ಆ್ಯಪ್ನಗರ

ಕಂಕಣ ಬಲಕ್ಕೆ ನಾಡಿದೋಷವೇ ಅಡ್ಡಿ..! ಇದಕ್ಕೆ ಪರಿಹಾರವೇನು..?

ವಧು-ವರರ ಕುಂಡಲಿಯನ್ನು ಹೊಂದಾಣಿಕೆಯಲ್ಲಿ ನಾಡಿ ದೋಷ ಕಂಡು ಬಂದರೆ ಅದನ್ನು ಅತ್ಯಂತ ಕೆಟ್ಟ ದೋಷವಾಗಿ ಪರಿಗಣಿಸಲಾಗುತ್ತದೆ. ವಧು ಅಥವಾ ವರನ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ಅಂಥವರು ಮದುವೆಯಾದರೆ ಮುಂದೆ ಸಂಗಾತಿಯೋರ್ವ ಸಾವಿಗೀಡಾಗಬಹುದು. ಹಾಗಾದರೆ ನಾಡಿ ದೋಷಕ್ಕೆ ಪರಿಹಾರವೇನು..? ನಾಡಿ ದೋಷವಿದ್ದವರನ್ನು ವಿವಾಹವಾಗಬಹುದೇ..?

Vijaya Karnataka Web 27 Apr 2021, 5:00 pm
ಹಿಂದೂ ಧರ್ಮದ ಪ್ರಕಾರ ವಿವಾಹ ಬಂಧವೊಂದನ್ನು ಬೆಸೆಯುವ ನಿರ್ಧಾರ ಕೈಗೊಳ್ಳುವಾಗ ಅಷ್ಟಗುಣಗಳ ಮಿಲನದಲ್ಲಿ ನಾಡಿ ಗುಣದ ಹೊಂದಾಣಿಕೆ ಅತ್ಯಂತ ಮಹತ್ವ ಪಡೆದಿದೆ. ವಧು-ವರರ ಕುಂಡಲಿಯನ್ನು ಹೊಂದಾಣಿಕೆಯಲ್ಲಿ ನಾಡಿ ದೋಷ ಕಂಡು ಬಂದರೆ ಅದನ್ನು ಅತ್ಯಂತ ಕೆಟ್ಟ ದೋಷವಾಗಿ ಪರಿಗಣಿಸಲಾಗುತ್ತದೆ. ಅಲ್ಲದೆ ಈ ದೋಷವು ಪ್ರಾಣಾಂತಿಕವೂ ಆಗಬಹುದು ಎನ್ನಲಾಗುತ್ತದೆ. ಅಂದರೆ ವಧು ಅಥವಾ ವರನ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ಅಂಥವರು ಮದುವೆಯಾದರೆ ಮುಂದೆ ಸಂಗಾತಿಯೋರ್ವ ಸಾವಿಗೀಡಾಗಬಹುದು. ಅಲ್ಲದೇ ಇದು ಸಂಗಾತಿಗಳಿಬ್ಬರಿಗೂ ತೊಂದರೆ ಉಂಟು ಮಾಡಬಹುದು.
Vijaya Karnataka Web here is a nadi dosha effects in kundali and its solution
ಕಂಕಣ ಬಲಕ್ಕೆ ನಾಡಿದೋಷವೇ ಅಡ್ಡಿ..! ಇದಕ್ಕೆ ಪರಿಹಾರವೇನು..?


​1. ನಾಡಿ ದೋಷವಿದ್ದರೂ ವಿವಾಹ ಆಗಬಹುದೇ..?

