ಆ್ಯಪ್ನಗರ

ಗೋಮತಿ ನದಿಯಲ್ಲಿ ಸಿಗುವ ಈ ಚಕ್ರವನ್ನು ಮನೆಯಲ್ಲಿಟ್ಟರೆ ಹಣಕಾಸಿನ ಸಮಸ್ಯೆಯೇ ಬರದು..!

ಜ್ಯೋತಿಷಿಗಳ ಪ್ರಕಾರ ಗೋಮತಿ ಚಕ್ರವನ್ನು ಇಟ್ಟುಕೊಳ್ಳುವ ಮನೆ ಎಲ್ಲಾ ತೊಂದರೆಗಳಿಂದ ದೂರವಿರುತ್ತದೆ. ಇದು ಎಲ್ಲಾ ನಕಾರಾತ್ಮಕತೆ, ಅನಾರೋಗ್ಯ ಮತ್ತು ದುಃಖವನ್ನು ತೆಗೆದುಹಾಕಿ, ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

Vijaya Karnataka Web 19 Aug 2020, 1:26 pm
ಗೋಮತಿ ಚಕ್ರವು ಚಿಪ್ಪನ್ನು ಹೋಲುವಂತಹ ಕಲ್ಲು ಇದು, ಗೋಮತಿ ನದಿಯಲ್ಲಿ ಮಾತ್ರವೇ ಕಂಡುಬರುತ್ತದೆ. ಸಾಮಾನ್ಯವಾಗಿ ಇದನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಗೋಮತಿ ಚಕ್ರವನ್ನು ಸುದರ್ಶನ ಚಕ್ರವೆಂದೂ ಕರೆಯುತ್ತಾರೆ. ಇದು ಶ್ರೀಕೃಷ್ಣನ ಶಕ್ತಿಶಾಲಿ ಅಸ್ತ್ರವೆಂಬ ನಂಬಿಕೆ ಇದೆ. ಇದನ್ನು ಅತ್ಯಂತ ಶಕ್ತಿಶಾಲಿಯೆಂದೂ ಪರಿಗಣಿಸಲಾಗುತ್ತದೆ. ವಿಶೇಷವಾಗಿ ಈ ಕಲ್ಲು ನಂಬಲಾಗದಿರುವಂತಹ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಈ ಕಲ್ಲನ್ನು ಪೂಜೆಯ ಹೊರತಾಗಿ ತಂತ್ರ ಮಂತ್ರಗಳಲ್ಲೂ ಬಳಸಲಾಗುತ್ತದೆ. ಈ ಗೋಮತಿ ಚಕ್ರವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಎಲ್ಲಾ ಸಮಸ್ಯೆಗಳನ್ನು ತೊಡೆದು ಹಾಕಬಹುದುದೆಂದು ಹೇಳಲಾಗುತ್ತದೆ. ಈ ಕಲ್ಲಿನ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
Vijaya Karnataka Web importance and benefits of gomati chakra in astrological remedies
ಗೋಮತಿ ನದಿಯಲ್ಲಿ ಸಿಗುವ ಈ ಚಕ್ರವನ್ನು ಮನೆಯಲ್ಲಿಟ್ಟರೆ ಹಣಕಾಸಿನ ಸಮಸ್ಯೆಯೇ ಬರದು..!


​ಹೆಚ್ಚಿನ ಆದಾಯ ಗಳಿಸಲು

ನೀವು ಹೆಚ್ಚು ಖರ್ಚು ಮತ್ತು ಕಡಿಮೆ ಲಾಭವನ್ನು ಪಡೆಯುತ್ತಿದ್ದರೆ, ಅಥವಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬೇಗನೆ ಖರ್ಚು ಮಾಡಿದರೆ ಗೋಮತಿ ಚಕ್ರದ ಪರಿಹಾರವನ್ನು ಮಾಡಬಹುದು. ಯಾವುದೇ ತಿಂಗಳ ಮೊದಲ ಶುಕ್ರವಾರದಂದು 11 ಅಭಿಮಂತ್ರಿ ಗೋಮತಿ ಚಕ್ರವನ್ನು ತೆಗೆದುಕೊಂಡು ಹಳದಿ ಬಟ್ಟೆಯಲ್ಲಿ ತೆಗೆದುಕೊಂಡು ಲಕ್ಷ್ಮೀ ದೇವಿಯನ್ನು ಪೂಜಿಸಿ. ಮರುದಿನ ಆ ಹಳದಿ ಬಟ್ಟೆಯಿಂದ 4 ಗೋಮತಿ ಚಕ್ರವನ್ನು ತೆಗದುಕೊಂಡುಮನೆಯ ನಾಲ್ಕು ಮೂಲೆಗಳಲ್ಲಿ ಇರಿಸಿ.

