೆ ಅಡ್ಡಿಯಾಗುತ್ತದೆ. ಈ ಲೇಖನದಲ್ಲಿ ಮನೆಯಲ್ಲಿ ಯಾವ ತಪ್ಪುಗಳು ಹಣದ ನಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದನ್ನು ವಿವರಿಸಲಾಗಿದೆ.
ಮನೆಯಲ್ಲಿರುವ ಗಡಿಯಾರ ಕೆಟ್ಟಿದ್ದರೆ,
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಟ್ಟಿರುವ ಗಡಿಯಾರದಿಂದಾಗಿ ನಕಾರಾತ್ಮಕತೆ ಸಂಚರಿಸಬಹುದು. ಕೆಟ್ಟು ಹೋದ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ನಿಮ್ಮ ಮನೆಯಲ್ಲಿಯೂ ಹಾಳಾದ ಗಡಿಯಾರವಿದ್ದರೆ, ಅದನ್ನು ತಕ್ಷಣ ಸರಿಪಡಿಸಿ ಅಥವಾ ಮನೆಯಿಂದ ಹೊರಗೆ ಇಡಿ.
ವಾಸ್ತು ಸಲಹೆ: ಮಾನಸಿಕ ಒತ್ತಡ ನಿಮ್ಮನ್ನು ಆವರಿಸಿದ್ದರೆ ಈ ಫೆಂಗ್ಶೂಯಿ ಟಿಪ್ಸ್ ಪಾಲಿಸಿ..
ಮನೆಯಲ್ಲಿ ಒಣ ಸಸ್ಯಗಳಿದ್ದರೆ
ವಾಸ್ತು ಶಾಸ್ತ್ರದ ಪ್ರಕಾರ, ಒಣ ಸಸ್ಯಗಳನ್ನು ಮನೆಯಲ್ಲಿ ಇಡಬಾರದು. ಒಣ ಸಸ್ಯಗಳಿಂದಾಗಿ, ಮನೆಯ ವಾತಾವರಣ ಕೆಡುವುದು. ಸಸ್ಯಗಳನ್ನು ಮನೆಯೊಳಗೆ ಇರಿಸಿ ಆದರೆ ಒಣಗಲು ಬಿಡಬೇಡಿ. ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಿ.
ಮನೆಯಲ್ಲಿ ನೀರು ವ್ಯರ್ಥವಾಗುತ್ತಿದ್ದರೆ,
ನೀರಿನ ಕೊಳಾಯಿಯಿಂದ ನಿರಂತರವಾಗಿ ನೀರು ಹನಿಯುತ್ತಿರುವ ಅನೇಕ ಮನೆಗಳಲ್ಲಿ ಅನಗತ್ಯ ನೀರು ವ್ಯರ್ಥವಾಗುವುದು. ನಿಮ್ಮ ಮನೆಯಲ್ಲಿಯೂ ಇದು ಸಂಭವಿಸಿದಲ್ಲಿ, ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಟ್ಯಾಪ್ ಅನ್ನು ಸರಿಪಡಿಸಿ. ನೀರು ಹನಿಯು ವ್ಯರ್ಥವಾಗುತ್ತಿದ್ದರೆ ಅಂತಹ ಮನೆಯಲ್ಲಿ ಹಣವೂ ಕೂಡಾ ವ್ಯರ್ಥವಾಗಿ ಪೋಲಾಗುತ್ತದೆ.
ಮನೆಯ ಹೂದೋಟದಲ್ಲಿ ಗಿಡ ನೆಡುವ ಮುನ್ನ ಈ ಸಂಗತಿಗಳ ಬಗ್ಗೆ ಗಮನವಿರಲಿ..
ಮನೆಯಲ್ಲಿ ಸ್ವಚ್ಛತೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ, ಹಣದ ನಷ್ಟವುಂಟಾಗಬಹುದು. ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ಸ್ವಚ್ಛಮನೆಯಲ್ಲಿ ವಾಸಿಸುತ್ತಾಳೆ, ಹಾಗಾಗಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಪೂಜೆ ಮಾಡದ ಮನೆ
ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕತೆಯು ಪೂಜೆ ಮಾಡದ ಮನೆಯಲ್ಲಿ ವಾಸಿಸುತ್ತದೆ. ಮನೆಯಲ್ಲಿ ಪೂಜೆ ಪ್ರತಿನಿತ್ಯ ಮಾಡಬೇಕು. ಇಲ್ಲವಾದರೆ ಮನೆಯಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ.