ಜಾತಕದಲ್ಲಿ ನಾಡಿ ದೋಷ ಕಂಡುಬಂದಲ್ಲಿ ಅಂಥ ವಿವಾಹಕ್ಕೆ ಸಾಮಾನ್ಯವಾಗಿ ಒಪ್ಪಿಗೆ ನೀಡಲಾಗುವುದಿಲ್ಲ. ವಧು-ವರರ ಜಾತಕದ ಅಷ್ಟ ಗುಣಗಳ ಪೈಕಿ ಎಲ್ಲವೂ ಹೊಂದಾಣಿಕೆಯಾಗಿದ್ದರೂ ನಾಡಿ ದೋಷವಿದ್ದರೆ ಅದು ಅನಿಷ್ಟ ಎಂದೇ ಪರಿಗಣಿಸಲಾಗುತ್ತದೆ ಎಂದು ನಾರದ ಪುರಾಣದಲ್ಲಿ ಹೇಳಲಾಗಿದೆ. ನಾಡಿ ದೋಷವಿದ್ದರೂ ಸಂಗಾತಿಗಳು ವಿವಾಹವಾದಲ್ಲಿ ಅವರ ಭವಿಷ್ಯ ಜೀವನ ನರಕವಾಗಬಹುದು ಅಥವಾ ಸತತ ಜಗಳಗಳಾಗಬಹುದು ಅಥವಾ ಆ ಸಂಬಂಧ ಬಹು ಬೇಗನೇ ಮುರಿದು ಹೋಗಬಹುದು. ಅಷ್ಟೇ ಅಲ್ಲ, ಇಬ್ಬರಲ್ಲೊಬ್ಬರ ಸಾವು ಸಹ ಸಂಭವಿಸಬಹುದು.

ಇಂದು ವಿಶೇಷ ಯೋಗ: ಈ 6 ರಾಶಿಗಳಿಗೆ ಲಕ್ಷ್ಮಿ ಆಶೀರ್ವಾದ ಮತ್ತು ಶುಭ ಲಾಭ..!

​2. ವಿವಾಹಕ್ಕೆ ಬೇಕು ಅಷ್ಟಕೂಟ ಮಿಲನ:

ನಾಡಿ ದೋಷದ ಕೆಟ್ಟ ಪರಿಣಾಮಗಳ ಬಗ್ಗೆ ನಾವು ಬಹಳವಾಗಿಯೇ ಕೇಳಿದ್ದೇವೆ. ಆದರೆ ನಿಜಕ್ಕೂ ನಾಡಿ ದೋಷದಿಂದ ಅಷ್ಟೆಲ್ಲ ಕೆಟ್ಟ ಪರಿಣಾಮಗಳಾಗುತ್ತವಾ ಅಥವಾ ಇದನ್ನು ಸುಖಾಸುಮ್ಮನೆ ಅತಿ ಕೆಟ್ಟದಾಗಿ ಬಿಂಬಿಸಲಾಗಿದೆಯಾ ಎಂಬುದನ್ನು ತಿಳಿಯಬೇಕು. ಆದರೆ ಇದನ್ನು ತಿಳಿಯಲು ನಾಡಿ ದೋಷದ ಅರ್ಥವೇನು ಹಾಗೂ ಕುಂಡಲಿಯಲ್ಲಿ ಇದು ಹೇಗೆ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ. ವಿವಾಹ ಬಂಧ ನಿರ್ಧರಿಸುವಾಗ ಸಂಗಾತಿಗಳ ಜಾತಕ ಗುಣಗಳ ಹೊಂದಾಣಿಕೆಯ ಎಂಟು ಗುಣಗಳ ಪೈಕಿ ನಾಡಿಯೂ ಒಂದಾಗಿದೆ. ಜಾತಕದ ಎಂಟು ಗುಣಗಳ ಹೊಂದಾಣಿಕೆಯನ್ನು ಅಷ್ಟಕೂಟ ಮಿಲನ ಎಂದು ಕರೆಯಲಾಗುತ್ತದೆ. ಈ ಅಷ್ಟಕೂಟ ಮಿಲನ ಗುಣಗಳು ಹೀಗಿವೆ- ವರ್ಣ, ವಾಶ್ಯ, ತಾರಾ, ಯೋನಿ, ಗೃಹ ಮೈತ್ರಿ, ಗಣ, ಭಕೂಟ ಮತ್ತು ನಾಡಿ.

