ಆ್ಯಪ್ನಗರ

ವಾಸ್ತು ದೋಷ ಪರಿಹಾರ: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಯ ಮುಂದೆ ಇಡಬೇಡಿ

ಕೆಲವೊಮ್ಮೆ ಮನೆಯ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಮನೆಯ ವಾಸ್ತು ದೋಷ ಕಾರಣವಾಗಿರಬಹುದು. ಆ ವಾಸ್ತು ದೋಷಗಳೇನು, ಅದಕ್ಕೆ ಪರಿಹಾರವೇನು ಎನ್ನುವುದರ ಮಾಹಿತಿ ಇಲ್ಲಿದೆ.

Vijaya Karnataka Web 12 May 2021, 8:26 pm
ಸಂತೋಷವಾಗಿದ್ದ ಜೀವನದಲ್ಲಿ ಇದ್ದಕ್ಕಿದ್ದಂತೆ ವಿಘ್ನಗಳು ಎದುರಾಗಬಹುದು. ಅಥವಾ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಇವೆಲ್ಲದಕ್ಕೂ ಕಾರಣ ವಾಸ್ತುವಾಗಿರಬಹುದು. ಆದ್ದರಿಂದ ಈ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ವಾಸ್ತುವಿನ ಪ್ರಕಾರ ಕೆಲವೊಂದು ಕೆಲಸಗಳನ್ನು ಮನೆಯಲ್ಲಿ ಮಾಡಬಾರದು ಅವು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.
Vijaya Karnataka Web follow these vastu remedies to get rid of all problems in your home
ವಾಸ್ತು ದೋಷ ಪರಿಹಾರ: ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಮನೆಯ ಮುಂದೆ ಇಡಬೇಡಿ



ಹಾಲಿನ ಪಾತ್ರೆಯನ್ನು ಈ ರೀತಿ ಇಡಬೇಡಿ

ಸಾಮಾನ್ಯವಾಗಿ ಎಲ್ಲರೂ ಅಡುಗೆ ಮನೆಯಲ್ಲಿ ಬಳಸುವ ಪದಾರ್ಥವೆಂದರೆ ಹಾಲು. ವಾಸ್ತುಶಾಸ್ತ್ರದ ಪ್ರಕಾರ ಹಾಲಿನ ಪಾತ್ರೆಯನ್ನು ಎಂದಿಗೂ ತೆರೆದಿಡಬಾರದು. ಹಾಲನನ್ನು ತೆರೆದಿಡುವುದರಿಂದ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ. ಜೊತೆಗೆ ಮಾನಸಿಕ ಖಾಯಿಲೆಗಳೂ ಸುತ್ತುವರಿಯುತ್ತವೆ.

ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನಿಟ್ಟುಕೊಂಡರೆ ಹಣದ ಸಮಸ್ಯೆ ತಪ್ಪಿದ್ದಲ್ಲ..!

​ಇದನ್ನು ಇಡದಿರಿ

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಖಾಲಿ ಮಡಿಕೆ, ಹಳೆಯ ಮಡಿಕೆ, ಕೆಟ್ಟ ಕೂಲರ್‌, ಫ್ಯಾನ್‌ ಅಥವಾ ರದ್ದಿ ಕಾಗದಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಇಡಬಾರದು. ಈ ವಸ್ತುಗಳನ್ನು ವಿಶೇಷವಾಗಿ ನೀವು ಮಲಗುವ ಕೋಣೆಯ ಮೇಲ್ಛಾವಣಿಯಲ್ಲಿಡಬಾರದು.

ರಾತ್ರಿ ಮಲಗುವಾಗ ಕೆಂಪು ಕರವಸ್ತ್ರವನ್ನು ನಿಮ್ಮ ತಲೆಯ ಬಳಿ ಇರಿಸಿ. ಇದರಿಂದ ದುಃಸ್ವಪ್ನಗಳು ಉಂಟಾಗುವುದಿಲ್ಲ. ಅದಲ್ಲದೇ ಮನೆಯನ್ನು ಸಂಪೂರ್ಣವಾಗಿ ಕತ್ತಲಾಗಿಸಬಾರದು. ಎಲ್ಲಾದರೂ ಒಂದು ಕಡೆ ಲೈಟ್‌ ಉರಿಯುವಂತಿರಬೇಕು. ಇದರಿಂದಾಗಿಯೂ ದುಃಸ್ವಪ್ನಗಳು ಉಂಟಾಗುವುದಿಲ್ಲ ಮತ್ತು ಮಾನಸಿಕ ಒತ್ತಡದಿಂದಲೂ ಪರಿಹಾರ ಸಿಗುತ್ತದೆ.

​ಈ ವಸ್ತುಗಳನ್ನು ಮುಖ್ಯ ದ್ವಾರದ ಬಳಿ ಇಡಬೇಡಿ

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಮುಳ್ಳಿನ ಗಿಡ ಅಥವಾ ಹೂವಿರುವ ಮುಳ್ಳಿನ ಗಿಡವನ್ನು ನೆಡಬಾರದು. ಅಲ್ಲದೇ ಕೊಳಕು ನೀರನ್ನು ಮನೆಯ ಮುಂದೆ ಸಂಗ್ರಹಿಸಿಡಬಾರದು. ಇದು ಮನೆಯ ಸದಸ್ಯರ ಜೀವನವನ್ನು ಬಹಳ ಕಷ್ಟಕರವಾಗಿಸುತ್ತದೆ. ಅಲ್ಲದೇ ಮನೆಯ ಸದಸ್ಯರಿಗೆ ಒಂದಲ್ಲಾ ಒಂದು ವ್ಯಾಧಿ ಕಾಡುತ್ತಲೇ ಇರಬಹುದು. ಇದರಿಂದ ಪರಿಹಾರ ಪಡೆಯಲು ಶುಭ ಚಿಹ್ನೆ, ಓಂ, ಗಣಪತಿ , ಶುಭ ಲಾಭ ಅಥವಾ ಮನೆಯ ಮುಖ್ಯ ದೇವತೆಯ ಹೆಸರನ್ನು ದ್ವಾರದಲ್ಲಿ ಬರೆಯಬೇಕು. ಇದರಿಂದ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುವುದು.

ಮನೆಯಲ್ಲಿ ಕನ್ನಡಿಯನ್ನು ಈ ದಿಕ್ಕಿನಲ್ಲಿಟ್ಟರೆ ಹಣದ ಸಮಸ್ಯೆಗಳು ಪರಿಹಾರ..!

​ಈ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳಿ

ವಾಸ್ತುಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಎಂದಿಗೂ ಬೂಟು ಅಥವಾ ಪಾದರಕ್ಷೆ ಧರಿಸಬೇಡಿ. ಇದು ತಾಯಿ ಅನ್ನಪೂರ್ಣದೇವಿಗೆ ಕೋಪವನ್ನುಂಟು ಮಾಡುವುದು. ಇದರಿಂದ ಮನೆಯಲ್ಲಿ ತೊಂದರೆಗಳು ಉಂಟಾಗುತ್ತದೆ. ಅಲ್ಲದೇ ಹಸು ಮೊದಲ ಆಹಾರವನ್ನು ಸೇವಿಸುವರೆಗೂ ಎಂದಿಗೂ ಆಹಾರ ಸೇವಿಸಬೇಡಿ.ಇಲ್ಲವಾದರೆ ಆರೋಗ್ಯ ಸಮಸ್ಯೆಗಳ ಜೊತೆಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