ಉಳಿದ ಚಕ್ರಗಳಲ್ಲಿ ಮೂರನ್ನು ತೆಗೆದುಕೊಂಡು ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಲಾಕರ್‌ನಲ್ಲಿ ಇರಿಸಿ. ಉಳಿದಂತಹ ನಾಲ್ಕು ಗೋಮತಿ ಚಕ್ರಗಳನ್ನು ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ, ದೇವಸ್ಥಾನಕ್ಕೆ ನೀಡಿ. ಈ ಪರಿಹಾರ ನಿಮಗೆ ಹಣಕಾಸಿನ ಪ್ರಯೋಜನವನ್ನು ನೀಡುವುದಲ್ಲದೇ, ಅತಿಯಾದ ಖರ್ಚನ್ನು ಕೊನೆಗೊಳಿಸುತ್ತದೆ.

ಚಿನ್ನ, ಬೆಳ್ಳಿ ಅಥವಾ ತಾಮ್ರದ ಕಡಗವನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

​ಆರ್ಥಿಕ ಲಾಭಕ್ಕಾಗಿ ಗೋಮತಿ ಚಕ್ರ

ನೀವು ಹಣಕಾಸಿನ ಸಮಸ್ಯೆಯಿಂದ ಬೇಸತ್ತಿದ್ದರೆ ಈ ಸಮಸ್ಯೆಯನ್ನು ನಿವಾರಿಸಲು ಯಾವುದೇ ತಿಂಗಳ ಮೊದಲ ಸೋಮವಾರ 11 ಅಭಿಮಂತಿ ಗೋಮತಿ ಚಕ್ರಗಳನ್ನು ತೆಗೆದುಕೊಂಡು, ಅದಕ್ಕೆ ಅರಿಶಿಣದಿಂದ ತಿಲಕವನ್ನು ಹಚ್ಚಿ ನಂತರ ಶಿವನ ನಾಮಸ್ಮರಣೆ ಮಾಡುತ್ತಾ ಹಳದಿ ಬಟ್ಟೆಯಲ್ಲಿ ಕಟ್ಟಿ, ಮನೆಯ ಸುತ್ತ ಒಂದು ಪ್ರದಕ್ಷಿಣೆ ಬಂದು ನಂತರ ಇದನ್ನು ಹರಿಯುವ ನೀರಿನಲ್ಲಿ ನಿಧಾನವಾಗಿ ವಿಸರ್ಜಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಆರ್ಥಿಕ ಸಮಸ್ಯೆ ನಿವಾರಣೆಯಾಗುವುದು.

​ಕೆಟ್ಟ ದೃಷ್ಟಿ ನಿವಾರಣೆಗೆ ಗೋಮತಿ ಚಕ್ರ

ಗೋಮತಿ ಚಕ್ರವು ಅತ್ಯಂತ ಶುಭವಾಗಿದೆ. ಈ ಕಲ್ಲಿನ ಸಕಾರಾತ್ಮಕ ಶಕ್ತಿಯು ನಕಾರಾತ್ಮಕತೆಯನ್ನು ನಿವಾರಿಸುತ್ತದೆ. ದುಷ್ಟಶಕ್ತಿಯನ್ನು ನಿಯಂತ್ರಿಸುತ್ತದೆ. ಕುಟುಂಬದಲ್ಲಿ ಯಾರಾದರೂ ಕೆಟ್ಟದೃಷ್ಟಿಯಿಂದಾಗಿ ಬಳಲುತ್ತಿದ್ದರೆ ಈ ಗೋಮತಿ ಚಕ್ರದ ಸಹಾಯ ಪಡೆಯಬಹುದು. ಮೂರು ಗೋಮತಿ ಚಕ್ರವನ್ನು ಯಾರೂ ಇರದ ಸ್ಥಳಕ್ಕೆ ತೆಗೆದುಕೊಂಡು ಹೋಗಿ, ಆ ಚಕ್ರದಿಂದ ದೇಹವನ್ನು ನಿವಾಳಿಸಿ, ಅದನ್ನು ನಿಮ್ಮ ಹಿಂದಕ್ಕೆ ಎಸೆಯಬೇಕು. ಈ ಪರಿಹಾರದಿಂದ ಶೀಘ್ರವೇ ಮುಕ್ತಿ ಪಡೆಯಬಹುದು. ಆದರೆ ಗೋಮತಿ ಚಕ್ರವನ್ನು ಹಿಂದಕ್ಕೆ ಎಸೆಯುವಾಗ ಹಿಂದೆ ತಿರುಗಿ ನೋಡಬಾರದು. ಚಿಕ್ಕ ಮಕ್ಕಳಿಗೆ ಕೂಡ ಇದೇ ರೀತಿಯಾಗಿ ದೃಷ್ಟಿ ತೆಗೆಯಬಹುದು.