ಇಷ್ಟರಲ್ಲೇ ಗೋಚರಿಸಲಿದೆ 2021ರ ಮೊದಲ ಚಂದ್ರಗ್ರಹಣ: ಏನು ಮಾಡಬೇಕು..? ಏನು ಮಾಡಬಾರದು..?

​3. ಮೂರು ವಿಧದ ನಾಡಿ ದೋಷಗಳು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ವಿಧದ ನಾಡಿ ದೋಷಗಳನ್ನು ಗುರುತಿಸಲಾಗಿದೆ. ಅವು ಹೀಗಿವೆ:

*ಆದಿ ನಾಡಿ: ವಿವಾಹ ಬಂಧನಕ್ಕೊಳಗಾಗಬಯಸುವ ಸಂಗಾತಿಯೊಬ್ಬರ ಜಾತಕದಲ್ಲಿ ಆದಿ ನಾಡಿ ದೋಷವಿದ್ದಲ್ಲಿ ಆ ಸಂಬಂಧವು ಬಹುಬೇಗನೆ ವಿಚ್ಛೇದನಕ್ಕೊಳಗಾಗುತ್ತದೆ ಎಂದು ವರಾಹಮಿಹಿರ ಶಾಸ್ತ್ರದಲ್ಲಿ ಹೇಳಲಾಗಿದೆ.

*ಮಧ್ಯ ನಾಡಿ: ಮಧ್ಯ ನಾಡಿ ದೋಷದಿಂದ ಓರ್ವ ಅಥವಾ ಇಬ್ಬರೂ ಸಂಗಾತಿಗಳ ಮರಣ ಸಂಭವಿಸಬಹುದು ಅಥವಾ ಜೀವನದಲ್ಲಿ ಮುಗಿಯಲಾಗದ ಕಷ್ಟ ಕೋಟಲೆಗಳನ್ನು ಅನುಭವಿಸಬೇಕಾಗಿ ಬರಬಹುದು.

*ಅಂತ್ಯ ನಾಡಿ ದೋಷ: ಈ ವಿಧದ ನಾಡಿ ದೋಷದಿಂದ ಸಂಗಾತಿಗಳ ವೈವಾಹಿಕ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲವೊಮ್ಮೆ ಸಂಗಾತಿಯೊಬ್ಬರ ಸಾವು ಸಂಭವಿಸಬಹುದು.

Vara Bhavishya: ಏಪ್ರಿಲ್‌ 26 ರಿಂದ ಮೇ 2 ರವರೆಗೆ ನಿಮ್ಮ ರಾಶಿ ಫಲಾಫಲ ಹೇಗಿದೆ..?

​4. ಚಂದ್ರ ಹಾಗೂ ನಕ್ಷತ್ರಗಳೇ ನಾಡಿ ಗುರುತಿಗೆ ಆಧಾರ:

ವ್ಯಕ್ತಿಯೊಬ್ಬನ ಜನ್ಮ ಕುಂಡಲಿಯಲ್ಲಿ ಚಂದ್ರನಿರುವ ನಕ್ಷತ್ರದ ಆಧಾರದ ಮೇಲೆ ಆ ವ್ಯಕ್ತಿಯ ನಾಡಿಯನ್ನು ಗುರುತಿಸಲಾಗುತ್ತದೆ. ಒಟ್ಟು ೨೭ ನಕ್ಷತ್ರಗಳಿದ್ದು ಇವುಗಳ ಮೂಲಕವೇ ಒಟ್ಟು ಮೂರು ವಿಧದ ನಾಡಿಗಳನ್ನು ಗುರುತಿಸಲಾಗುತ್ತದೆ. ಒಟ್ಟು ೨೭ ನಕ್ಷತ್ರಗಳ ಪೈಕಿ ಕುಂಡಲಿಯಲ್ಲಿ ವಿಶೇಷ ೯ ನಕ್ಷತ್ರಗಳ ಗುಂಪಿನಲ್ಲಿ ಚಂದ್ರನ ಇರುವಿಕೆಯು ಆ ವ್ಯಕ್ತಿಯ ನಾಡಿಯನ್ನು ಸೂಚಿಸುತ್ತದೆ.