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುವುದು..!
ಮನೆಯಲ್ಲಿರುವ ಗಡಿಯಾರ ಕೆಟ್ಟಿದ್ದರೆ,
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಟ್ಟಿರುವ ಗಡಿಯಾರದಿಂದಾಗಿ ನಕಾರಾತ್ಮಕತೆ ಸಂಚರಿಸಬಹುದು. ಕೆಟ್ಟು ಹೋದ ಗಡಿಯಾರವನ್ನು ಮನೆಯಲ್ಲಿ ಇಡಬಾರದು. ನಿಮ್ಮ ಮನೆಯಲ್ಲಿಯೂ ಹಾಳಾದ ಗಡಿಯಾರವಿದ್ದರೆ, ಅದನ್ನು ತಕ್ಷಣ ಸರಿಪಡಿಸಿ ಅಥವಾ ಮನೆಯಿಂದ ಹೊರಗೆ ಇಡಿ.
ವಾಸ್ತು ಸಲಹೆ: ಮಾನಸಿಕ ಒತ್ತಡ ನಿಮ್ಮನ್ನು ಆವರಿಸಿದ್ದರೆ ಈ ಫೆಂಗ್ಶೂಯಿ ಟಿಪ್ಸ್ ಪಾಲಿಸಿ..
ಮನೆಯಲ್ಲಿ ಒಣ ಸಸ್ಯಗಳಿದ್ದರೆ
ವಾಸ್ತು ಶಾಸ್ತ್ರದ ಪ್ರಕಾರ, ಒಣ ಸಸ್ಯಗಳನ್ನು ಮನೆಯಲ್ಲಿ ಇಡಬಾರದು. ಒಣ ಸಸ್ಯಗಳಿಂದಾಗಿ, ಮನೆಯ ವಾತಾವರಣ ಕೆಡುವುದು. ಸಸ್ಯಗಳನ್ನು ಮನೆಯೊಳಗೆ ಇರಿಸಿ ಆದರೆ ಒಣಗಲು ಬಿಡಬೇಡಿ. ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಿ.
ಮನೆಯಲ್ಲಿ ನೀರು ವ್ಯರ್ಥವಾಗುತ್ತಿದ್ದರೆ,
ನೀರಿನ ಕೊಳಾಯಿಯಿಂದ ನಿರಂತರವಾಗಿ ನೀರು ಹನಿಯುತ್ತಿರುವ ಅನೇಕ ಮನೆಗಳಲ್ಲಿ ಅನಗತ್ಯ ನೀರು ವ್ಯರ್ಥವಾಗುವುದು. ನಿಮ್ಮ ಮನೆಯಲ್ಲಿಯೂ ಇದು ಸಂಭವಿಸಿದಲ್ಲಿ, ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಟ್ಯಾಪ್ ಅನ್ನು ಸರಿಪಡಿಸಿ. ನೀರು ಹನಿಯು ವ್ಯರ್ಥವಾಗುತ್ತಿದ್ದರೆ ಅಂತಹ ಮನೆಯಲ್ಲಿ ಹಣವೂ ಕೂಡಾ ವ್ಯರ್ಥವಾಗಿ ಪೋಲಾಗುತ್ತದೆ.
ಮನೆಯ ಹೂದೋಟದಲ್ಲಿ ಗಿಡ ನೆಡುವ ಮುನ್ನ ಈ ಸಂಗತಿಗಳ ಬಗ್ಗೆ ಗಮನವಿರಲಿ..
ಮನೆಯಲ್ಲಿ ಸ್ವಚ್ಛತೆ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ, ಹಣದ ನಷ್ಟವುಂಟಾಗಬಹುದು. ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಯು ಸ್ವಚ್ಛಮನೆಯಲ್ಲಿ ವಾಸಿಸುತ್ತಾಳೆ, ಹಾಗಾಗಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಪೂಜೆ ಮಾಡದ ಮನೆ
ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕತೆಯು ಪೂಜೆ ಮಾಡದ ಮನೆಯಲ್ಲಿ ವಾಸಿಸುತ್ತದೆ. ಮನೆಯಲ್ಲಿ ಪೂಜೆ ಪ್ರತಿನಿತ್ಯ ಮಾಡಬೇಕು. ಇಲ್ಲವಾದರೆ ಮನೆಯಲ್ಲಿ ಸಮಸ್ಯೆಗಳು ತಪ್ಪಿದ್ದಲ್ಲ.
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುವುದು..!