ಫೆಂಗ್‌ ಶೂಯಿ ಟಿಪ್ಸ್: ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದರೆ ಅದೃಷ್ಟ ನೆಲೆಸುವುದು ಖಂಡಿತಾ..!

​ಅವ್ಯಕ್ತ ಭಯವನ್ನು ತೆಗೆದು ಹಾಕಲು

ನಿಮ್ಮ ಮಗು ಸುಮ್ಮನೇ ಕೆಲವೊಂದು ವಿಷಯಗಳಿಗೆ ಹೆದರುತ್ತಿದ್ದರೆ ಗೋಮತಿ ಚಕ್ರದ ಪರಿಹಾರವು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಪರಿಹಾರವನ್ನು ಯಾವುದೇ ತಿಂಗಳ ಮೊದಲ ಮಂಗಳವಾರ ಮಾಡಬಹುದು. ಗೋಮತಿ ಚಕ್ರವನ್ನು ತೆಗೆದುಕೊಂಡು ಹನುಮಂತನ ಬಲಭುಜದಿಂದ ಸಿಂಧೂರವನ್ನು ತೆಗೆದುಕೊಂಡು ಅದನ್ನು ಗೋಮತಿ ಚಕ್ರಕ್ಕೆ ಹಚ್ಚಿ, ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮಗುವಿನ ಕುತ್ತಿಗೆಗೆ ಹಾಕಿ. ಇದನ್ನು ಧರಿಸುವುದರಿಂದ ಮಗುವಿನ ಭಯ ದೂರವಾಗುತ್ತದೆ.

ಅನಾರೋಗ್ಯಕ್ಕೂ ಗೋಮತಿ ಚಕ್ರ

ಗೋಮತಿ ಚಕ್ರವು ಎಲ್ಲಾ ರೀತಿಯ ಖಾಯಿಲೆಯನ್ನೂ ದೂರವಿಡುತ್ತದೆ. ನಿಮ್ಮ ಕುಟುಂಬದ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಈ ಚಕ್ರವನ್ನು ಬಳಸಬಹುದು.ಇದು ಅತ್ಯಂತ ಸುಲಭವಾದ ಪರಿಹಾರವಾಗಿದ್ದು, ಇದರಿಂದ ಆರೋಗ್ಯಕರ ಜೀವನವನ್ನು ಪಡೆಯಬಹುದು. ಅನಾರೋಗ್ಯವಿರುವ ವ್ಯಕ್ತಿಯ ಹಾಸಿಗೆಯ ಕೆಳಗೆ ಬೆಳ್ಳಿ ಗೋಮತಿ ಚಕ್ರವನ್ನು ಕಟ್ಟಿ. ಇದರ ಶಕ್ತಿಯಿಂದ ರೋಗಗಳು ಗುಣವಾಗುತ್ತವೆ. ಕ್ರಮೇಣ ಅವರ ಅರೋಗ್ಯದಲ್ಲಿ ಬದಲಾವಣೆಯನ್ನು ನೀವು ಗಮನಿಸಬಹುದು. ಗೋಮತಿ ಚಕ್ರವು ಸಮೃದ್ಧಿ ಮತ್ತು ಆರೋಗ್ಯವನ್ನು ನೀಡುತ್ತದೆ.

ತಪ್ಪಿಯೂ ಈ ವಸ್ತುಗಳನ್ನು ಇತರರಿಂದ ಕೇಳಿ ಪಡೆಯದಿರಿ, ಆರ್ಥಿಕ ಸಮಸ್ಯೆ ಉಂಟಾಗಬಹುದು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