ವಾಸ್ತು ಪ್ರಕಾರ ಪೂಜಾ ಕೋಣೆಯ ವಿನ್ಯಾಸ ಹೇಗಿರಬೇಕು..? ಪೂಜಾ ಕೋಣೆ ಹೀಗಿರಲಿ..

​5. ಸಂಗಾತಿಗಳ ನಾಡಿ ಬೇರೆಯಾಗಿದ್ದರೆ ಅದು ಶುಭ:

ವಿವಾಹ ಸಮಯದಲ್ಲಿ ಕುಂಡಲಿ ನೋಡುವಾಗ ಸಂಗಾತಿಗಳಿಬ್ಬರ ನಾಡಿಗಳು ಬೇರೆ ಬೇರೆಯಾಗಿದ್ದರೆ ಅಂಥವರ ವಿವಾಹ ಸಂಬಂಧ ಏರ್ಪಡಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ: ವರನು ಆದಿ ನಾಡಿ ಹೊಂದಿದ್ದು, ವಧು ಮಧ್ಯ ಮತ್ತು ಅಂತ್ಯ ನಾಡಿ ಹೊಂದಿದ್ದರೆ ಅದನ್ನು ಅತ್ಯಂತ ಸೂಕ್ತ ಜೋಡಿ ಎಂದು ಹೇಳಲಾಗುತ್ತದೆ. ಆದರೆ ಇಬ್ಬರ ನಾಡಿಯೂ ಒಂದೇ ಆಗಿದ್ದಲ್ಲಿ ಅಂಥ ಸಂಬಂಧವನ್ನು ಬೆಸೆಯುವುದು ನಿಷಿದ್ಧ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇಬ್ಬರ ನಾಡಿಯೂ ಒಂದೇ ಆಗಿದ್ದಾಗ ಅಂಥ ಕುಂಡಲಿಯ ಗುಣ ಹೊಂದಾಣಿಕೆ ಸ್ಕೋರ್ ಸೊನ್ನೆ ಆಗಿದ್ದು, ಅದನ್ನು ನಾಡಿ ದೋಷ ಎನ್ನಲಾಗುತ್ತದೆ.

2021 ರಲ್ಲಿ ಯಾವ ರಾಶಿಯವರು ಎಲ್ಲಿಗೆ ಪ್ರವಾಸ ಮಾಡಬೇಕು..? ರಾಶಿಗನುಗುಣವಾಗಿ ಪ್ರವಾಸ ಮಾಡಿ..

​6. ನಾಡಿ ದೋಷದ ವಿನಾಯಿತಿ ಹಾಗೂ ಪರಿಹಾರೋಪಾಯಗಳು:

ನಾಡಿ ದೋಷಕ್ಕೂ ಕೆಲ ವಿನಾಯಿತಿಗಳಿವೆ. ಅಂದರೆ ಕುಂಡಲಿಯ ಇತರ ಗುಣಗಳು ಹೊಂದಾಣಿಕೆಯಾದಾಗ ನಾಡಿ ದೋಷಕ್ಕೆ ವಿನಾಯಿತಿ ಪಡೆಯಬಹುದು. ಯಾವೆಲ್ಲ ಸಂದರ್ಭಗಳಲ್ಲಿ ಈ ಪರಿಹಾರ ಕ್ರಮಗಳನ್ನು ಅನ್ವಯಿಸಬಹುದು ಎಂಬ ಅಂಶಗಳು ಹೀಗಿವೆ:

*ಪುರುಷ ಹಾಗೂ ಮಹಿಳಾ ಸಂಗಾತಿಗಳು ಒಂದೇ ನಕ್ಷತ್ರ ಹಾಗೂ ಭಿನ್ನ ಚರಣಗಳಲ್ಲಿ ಹುಟ್ಟಿದ್ದು, ಆಗ ನಾಡಿ ದೋಷವಿದ್ದರೂ ಅದನ್ನು ವಿನಾಯಿತಿಯಾಗಿ ಪರಿಗಣಿಸಬಹುದು.

*ಹೆಣ್ಣು ಹಾಗೂ ಗಂಡಿನ ಜನ್ಮ ರಾಶಿ ಒಂದೇ ಆಗಿದ್ದು, ನಕ್ಷತ್ರಗಳು ಭಿನ್ನವಾಗಿದ್ದಾಗ ಸಹ ಅದನ್ನು ನಾಡಿದೋಷದ ವಿನಾಯಿತಿಯಾಗಿ ಪರಿಗಣಿಸಲಾಗುತ್ತದೆ.

*ಹೆಣ್ಣು ಹಾಗೂ ಗಂಡು ಒಂದೇ ಜನ್ಮ ನಕ್ಷತ್ರ ಹಾಗೂ ಭಿನ್ನ ಜನ್ಮ ರಾಶಿಗಳನ್ನು ಹೊಂದಿದ್ದಾಗ ಕೂಡ ಅದನ್ನು ನಾಡಿ ದೋಷದ ವಿನಾಯಿತಿ ಎಂದು ಹೇಳಲಾಗುತ್ತದೆ. (ವಧುವಿನ ಜನ್ಮ ಚರಣ ಮತ್ತು ಜನ್ಮ ರಾಶಿಗಳು ವರನಿಗಿಂತ ಮುಂಚಿನದ್ದಾಗಿರಬಾರದು).

*ಹನ್ನೆರಡೂವರೆ ಲಕ್ಷ ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ನಾಡಿ ದೋಷದ ದುಷ್ಪರಿಣಾಮ ಕಡಿಮೆಯಾಗಿ ಸಂಗಾತಿಯೊಂದಿಗೆ ಉತ್ತಮ ವೈವಾಹಿಕ ಜೀವನ ನಡೆಸಲು ಸಾಧ್ಯವಾಗುತ್ತದೆ.

*ವಿವಾಹವಾಗಲು ಬಯಸುವ ಸಂಗಾತಿಗಳಿಬ್ಬರ ಕುಂಡಲಿಯಲ್ಲಿ ನಾಡಿ ದೋಷ ಕಂಡು ಬಂದಲ್ಲಿ, ವಿವಾಹವಾಗಲಿರುವ ಹೆಣ್ಣಿನ ಮದುವೆಯನ್ನು ಮೊದಲಿಗೆ ಮಹಾವಿಷ್ಣುವಿನ ಮೂರ್ತಿಯೊಂದಿಗೆ ನೆರವೇರಿಸಬೇಕು. ನಂತರವಷ್ಟೇ ಆಕೆಯನ್ನು ವರನೊಂದಿಗೆ ವಿವಾಹ ಮಾಡಿಸಬೇಕು.

*ಕುಂಡಲಿಯಲ್ಲಿನ ನಾಡಿದೋಷದಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳುಂಟಾಗಿದ್ದರೆ ಆಕೆ/ ಆತ ಚಿನ್ನ, ಬಟ್ಟೆ ಹಾಗೂ ಧಾನ್ಯಗಳನ್ನು ದಾನ ಮಾಡುವ ಮೂಲಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

*ಚಿನ್ನದ ಸರ್ಪದ ಮೂರ್ತಿಯನ್ನು ಮಾಡಿ ಅದನ್ನು ಸೂಕ್ತ ವಿಧಿವಿಧಾನಗಳೊಂದಿಗೆ ಪೂಜಿಸುವುದರಿಂದ ಹಾಗೂ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದ ನಾಡಿ ದೋಷವನ್ನು ದೂರ ಮಾಡಬಹುದು.

2021ರ ಮೊದಲ ಚಂದ್ರ ಗ್ರಹಣ: ಈ ಚಂದ್ರ ಗ್ರಹಣದ ಪ್ರಭಾವವೇನು..? ಇಲ್ಲಿದೆ ವಿವರ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